ಆ್ಯಪ್ನಗರ

ಪ್ರತಿಪಕ್ಷ ಸಂಸದರ ಅನಾವಶ್ಯಕ ಪ್ರಚೋದನೆ: ಸ್ವಾಮಿಗೆ ಸದನದ ಎಚ್ಚರಿಕೆ

ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣದಲ್ಲಿ ಲಂಚ ಪಡೆದಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರನ್ನು ಎಳೆಯಲು ಯತ್ನಿಸುತ್ತಿರುವ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ವಿರುದ್ಧ ಕಾಗ್ರೆಸ್ ಪ್ರತಿಭಟಿಸಿದ ಬೆನ್ನಲ್ಲೇ ಮತ್ತೆ ರಾಜ್ಯಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಏಜೆನ್ಸೀಸ್ 28 Apr 2016, 8:10 pm
ಹೊಸದಿಲ್ಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣದಲ್ಲಿ ಲಂಚ ಪಡೆದಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರನ್ನು ಎಳೆಯಲು ಯತ್ನಿಸುತ್ತಿರುವ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ವಿರುದ್ಧ ಕಾಗ್ರೆಸ್ ಪ್ರತಿಭಟಿಸಿದ ಬೆನ್ನಲ್ಲೇ ಮತ್ತೆ ರಾಜ್ಯಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ, ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕಡತದಿಂದ ಹೇಳಿಕೆ ತೆಗೆದುಹಾಕಿದ ಸಭಾಪತಿ ಇಂಥ ಪ್ರಚೋಜನಕಾರಿ ಹೇಳಿಕೆ ನೀಡದಂತೆ ಸ್ವಾಮಿಯನ್ನು ಎಚ್ಚರಿಸಿದ್ದಾರೆ.
Vijaya Karnataka Web swamy warned against unnecessarily provoking opposition mps
ಪ್ರತಿಪಕ್ಷ ಸಂಸದರ ಅನಾವಶ್ಯಕ ಪ್ರಚೋದನೆ: ಸ್ವಾಮಿಗೆ ಸದನದ ಎಚ್ಚರಿಕೆ


ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಮಾನ್ಯತೆಯನ್ನು ಪ್ರಶ್ನಿಸಿ 1970ರಲ್ಲಿ ನಡೆದ ಚಳವಳಿಯಲ್ಲಿ ಸ್ವಾಮಿ ಪ್ರಮುಖ ಪಾತ್ರವಹಿಸಿದ್ದರು ಎಂಬುದನ್ನು ಸಮಾಜವಾದಿ ಪಕ್ಷದ ಸಂಸದ ಜೌಧರಿ ಮುನವೀರ್ ಸಲೀಮ್ ಉಲ್ಲೇಖಿಸಿದ್ದು, ಈ ಗಲಾಟೆಗೆ ಎಡೆ ಮಾಡಿಕೊಟ್ಟಿತು.

ತಕ್ಷಣವೇ ಆಕ್ರೋಶಭರಿತ ಸ್ವಾಮಿ ಎದ್ದು ನಿಂತು, 'ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳಿಗೆ ನನ್ನ ವಿರೋಧವಿಲ್ಲ, ಆದರೆ, ಅವುಗಳಿಗೆ ಆರ್ಥಿಕ ನೆರವು ನೀಡುವುದನ್ನು ಸಂವಿಧಾನ ವಿರೋಧಿಸುತ್ತದೆ,' ಎಂದು ಸ್ಪಷ್ಟನೆ ನೀಡಿದರು.

ಪ್ರತಿಪಕ್ಷಗಳಿಗೆ ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡುವಾಗ ಅನ್ಯ ದೇಶದ ಸಂವಿಧಾನವನ್ನು ಎಳೆದು ತಂದಿದ್ದು, ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಯಿತು. ತಕ್ಷಣವೇ ಸದನದ ಬಾವಿಗಿಳಿದ ಸಂಸದರು ಪ್ರತಿಭಟಿಸಿದರು.

ಬೇರೆ ದೇಶದ ಸಂವಿಧಾನವನ್ನು ಹೀಯಾಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಸಭಾಪತಿ, ಈ ಹೇಳೆಕೆಯನ್ನು ವರದಿ ಮಾಡದಂತೆ ಉಪಸಭಾಪತಿ ಪಿ.ಜೆ.ಕುರಿಯನ್ ಮಾಧ್ಯಮದವರಿಗೆ ಹೇಳಿದರು.

ಸೋಮವಾರವಷ್ಟೇ ರಾಜ್ಯಸಭಾ ಸದಸ್ಯರಾಗಿ ಪ್ರತಿಜ್ಞೆ ಸ್ವೀಕರಿಸಿದ ಸ್ವಾಮಿಯ ಎರಡು ಹೇಳಿಕೆಗಳನ್ನು ಸದನದ ಕಡತದಿಂದ ತೆಗೆದುಹಾಕಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ