ಆ್ಯಪ್ನಗರ

ಅನಂತಪದ್ಮನಾಭ ದೇಗುಲ: ‘ಬಿ’ ಕೋಣೆ ತೆರೆಯಬೇಕೇ? ಬೇಡವೇ? ನಿರ್ಧಾರ ಇಂದು!

ಕೇರಳದ ಅನಂತ ಪದ್ಮನಾಭಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿನ 'ಬಿ' ಕೋಣೆಯ ಬಾಗಿಲು ತೆರೆಯಬೇಕೇ ಬೇಡವೇ ಅಥವಾ ತೆರೆದರೂ ಯಾರು ತೆರೆಯಬೇಕು ಎಂಬುದನ್ನು ಸುಪ್ರೀಂಕೋರ್ಟ್‌ ಇಂದು ನಿರ್ಧರಿಸಲಿದೆ.

Indiatimes 13 Jul 2020, 7:24 am
ತಿರುವನಂತಪುರಂ: ಭಾರಿ ಕುತೂಹಲ ಮೂಡಿಸಿರುವ ಕೇರಳದ ಅನಂತ ಪದ್ಮನಾಭಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿನ 'ಬಿ' ಕೋಣೆಯ ಬಾಗಿಲು ತೆರೆಯುವ ಬಗ್ಗೆ ಸುಪ್ರೀಂ ಕೋರ್ಟ್‌ ಜು.13ರ ಸೋಮವಾರ ಮಹತ್ವದ ಆದೇಶ ನೀಡಲಿದೆ. ಬಾಗಿಲು ತೆರೆಯಬೇಕೇ ಬೇಡವೇ ಅಥವಾ ತೆರೆದರೂ ಯಾರು ತೆರೆಯಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ.
Vijaya Karnataka Web jpg (1)


ಇದರೊಂದಿಗೆ ಭಾರಿ ನಿಧಿಯನ್ನು ಹೊಂದಿದೆ ಎನ್ನಲಾದ ಕೋಣೆಯ ಮೇಲಿನ ಹಕ್ಕುಗಳ ಕುರಿತು ತಿರುವಾಂಕೂರು ರಾಜಮನೆತನ ಮತ್ತು ಕೇರಳ ಮುಜರಾಯಿ ಇಲಾಖೆ ನಡುವಿನ ವ್ಯಾಜ್ಯಕ್ಕೂ ತೆರೆ ಬೀಳುವ ನಿರೀಕ್ಷೆಯಿದೆ. ನ್ಯಾ. ಉದಯ್‌ ಉಮೇಶ್‌ ಲಲಿತ್‌ ಮತ್ತು ಏ.10ರಂದು ತೀರ್ಪನ್ನು ಕಾಯ್ದಿರಿಸಿತ್ತು. ಈಗಾಗಲೇ 5 ಕೋಣೆಗಳ ಬಾಗಿಲನ್ನು ಸುಪ್ರೀಂಕೋರ್ಟ್‌ ನೇಮಿಸಿದ ಸಮಿತಿ ನಿಗಾದಲ್ಲಿ 2011ರಲ್ಲಿ ತೆರೆಯಲಾಗಿತ್ತು.

ಆಗ ಅಲ್ಲಿ ಸುಮಾರು 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಚಿನ್ನ, ವಜ್ರದ ಆಭರಣಗಳು, ನಾಣ್ಯಗಳು ಇಲ್ಲಿ ಸಿಕ್ಕಿವೆ. ಹಾಗಾಗಿ 'ಬಿ' ಉಗ್ರಾಣದಲ್ಲಿ ಸಿಗಬಹುದಾದ ಸಂಪತ್ತು ಮೌಲ್ಯದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಭಾರೀ ಚಿನ್ನದ ನಾಣ್ಯಗಳು, ಚಿನ್ನದ ಆಭರಣಗಳು, ವಜ್ರದ ಆಭರಣಗಳು ಈ ಕೋಣೆಯಲ್ಲಿ ಇವೆ ಎನ್ನುವುದನ್ನ ಅಂದಾಜಿಸಲಾಗಿತ್ತು.

ಹಾರ್ದಿಕ್‌ ಪಟೇಲ್‌ ಮೂಲಕ ಮೋದಿ-ಶಾಗೆ ಠಕ್ಕರ್‌ ಕೊಡಲು ಕಾಂಗ್ರೆಸ್‌ ರಣತಂತ್ರ! ವಿಶ್ಲೇಷಣೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ