ಆ್ಯಪ್ನಗರ

ತ್ರಿವಳಿ ತಲಾಖ್: ಪಂಚ ಧರ್ಮಗಳ 5 ನ್ಯಾಯಾಧೀಶರು ಏನೆಂದರು?

ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರುಳ್ಳ ಸಂವಿಧಾನ ಪೀಠವು ಮಂಗಳವಾರ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿದ್ದು, 3-2 ಅಂತರದಿಂದ ಅದನ್ನು ಸಂವಿಧಾನಬಾಹಿರ ಪದ್ಧತಿ ಎಂದು ಘೋಷಿಸಿದೆ. ಈ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಾಧೀಶರು ಏನೆಂದರು...

TNN 22 Aug 2017, 4:28 pm
ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರುಳ್ಳ ಸಂವಿಧಾನ ಪೀಠವು ಮಂಗಳವಾರ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿದ್ದು, 3-2 ಅಂತರದಿಂದ ಅದನ್ನು ಸಂವಿಧಾನಬಾಹಿರ ಪದ್ಧತಿ ಎಂದು ಘೋಷಿಸಿದೆ.
Vijaya Karnataka Web supreme court verdict on triple talaq key points
ತ್ರಿವಳಿ ತಲಾಖ್: ಪಂಚ ಧರ್ಮಗಳ 5 ನ್ಯಾಯಾಧೀಶರು ಏನೆಂದರು?


ಈ ಐತಿಹಾಸಿಕ ತೀರ್ಪಿನಲ್ಲಿ ಪಂಚ ಸದಸ್ಯ ಪೀಠದ ನ್ಯಾಯಾಧೀಶರು ಏನೆಂದರು?

1. ತಮ್ಮ ಪ್ರತ್ಯೇಕ ತೀರ್ಪುಗಳನ್ನೇ ಓದಿದ ಬಳಿಕ ಐವರು ನ್ಯಾಯಾಧೀಶರುಳ್ಳ ಸುಪ್ರೀಂ ಕೋರ್ಟ್ ಪೀಠವು, ತ್ರಿವಳಿ ತಲಾಖ್ ಪದ್ಧತಿಯನ್ನು 3-2 ಅಂತರದಿಂದ ರದ್ದುಗೊಳಿಸಿತಲ್ಲದೆ, ಕಾನೂನು ಬಾಹಿರ ಎಂದೂ ಸಾರಿತು.

2. ತಲಾಖ್ ಎಂಬುದು ಮೂಲಭೂತ ಹಕ್ಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿ ನಝೀರ್ ಪ್ರತಿಪಾದಿಸಿದರೆ, ಇತರ ಮೂವರು ನ್ಯಾಯಾಧೀಶರಾದ ನ್ಯಾಯಮೂರ್ತಿ ಕುರಿಯನ್ ಜೋಸೆಫ್, ಆರ್.ಎಫ್.ನಾರಿಮನ್ ಮತ್ತು ಯು.ಯು.ಲಲಿತ್ ಅವರು, ಅದು ಮೂಲಭೂತ ಹಕ್ಕು ಅಲ್ಲ ಎಂದು ತೀರ್ಪು ನೀಡಿದರು.

3. ತಲಾಖ್ ಎಂಬುದು ಸಂವಿಧಾನಬಾಹಿರ ಎಂದು ನ್ಯಾಯಮೂರ್ತಿಗಳಾದ ನಾರಿಮನ್, ಲಲಿತ್ ಹಾಗೂ ಕುರಿಯನ್ ಸಾರಿದರು.

4. ಮೂರು ಬಾರಿ ತಲಾಖ್ ಹೇಳಿ ಪತ್ನಿಯರಿಗೆ ಕ್ಷಿಪ್ರವಾಗಿ ವಿಚ್ಛೇದನ ನೀಡುವ ಮುಸ್ಲಿಂ ಪುರುಷರ ಕ್ರಮಕ್ಕೆ ಸುಪ್ರೀಂ ಕೋರ್ಟು ಆರು ತಿಂಗಳ ಕಾಲ ತಡೆಯಾಜ್ಞೆ ನೀಡಿದೆ.

5. ತ್ರಿವಳಿ ತಲಾಖ್ ಕುರಿತು ಆರು ತಿಂಗಳ ಅವಧಿಯೊಳಗೆ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಪೀಠವು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

6. ಆರು ತಿಂಗಳೊಳಗೆ ಕಾನೂನು ಜಾರಿಗೆ ಬಾರದಿದ್ದರೆ, ತ್ರಿವಳಿ ತಲಾಖ್ ಮೇಲಿನ ಸುಪ್ರೀಂ ಕೋರ್ಟ್ ತಡೆಯು ಮುಂದುವರಿಯಲಿದೆ.

7. ಇಸ್ಲಾಮಿಕ್ ರಾಷ್ಟ್ರಗಳಲ್ಲಿಯೂ ತ್ರಿವಳಿ ತಲಾಖ್ ರದ್ದುಗೊಳಿಸಿರುವುದನ್ನು ಸುಪ್ರೀಂ ಕೋರ್ಟ್ ಪೀಠವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದು, ಸ್ವತಂತ್ರ ಭಾರತದಲ್ಲೇಕೆ ಇದು ಸಾಧ್ಯವಾಗದು ಎಂದು ಪ್ರಶ್ನಿಸಿತು.

8. ತ್ರಿವಳಿ ತಲಾಖ್ ವಿವಾಹ ಬಂಧನವನ್ನು ಸರಿಪಡಿಸಲಾಗದ ರೀತಿಯಲ್ಲಿ ಕೆಲವೇ ಕ್ಷಣಗಳಲ್ಲಿ ಮುರಿದುಹಾಕುವ ಮೂಲಕ, ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

9. ಧರ್ಮಶಾಸ್ತ್ರದಲ್ಲಿ ಯಾವುದು ನಿಜವಲ್ಲವೋ, ಅದನ್ನು ಕಾನೂನಿನಲ್ಲಿ ರಕ್ಷಿಸುವುದು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಜೋಸೆಫ್ ಅಭಿಪ್ರಾಯಪಟ್ಟರು.

10. ಕ್ಷಿಪ್ರ ವಿಚ್ಛೇದನ ನೀಡುವ ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ನ್ಯಾಯಮೂರ್ತಿಗಳಾದ ನಾರಿಮನ್ ಮತ್ತು ಲಲಿತ್ ಅವರೂ ಅಭಿಪ್ರಾಯಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ