ಆ್ಯಪ್ನಗರ

ಎಸ್ಸಿ/ಎಸ್ಟಿ ಕಾಯಿದೆ ತೀರ್ಪು ಪರಿಶೀಲನೆ ಮನವಿ ಸುಪ್ರೀಂ ತ್ರಿಸದಸ್ಯ ಪೀಠಕ್ಕೆ

ಸುಪ್ರೀಂಕೋರ್ಟ್‌ 2018ರ ಮಾರ್ಚ್ 20ರಂದು ನೀಡಿದ್ದ ಎಸ್ಸಿ/ಎಸ್ಟಿ ಕಾಯಿದೆಯ ತೀರ್ಪಿನ ಕೆಲವು ನಿಯಮಗಳು ಸಮಸ್ಯಾತ್ಮವಾಗಿವೆ. ಈ ಹಿನ್ನಲೆಯಲ್ಲಿತೀರ್ಪು ಮರುಪರಿಶೀಲನೆ ನಡೆಸಬೇಕೆಂದು ಕೇಂದ್ರ ಸರಕಾರ ಮೇಲ್ಮನವಿ ಸಲ್ಲಿಸಿತ್ತು.

PTI 14 Sep 2019, 5:00 am
ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯಿದೆಯಲ್ಲಿ ಕೆಲವು ನಿಯಮಗಳನ್ನು ಸಡಿಲಗೊಳಿಸಿ ಸುಪ್ರೀಂ ಕೋರ್ಟ್‌ 2018ರಲ್ಲಿನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರಕಾರ ಸಲ್ಲಿಸಿರುವ ಮನವಿಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ.
Vijaya Karnataka Web supreme


ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಮತ್ತು ಯು.ಯು.ಲಲಿತ್‌ ಅವರನ್ನು ಒಳಗೊಂಡ ಪೀಠವು, ಮುಂದಿನವಾರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಸಲ್ಲಿಸುವಂತೆ ಶುಕ್ರವಾರ ಕೇಂದ್ರ ಸರಕಾರಕ್ಕೆ ತಿಳಿಸಿದೆ.

ಸುಪ್ರೀಂಕೋರ್ಟ್‌ 2018ರ ಮಾರ್ಚ್ 20ರಂದು ನೀಡಿದ್ದ ಎಸ್ಸಿ/ಎಸ್ಟಿ ಕಾಯಿದೆಯ ತೀರ್ಪಿನ ಕೆಲವು ನಿಯಮಗಳು ಸಮಸ್ಯಾತ್ಮವಾಗಿವೆ. ಈ ಹಿನ್ನಲೆಯಲ್ಲಿತೀರ್ಪು ಮರುಪರಿಶೀಲನೆ ನಡೆಸಬೇಕೆಂದು ಕೇಂದ್ರ ಸರಕಾರ ಮೇಲ್ಮನವಿ ಸಲ್ಲಿಸಿತ್ತು. ದೇಶದಲ್ಲಿನ ಕಾನೂನುಗಳು ಜಾತಿ ಪಕ್ಷಪಾತ ಹೊಂದಿರಬಾರದು ಮತ್ತು ಏಕರೂಪವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್‌, ಕಳೆದ ಮೇ 1ರಂದು ತೀರ್ಪುನ್ನು ಕಾಯ್ದಿರಿಸಿತ್ತು. ''ಸರಕಾರಿ ನೌಕರರ ವಿರುದ್ಧ ಎಸ್ಸಿ/ಎಸ್ಟಿ ಕಾಯಿದೆಯನ್ನು ವ್ಯಾಪಕವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈ ಕಾನೂನು ಮುಗ್ಧರ ವಿರುದ್ಧ ಬಳಕೆಯಾಗುತ್ತಿದೆ ಎಂದು ತಿಳಿಸಿ, ಈ ಕಾನೂನಿನ ಅಡಿ ದೂರು ದಾಖಲಾದರೆ ತಕ್ಷಣ ಯಾರನ್ನೂ ಬಂಧಿಸುವಂತಿಲ್ಲ,'' ಎಂದು ಸುಪ್ರೀಂ ಕೋರ್ಟ್‌ 2018ರ ತೀರ್ಪಿನಲ್ಲಿಹೇಳಿತ್ತು.

ಕೋರ್ಟ್‌ ತೀರ್ಪಿನ ಬಳಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳಿಂದ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆದಿತ್ತು. ಸರಕಾರ ಈ ವಿಚಾರದಲ್ಲಿಸೂಕ್ತ ಕ್ರಮ ಕೈಗೊಂಡು ಕಾಯಿದೆಯ ಮೂಲ ಸ್ವರೂಪವನ್ನು ಉಳಿಸಿಬೇಕೆಂದು ಆಗ್ರಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿಸರಕಾರ ಕಾಯಿದೆಗೆ ಪರಿಷ್ಕರಣೆ ತಂದು ಅದನ್ನು ಮೂಲ ನಿಯಮಗಳನ್ನು ಪುನರ್‌ಸ್ಥಾಪನೆ ಮಾಡಿದೆ. ಅಲ್ಲದೆ, ಸುಪ್ರೀಂ ಕೋರ್ಟ್‌ ಈ ಸಂಬಂಧ ತನ್ನ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೇಂದ್ರ ಸರಕಾರ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್‌ ಈ ತೀರ್ಪು ಕಾಯ್ದಿರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ