ಆ್ಯಪ್ನಗರ

‘ತರಾತುರಿಯ ಅಂಗೀಕಾರವೆಂಬ ಪ್ರತಿಪಕ್ಷಗಳ ಆರೋಪ ನಿರಾಧಾರ’

''ವಿಧೇಯಕಗಳ ತಿದ್ದುಪಡಿ, ಹೊಸ ಕಾನೂನು ಜಾರಿ ವಿಚಾರವಾಗಿ ಹಲವು ತಾಸುಗಳ ಚರ್ಚೆ ಅಧಿವೇಶನದಲ್ಲಿ ನಡೆಯುತ್ತಿದೆ. ಪ್ರಮುಖ ವಿಧೇಯಕಗಳನ್ನು ಆಯ್ಕೆ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಪರಿಶೀಲನೆಗೆ ನೀಡಲಾಗುತ್ತಿದೆ. ಆದರೂ ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ,'' ಎಂದು ರಾಜ್ಯಸಭೆಯಲ್ಲಿ ಬಿಜೆಪಿ ನಾಯಕ ಭೂಪೇಂದರ್‌ ಯಾದವ್‌ ಆರೋಪಿಸಿದ್ದಾರೆ.

PTI 29 Jul 2019, 5:00 am
ಹೊಸದಿಲ್ಲಿ: ಸುಮಾರು 17 ಕರಡು ವಿಧೇಯಕಗಳನ್ನು ಸಂಸದೀಯ ಸಮಿತಿಗಳ ಪರಿಶೀಲನೆಗೆ ಒಪ್ಪಿಸಲಾಗಿದ್ದರೂ ತರಾತುರಿಯಲ್ಲಿ ವಿಧೇಯಕಗಳನ್ನು ಅಂಗೀಕರಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಬಿಜೆಪಿ ಹೇಳಿದೆ. ''ವಿಧೇಯಕಗಳ ತಿದ್ದುಪಡಿ, ಹೊಸ ಕಾನೂನು ಜಾರಿ ವಿಚಾರವಾಗಿ ಹಲವು ತಾಸುಗಳ ಚರ್ಚೆ ಅಧಿವೇಶನದಲ್ಲಿ ನಡೆಯುತ್ತಿದೆ. ಪ್ರಮುಖ ವಿಧೇಯಕಗಳನ್ನು ಆಯ್ಕೆ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಪರಿಶೀಲನೆಗೆ ನೀಡಲಾಗುತ್ತಿದೆ. ಆದರೂ ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ,'' ಎಂದು ರಾಜ್ಯಸಭೆಯಲ್ಲಿ ಬಿಜೆಪಿ ನಾಯಕ ಭೂಪೇಂದರ್‌ ಯಾದವ್‌ ಆರೋಪಿಸಿದ್ದಾರೆ. ''2009-14ರ ಅವಧಿಯಲ್ಲಿ ಯುಪಿಎ ಸರಕಾರ ಕೇವಲ ಐದು ಕರಡು ವಿಧೇಯಕಗಳನ್ನು ಸಂಸದೀಯ ಸಮಿತಿಗಳ ಪರಿಶೀಲನೆಗೆ ಒಪ್ಪಿಸಿತ್ತು. ಆದರೆ 2014-19ರ ಅವಧಿಯಲ್ಲಿ ನರೇಂದ್ರ ಮೋದಿ ಸರಕಾರ 17 ಕರಡು ವಿಧೇಯಕಗಳನ್ನು ಸಂಸದೀಯ ಸಮಿತಿಗಳಿಗೆ ಒಪ್ಪಿಸಿದೆ,'' ಎಂದೂ ಯಾದವ್‌ ಹೇಳಿದ್ದಾರೆ. ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ 17 ಪ್ರತಿಪಕ್ಷಗಳು ಕಳೆದ ವಾರ ಪತ್ರ ಬರೆದು, ಸರಕಾರ ಸಂಸತ್‌ ಅಧಿವೇಶನದಲ್ಲಿ ತರಾತುರಿಯಲ್ಲಿ ವಿಧೇಯಕಗಳನ್ನು ಅನುಮೋದನೆ ಮಾಡಿಕೊಳ್ಳುತ್ತಿದೆ. ಸಂಸದೀಯ ಸಮಿತಿಗಳ ಪರಿಶೀಲನೆಗೆ ಒಪ್ಪಿಸುತ್ತಿಲ್ಲ ಎಂದು ದೂರಿವೆ.
Vijaya Karnataka Web yadav

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ