ಆ್ಯಪ್ನಗರ

ಗುಜರಾತ್ ಉದ್ಯಮಿ 6000 ಕೋಟಿ ಕೊಟ್ಟ ಸುದ್ದಿ ಫೇಕ್

ಪ್ರಧಾನಿಗೆ 4.3 ಕೋಟಿ ರೂ. ಬೆಲೆಯ ಸ್ವರ್ಣ ಖಚಿತ ಸೂಟ್ ನೀಡಿ ಸುದ್ದಿಯಾಗಿದ್ದ ಸೂರತ್ ಉದ್ಯಮಿ, 6000 ಕೋಟಿ ರೂ. ಹಣವನ್ನು ನಗದು ರೂಪದಲ್ಲಿ ಕಟ್ಟಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂಬುದೀಗ ಸಾಬೀತಾಗಿದೆ.

ನವ ಗುಜರಾತ್ ಸಮಯ್ 15 Nov 2016, 2:00 pm
ಅಹಮದಾಬಾದ್: ಪ್ರಧಾನಿಗೆ 4.3 ಕೋಟಿ ರೂ. ಬೆಲೆಯ ಸ್ವರ್ಣ ಖಚಿತ ಸೂಟ್ ನೀಡಿ ಸುದ್ದಿಯಾಗಿದ್ದ ಸೂರತ್ ಉದ್ಯಮಿ, 6000 ಕೋಟಿ ರೂ. ಹಣವನ್ನು ನಗದು ರೂಪದಲ್ಲಿ ಕಟ್ಟಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂಬುದೀಗ ಸಾಬೀತಾಗಿದೆ.
Vijaya Karnataka Web surat businessman surrendered 6000 crores in cash is a false news
ಗುಜರಾತ್ ಉದ್ಯಮಿ 6000 ಕೋಟಿ ಕೊಟ್ಟ ಸುದ್ದಿ ಫೇಕ್


ಸದ್ದು ಮಾಡಿದ ಸುದ್ದಿ: 6000 ಕೋಟಿ ಸುರಿದ ಸೂರತ್ ವಜ್ರ ವ್ಯಾಪಾರಿ

ಕಾಳಧನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸಮರ ಸಾರಿ 500 ಹಾಗೂ 1000 ರೂ. ನೋಟು ನಿಷೇಧಿಸಿರುವ ಹಿನ್ನೆಲೆಯಲ್ಲಿ ಈ ಸೂರತ್‌ನ ವಜ್ರ ವ್ಯಾಪಾರಿಯು 6000 ಕೋಟಿ ರೂ. ಸಹಿತ ಶರಣಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ಭಾರಿ ಸುದ್ದಿ ಕೇಳಿಬಂದಿತ್ತು. ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಮೋದಿ ವಿರೋಧಿಗಳು ಇದನ್ನು ಶೇರ್ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಉದ್ಯಮಿ ಲಾಲ್‌ಜಿ ಪಟೇಲ್, ತಾವು ನಗದು ರೂಪದಲ್ಲಿ ಹಣ ನೀಡಿಲ್ಲ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಕೂಡ ಈ ಸುದ್ದಿಯನ್ನು, ಕೇವಲ ಗಾಳಿ ಸುದ್ದಿ ಎಂದು ತಳ್ಳಿ ಹಾಕಿದ್ದಾರೆ.

ಈ ವಜ್ರ ವ್ಯಾಪಾರಿ ತಮ್ಮ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಪ್ರತಿ ವರ್ಷ ಸುದ್ದಿಗೆ ಗ್ರಾಸವಾಗುತ್ತಿದ್ದರು. ಪ್ರತಿವರ್ಷ ಅವರು ತಮ್ಮ ನೌಕರರಿಗೆ ದುಬಾರಿ ಗಿಫ್ಟ್‌ಗಳನ್ನೂ ನೀಡಿದ್ದಾರೆ. ಮೊನ್ನೆ ದೀಪಾವಳಿ ಸಂದರ್ಭದಲ್ಲೂ ನೌಕರರಿಗೆ ಕಾರು, ಫ್ಲಾಟುಗಳನ್ನು ಕೊಡುಗೆಯಾಗಿ ನೀಡಿದ್ದರು. ಈ ವರ್ಷ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಬರೋಬ್ಬರಿ 200 ಕೋಟಿ ರೂ. ದಾನ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ