ಆ್ಯಪ್ನಗರ

ಸಾಯಲು ಹೊರಟವನಿಗೆ ಸುಷ್ಮಾ ಅಭಯ

ನಾವು ನಿಮ್ಮೊಂದಿಗೆ ಇದ್ದೇವೆ. ಭಾರತೀಯ ದೂತಾವಾಸ ಕಚೇರಿಯು ನಿಮ್ಮ ನೆರವಿಗೆ ಬರಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನೀವು ಆದಷ್ಟು ಬೇಗ ಭಾರತಕ್ಕೆ ಬರಲಿದ್ದೀರಿ. ಆ ವಿಶ್ವಾಸ ನಾನು ಕೊಡುತ್ತೇನೆ,'' ಎಂದು ಟ್ವೀಟ್‌ ಮಾಡಿ ಅಭಯ ನೀಡಿದ್ದಾರೆ.

Vijaya Karnataka 19 Apr 2019, 7:45 am
ಹೊಸದಿಲ್ಲಿ: ಸೌದಿ ಅರೇಬಿಯಾದಲ್ಲಿ ವಾಸವಿರುವ ಭಾರತೀಯ ವ್ಯಕ್ತಿಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ನೆರವಿನ ಭರವಸೆ ನೀಡಿದ್ದಾರೆ. ತನ್ನ ಹೆಸರು ಅಲಿ ಎಂದು ಹೇಳಿಕೊಂಡ ವ್ಯಕ್ತಿ, ''ನಾನು ನಾಲ್ಕು ಮಕ್ಕಳ ತಂದೆ. ವರ್ಷಗಟ್ಟಲೆ ಹೋರಾಡಿದರೂ ಇಲ್ಲಿನ ಭಾರತೀಯ ದೂತಾವಾಸ ಕಚೇರಿಯು ನನಗೆ ಭಾರತಕ್ಕೆ ಮರಳಲು ಸಹಕರಿಸುತ್ತಿಲ್ಲ. ಮಕ್ಕಳನ್ನು ನೋಡದೇ ವರ್ಷವೇ ಆಗಿದೆ.
Vijaya Karnataka Web sushma-swaraj-759


ಎಷ್ಟು ದಿನ ಈ ಯಾತನೆ ಅನುಭವಿಸಲಿ? ಸ್ಪಂದಿಸಲು ಸಾಧ್ಯವಿಲ್ಲವೇ? ಹಾಗಿದ್ದರೆ ನಾನು ಆತ್ಮ ಮಾಡಿಕೊಳ್ಳಲೇ,'' ಎಂದು ಹತಾಶೆಯಿಂದ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ತಕ್ಷಣವೇ ಸ್ಪಂದಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌, ''ಆತ್ಮಹತ್ಯೆ ವಿಚಾರವನ್ನ ಮೊದಲು ತಲೆಯಿಂದ ತೆಗೆದುಹಾಕಿ. ನಾವು ನಿಮ್ಮೊಂದಿಗೆ ಇದ್ದೇವೆ. ಭಾರತೀಯ ದೂತಾವಾಸ ಕಚೇರಿಯು ನಿಮ್ಮ ನೆರವಿಗೆ ಬರಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನೀವು ಆದಷ್ಟು ಬೇಗ ಭಾರತಕ್ಕೆ ಬರಲಿದ್ದೀರಿ. ಆ ವಿಶ್ವಾಸ ನಾನು ಕೊಡುತ್ತೇನೆ,'' ಎಂದು ಟ್ವೀಟ್‌ ಮಾಡಿ ಅಭಯ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ