ಆ್ಯಪ್ನಗರ

ಅಯೋಧ್ಯೆ ವಿಚಾರಣೆ ಅ.18ಕ್ಕೆ ಅಂತ್ಯ: ಗಡುವು ನಿಗದಿಗೊಳಿಸಿದ ಸುಪ್ರೀಂ

ಹಲವು ದಶಕಗಳಿಂದಲೂ ಸಮಸ್ಯೆಯಾಗಿಯೇ ಉಳಿದಿರುವ ಅಯೋಧ್ಯೆ ರಾಮಜನ್ಮಭೂಮಿ ಹಂಚಿಕೆ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಪ್ರಕರಣದ ವಿಚಾರಣೆ ಅ.18ರೊಳಗೆ ಅಂತ್ಯವಾಗಬೇಕು ಎಂದು ಸುಪ್ರೀಂ ಅಂತಿಮ ಗಡುವು ವಿಧಿಸಿದೆ.

TIMESOFINDIA.COM 18 Sep 2019, 12:38 pm
ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿಗೆ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟ್‌ ಬುಧವಾರ ಅಂತಿಮ ಗಡುವು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಕಕ್ಷದಾರರು ಅಕ್ಟೋಬರ್‌ 18ರೊಳಗೆ ತಮ್ಮ ವಾದಗಳನ್ನು ಪೂರ್ಣಗೊಳ್ಳಬೇಕು ಎಂದು ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಮತೆ ಆಗಸ್ಟ್‌ 6ರಿಂದಲೂ ಪ್ರತಿದಿನ ವಿಚಾರಣೆ ನಡೆಯುತ್ತಿದ್ದು, 26ನೇ ದಿನಂದು ಉಭಯ ಪಕ್ಷದವರೂ ತಮ್ಮ ವಾದಮಮಡನೆಯ ವೇಳಾಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಇದಾದ ನಂತರ ಕೋರ್ಟ್ ಪ್ರಕರಣದ ವಿಚಾರಣೆಗೆ ಅ.18ನ್ನು ಅಂತಿಮ ದಿನವಾಗಿ ನಿಗದಿ ಮಾಡಿದೆ.
Vijaya Karnataka Web supeme court


ಅ.18ರೊಳಗೆ ವಿಚಾರಣೆಯನ್ನು ಪುರ್ಣಗೊಳಿಸಲು ನಾವೆಲ್ಲ ಒಗ್ಗಟ್ಟಿನ ಶ್ರಮ ಹಾಕೋಣ. ಒಂದು ವೇಳೆ ಅ.18ರ ಅಂತ್ಯಕ್ಕೆ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಸುಪ್ರೀ ಕೋರ್ಟ್‌ ವಿಚಾರಣೆಯನ್ನು 1 ಗಂಟೆಗಳ ಅವಧಿಗೆ ವಿಸ್ತರಿಸಬಹುದು. ಅಥವಾ ಅ.19ರಂದು ಶನಿವಾರ ಕೂಡ ವಿಚಾರಣೆ ಮುಂದುವರಿಸಬಹುದು ಎಂದು ಮುಖ್ಯ ನಾಯಮೂರ್ತಿ ರಂಜನ್‌ ಗೊಗೋಯ್ ತಿಳಿದ್ದಾರೆ.

ಆಯೋಧ್ಯೆ ಪ್ರಕರಣದ ದಿನನಿತ್ಯದ ನಡಾವಳಿಗಳು ಎಂದಿನಂತೆಯೇ ಸಾಗಿವೆ. ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಪ್ರಕರಣದ ನಡಾವಳಿಗಳ ಗೌಪ್ಯತೆ ಕಾಪಾಡಲಾಗಿದೆ ಎಂದು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯ್‌ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ನಿವೃತ್ತ ನ್ಯಾಯಮೂರ್ತಿ ಎಂ.ಐ. ಖಲೀಫುಲ್ಲಾ ನೇತೃತ್ವದ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿಕತಿಯನ್ನು ರಚಿಸಲಾಗಿತ್ತು. ಆದರೆ, ಕೆಲವೊಂದು ಪಕ್ಷಗಳು ಸಂಧಾನ ಸಮಿತಿಗೆ ವಿರೋಧ ವ್ಯಕ್ತಪಡಿಸಿದ್ದವು. ಇದರಿಂದ ಈ ಸಮಿತಿ ಸಂದಾನದ ಮೂಲಕ ಪ್ರಕರಣ ಇತ್ಯರ್ಥಪಡಿಸುವಲ್ಲಿ ವಿಫಲವಾಗಿತ್ತು. ಇದೀಗ, ಮತ್ತೆ ಈ ಸಮಿತಿಯು ಸುಪ್ರೀಕೋರ್ಟ್‌ಗೆ ಹಾಜರಾಗಲಿದ್ದು, ಸಂದಾನ ಏರ್ಪಡಿಸಲು ಪ್ರಯತ್ನಿಸಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪಂಚಸದಸ್ಯ ಪೀಠ ಅಯೋಧ್ಯೆ ಪ್ರಕರಣವನ್ನು ಆಗಸ್ಟ್‌ 6ರಿಂದ ಪ್ರತಿದಿನ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ರಂಜನ್‌ ಗೊಗೊಯ್ ಅವರು ನವೆಂಬರ್‌ 17ರಂದು ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿಯಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ