ಆ್ಯಪ್ನಗರ

ಸ್ವಚ್ಚ, ಸ್ವಸ್ಥ, ಸರ್ವತ್ರ ಯೋಜನೆಗೆ ಚಾಲನೆ

ದೇಶದಲ್ಲಿ ಸ್ವಚ್ಚ , ನೈರ್ಮಲ್ಯ ಮತ್ತು ಸೋಂಕು ರಹಿತ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸ ಯೋಜನೆಯನ್ನು ಜಾರಿಮಾಡಿದೆ.

Vijaya Karnataka Web 30 Dec 2016, 7:58 am

ಹೊಸದಿಲ್ಲಿ: ದೇಶದಲ್ಲಿ ಸ್ವಚ್ಚ , ನೈರ್ಮಲ್ಯ ಮತ್ತು ಸೋಂಕು ರಹಿತ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸ ಯೋಜನೆಯನ್ನು ಜಾರಿಮಾಡಿದೆ.

'ಸ್ವಚ್ಚ, ಸ್ವಸ್ಥ, ಸರ್ವತ್ರ' ಅಭಿಯಾನದಡಿ ದೇಶದ 708 ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಿಗೆ 10 ಲಕ್ಷ ರೂ ಧನ ಸಹಾಯ ನೀಡಲಾಗುತ್ತಿದೆ. ಪ್ರಸ್ತುತ ಯೋಜನೆಯನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಹಾಗೂ ಮಾನವ ಸಂಪನ್ಮೂಲ ಸಚಿವಾಲಯಗಳ ಸಹಯೋಗದೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಾರಂಭಿಸಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ, 'ಸ್ವಚ್ಚ, ಸ್ವಸ್ಥ,ಸರ್ವತ್ರ ಯೋಜನೆಯಡಿ ದೇಶದ 708 ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಹಾಯಧನ ನೀಡಿ ಸ್ವಚ್ಚತೆ, ನೈರ್ಮಲ್ಯದಲ್ಲಿ 'ಕಾಯಕಲ್ಪ' ಗುಣಮಟ್ಟವನ್ನು ತಲುಪಲು ನೆರವು ನೀಡಲಾಗುವುದು ' ಎಂದು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ಎಲ್ಲ ಸಚಿವಾಲಯಗಳು ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಿವೆ ಎಂದ ಅವರು, ' ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ, ಕಾಯಕಲ್ಪ ಪ್ರಶಸ್ತಿ ವಿಜೇತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊಂದಿರುವ ಗ್ರಾಮಪಂಚಾಯಿತಿಗಳಿಗೆ ಹಣಕಾಸಿನ ನೆರವು ನೀಡಿ, ಬಯಲು ಬಹಿರ್ದೆಸೆ ಮುಕ್ತವಾಗಿಸಲು ಶ್ರಮಿಸಲಿದೆ,' ಎಂದು ತಿಳಿಸಿದರು.

Vijaya Karnataka Web swacha swastha sarvatra campaign begins
ಸ್ವಚ್ಚ, ಸ್ವಸ್ಥ, ಸರ್ವತ್ರ ಯೋಜನೆಗೆ ಚಾಲನೆ


2016ರ ಹಿನ್ನೋಟ: ಅತೀ ಹೆಚ್ಚು ಓದಿದ ವಿಷಯಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ