ಆ್ಯಪ್ನಗರ

"ಹಿಂದೂಗಳಿಗೆ ಪಾಠ ಕಲಿಸಲು ಗಲಭೆಗೆ ಪ್ರಚೋದನೆ" ದೆಹಲಿ ಸಂಘರ್ಷದ ಸತ್ಯ ಒಪ್ಪಿಕೊಂಡ ಆರೋಪಿ ತಾಹೀರ್‌!

ದಿಲ್ಲಿಯಲ್ಲಿ ನಡೆದ ಗಲಭೆಗೆ ತಾನೇ ಪ್ರಚೋದನೆ ನೀಡಿದ್ದಾಗಿ ಆಪ್‌ನ ಉಚ್ಚಾಟಿತ ನಗರಪಾಲಿಕೆ ಸದಸ್ಯ ತಾಹಿರ್‌ ಹುಸೇನ್‌ ಒಪ್ಪಿಕೊಂಡಿದ್ದಾನೆ. ಹಣ ಮತ್ತು ರಾಜಕೀಯ ಪ್ರಭಾವ ಬಳಸಿಕೊಂಡು ಹಿಂದೂಗಳಿಗೆ ಪಾಠ ಕಲಿಸಲೆಂದೇ ತಾನು ಗಲಭೆಗೆ ಕುಮ್ಮಕ್ಕು ನೀಡಿರುವುದಾಗಿ ಆತ ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾನೆ.

TIMESOFINDIA.COM 3 Aug 2020, 7:49 am
ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ದಿಲ್ಲಿಯಲ್ಲಿ ನಡೆದ ಗಲಭೆಗೆ ತಾನೇ ಪ್ರಚೋದನೆ ನೀಡಿದ್ದಾಗಿ ಆಪ್‌ನ ಉಚ್ಚಾಟಿತ ನಗರಪಾಲಿಕೆ ಸದಸ್ಯ ತಾಹಿರ್‌ ಹುಸೇನ್‌ ಒಪ್ಪಿಕೊಂಡಿದ್ದಾನೆ. ಹಣ ಮತ್ತು ರಾಜಕೀಯ ಪ್ರಭಾವ ಬಳಸಿಕೊಂಡು ಹಿಂದೂಗಳಿಗೆ ಪಾಠ ಕಲಿಸಲೆಂದೇ ತಾನು ಗಲಭೆಗೆ ಕುಮ್ಮಕ್ಕು ನೀಡಿರುವುದಾಗಿ ಆತ ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾನೆ.
Vijaya Karnataka Web jpg - 2020-08-03T074623.042


ಗಲಭೆ ನಡೆಸುವಂತೆ ಜನರನ್ನು ಪ್ರಚೋದಿಸಲು ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಲೀದ್‌, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಡ್ಯಾನಿಶ್‌ ಮೊದಲಾದವರ ನೆರವು ಪಡೆದಿರುವುದಾಗಿಯೂ ಆತ ತಿಳಿಸಿದ್ದಾನೆ. ಸುಪ್ರೀಂಕೋರ್ಟ್‌ನಿಂದ ರಾಮ ಮಂದಿರ ತೀರ್ಪು, ಆರ್ಟಿಕಲ್‌ 370 ರದ್ದು ಹಾಗೂ ಪೌರತ್ವ ತಿದ್ದುಪಡಿ ಮೂಲಕ ಕ್ರೋಧಗೊಂಡಿದ್ದಣಂತೆ ತಾಹೀರ್‌ ಹೀಗಾಗಿ ಗಲಭೆ ನಡೆಸಲು ತಿರ್ಮಾನಿಸಿದನಂತೆ ಎಂದುಉ ಆತನ ಪೊಲೀಸರಿಗೆ ತಿಳಿಸಿದ್ದಾಗಿ ಗೊತ್ತಾಗಿದೆ.

ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬರುವ ವೇಳೆ ಏನಾದರು ಮಾಡಬೇಕು ಎಂದು ತಾಹೀರ್‌ ಹಾಗೂ ಆತನ ಸಂಗಡಿಗರು ಅನೇಕ ಬಾರಿ ಮೀಟಿಂಗ್‌ ನಡೆಸಿದ್ದಾರಂತೆ. ತಾಹೀರ್‌ ಗಲಭೆ ಸಷ್ಟಿಸುವ ನಿಟ್ಟಿನಲ್ಲಿ ಗಲಭೆಕೋರರಿಗೆ ಬೇಕಾದ ಪೆಟ್ರೋಲ್‌ ಬಾಂಬ್‌, ಕಲ್ಲು ಇನ್ನಿತರ ಮಾರಕ ವಸ್ತುಗಳನ್ನ ಆತನ ಮನೆ ಮೇಲ್ಚಾವಣಿ ಮೇಲೆ ತಂದು ಇಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಕೊರೊನಾ ಸಾವಿನ ಪ್ರಮಾಣ ಇಳಿಕೆ, ಶೇ.70ರಷ್ಟು ಜನರ ಸಾವಿಗೆ ಇತರ ಆರೋಗ್ಯ ಸಮಸ್ಯೆಯೇ ಕಾರಣ!

ದೆಹಲಿಯ ಈಶಾನ್ಯದಲ್ಲಿ ಫೆಬ್ರವರಿ 24 ರಂದು ಭಾರೀ ಗಲಭೆ ನಡೆದಿತ್ತು. ಗಲಭೆಕೋರರರು ಹಲವು ಮನೆಗಳನ್ನ ಗುರಿಯಾಗಿಸಿ ದಾಳಿ ನಡೆಸಿದ್ದರು. ಪೆಟ್ರೋಲ್‌ ಬಾಂಬ್‌ ಸೇರಿ ಇನ್ನಿತರ ಮಾರಕ ವಸ್ತುಗಳಿಂದ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಐಬಿ ಅಧಿಕಾರಿ ಸಾವನಪ್ಪಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ