ಆ್ಯಪ್ನಗರ

ಅರಣ್ಯ ನಿವಾಸಿಗರ ತೆರವಿಗೆ ಸುಪ್ರೀಂ ಆದೇಶ

ಅರಣ್ಯ ಹಕ್ಕು ಕಾಯಿದೆ ಅನುಸಾರ 2005, ಡಿಸೆಂಬರ್‌ 31ಕ್ಕೆ ಮೊದಲು ಕನಿಷ್ಠ ಮೂರು ತಲೆಮಾರುಗಳಿಂದ ಕಾಡಿನಲ್ಲಿ ವಾಸವಿರುವವರು ಮಾತ್ರವೇ ಭೂಮಿ ಹಕ್ಕುಗಳಿಗೆ ಅರ್ಹರಾಗಿದ್ದಾರೆ.

Vijaya Karnataka 22 Feb 2019, 5:00 am
ಹೊಸದಿಲ್ಲಿ: ದೇಶಾದ್ಯಂತ ಕಾಡುಗಳಲ್ಲಿ ವಾಸಿಸುವ ಹತ್ತು ಲಕ್ಷ ಕ್ಕೂ ಹೆಚ್ಚಿನ ಬುಡಕಟ್ಟು ಮತ್ತು ಆದಿವಾಸಿ ಕುಟುಂಬಗಳನ್ನು ಕಾಡಿನಿಂದ ಹೊರಹಾಕಲು ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದೆ. ಈ ಕುರಿತು ರಾಜ್ಯಗಳು ಸಲ್ಲಿಸಿದ್ದ ಅಫಿಡವಿಟ್‌ ವಿಚಾರಣೆ ನಡೆಸಿದ ನ್ಯಾಯಾಲಯ ಸುಮಾರು 11,72,931 ಪರಿಶಿಷ್ಟ ಪಂಗಡ, ಇತರೆ ಬುಡಕಟ್ಟು ಅರಣ್ಯ ನಿವಾಸಿಗಳ ಭೂ ಮಾಲೀಕತ್ವ ಹಕ್ಕುಗಳನ್ನು ತಿರಸ್ಕರಿಸಿದೆ.
Vijaya Karnataka Web tribels


ಅರಣ್ಯ ಹಕ್ಕು ಕಾಯಿದೆ ಅನುಸಾರ 2005, ಡಿಸೆಂಬರ್‌ 31ಕ್ಕೆ ಮೊದಲು ಕನಿಷ್ಠ ಮೂರು ತಲೆಮಾರುಗಳಿಂದ ಕಾಡಿನಲ್ಲಿ ವಾಸವಿರುವವರು ಮಾತ್ರವೇ ಭೂಮಿ ಹಕ್ಕುಗಳಿಗೆ ಅರ್ಹರಾಗಿದ್ದಾರೆ. ಈ ಕುರಿತು ನೀಡಿದ ಆದೇಶದಲ್ಲಿ ನ್ಯಾಯಾಲಯವು 17 ರಾಜ್ಯ ಸರ್ಕಾರಗಳಿಗೆ ತಮ್ಮ ವ್ಯಾಪ್ತಿಯಲ್ಲಿನ ಅರಣ್ಯವಾಸಿಗಳನ್ನು ಬರುವ ಜುಲೈ 12ರೊಳಗೆ ತೆರವುಗೊಳಿಸಲು ಆದೇಶಿಸಿದೆ. ಅವರನ್ನು ಒಕ್ಕಲೆಬ್ಬಿಸಿದ ನಂತರ ಪುರಾವೆಯಾಗಿ ಉಪಗ್ರಹ ಆಧಾರಿತ ಚಿತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಿದೆ.

ಆದೇಶಕ್ಕೆ ಒಳಪಟ್ಟ 17 ರಾಜ್ಯಗಳ ಪೈಕಿ ಶೇ.20ರಷ್ಟು ಅರಣ್ಯ ವಾಸಿಗಳು ಮಧ್ಯಪ್ರದೇಶ, ಕರ್ನಾಟಕ ಮತ್ತು ಒಡಿಶಾ ರಾಜ್ಯಗಳಲ್ಲಿದ್ದಾರೆ. ಇವರು ತಾವು ವಾಸಿಸುವ ಭೂಮಿಯ ಮೇಲಿನ ಹಕ್ಕಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ