ಕೊಚ್ಚಿ: ತಮಿಳುನಾಡು ಮತ್ತು ಕೇರಳದಲ್ಲಿ ಲಷ್ಕರೆ ಉಗ್ರರ ಬಗ್ಗೆ ಹೈ ಅಲರ್ಟ್ ಘೋಷಿಸಿರುವ ನಡುವೆಯೇ ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ವ್ಯಕ್ತಿಯನ್ನು ಶನಿವಾರ ಕೊಚ್ಚಿಯ ಕೋರ್ಟ್ ಆವರಣದಲ್ಲಿ ಬಂಧಿಸಲಾಗಿದೆ. ತ್ರಿಶೂರು ಜಿಲ್ಲೆಯ ಕೊಡುಂಗಲ್ಲೂರಿನ ಈ ವ್ಯಕ್ತಿ 2 ದಿನದ ಹಿಂದೆ ಬಹರೈನ್ನಿಂದ ಬಂದಿದ್ದ. ಶ್ರೀಲಂಕಾದಿಂದ ತಮಿಳುನಾಡು ಮೂಲಕ ರಾಜ್ಯಕ್ಕೆ ನುಗ್ಗಿರುವ ಲಷ್ಕರೆ ಉಗ್ರರ ಜತೆ ಈತನಿಗೆ ಸಂಬಂಧವಿದೆ ಎಂಬ ಸಂಶಯವಿತ್ತು. ಪೊಲೀಸರು ಬೆನ್ನಟ್ಟುತ್ತಿರುವ ವಿಷಯ ತಿಳಿದ ಆತನ ಪತ್ನಿ ಉಗ್ರರೊಂದಿಗೆ ಸಂಬಂಧವಿಲ್ಲ ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದ ವೇಳೆಯೇ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.
ಕೇರಳದಲ್ಲಿ ಶಂಕಿತ ಉಗ್ರನ ಬಂಧನ
ತ್ರಿಶೂರು ಜಿಲ್ಲೆಯ ಕೊಡುಂಗಲ್ಲೂರಿನ ಈ ವ್ಯಕ್ತಿ 2 ದಿನದ ಹಿಂದೆ ಬಹರೈನ್ನಿಂದ ಬಂದಿದ್ದ.
Agencies 25 Aug 2019, 5:00 am