ಆ್ಯಪ್ನಗರ

ಸ್ವಾತಿ ಕೊಲೆ: ಉತ್ತರ ಸಿಗದ ಪ್ರಶ್ನೆಗಳು

ಇಲ್ಲಿನ ರೈಲ್ವೆ ಸ್ಟೇಷನ್‌ನಲ್ಲಿ ಕೊಲೆಯಾದ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹಂತಕ ಪಿ.ರಾಮ್‌ಕುಮಾರ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರೂ, ಹಲವು ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.

ಏಜೆನ್ಸೀಸ್ 5 Jul 2016, 7:08 pm
ಚೆನ್ನೈ: ಇಲ್ಲಿನ ರೈಲ್ವೆ ಸ್ಟೇಷನ್‌ನಲ್ಲಿ ಕೊಲೆಯಾದ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹಂತಕ ಪಿ.ರಾಮ್‌ಕುಮಾರ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರೂ, ಹಲವು ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
Vijaya Karnataka Web swathi murder case holes remain as police piece together a tale
ಸ್ವಾತಿ ಕೊಲೆ: ಉತ್ತರ ಸಿಗದ ಪ್ರಶ್ನೆಗಳು


ಸ್ವಾತಿಗೆ ಕೆಲವು ದಿನಗಳ ಹಿಂದೆ ಕಪ್ಪಗಿದ್ದ ವ್ಯಕ್ತಿಯೊಬ್ಬ ಕೆನ್ನೆಗೆ ಹೊಡೆದಿದ್ದಾಗಿ ಈ ಘಟನೆಯ ಪ್ರತ್ಯಕ್ಷದರ್ಶಿ ತಮಿಳ್ ಸೆಲ್ವನ್ ಎಂಬುವವರು ಪೊಲೀಸರಿಗೆ ಹೇಳಿದ್ದಾರೆ. ಹಾಗಾದರೆ ಆ ವ್ಯಕ್ತಿ ಯಾರು, ಆತನಿಗೂ, ಸ್ವಾತಿಗೂ ಇದ್ದ ಸ್ನೇಹ ಎಂಥದ್ದು ಎಂಬುವುದು ಪತ್ತೆಯಾಗಬೇಕಿದೆ.

ಸೂರ್ಯಪ್ರಕಾಶ್ ಎಂಬಾತನೇ ಸ್ವಾತಿಗೆ ರಾಮ್‌ಕುಮಾರ್‌ನನ್ನು ಪರಿಚಯಿಸಿದ್ದು. ಆದರೆ, ಇದೀಗ ಆರೋಪಿಯ ಫೇಸ್‌ಬುಕ್ ಫ್ರೆಂಡ್ಸ್‌ ಪಟ್ಟಿಯಲ್ಲಿ ಸೂರ್ಯಪ್ರಕಾಶ್ ಹೆಸರಿಲ್ಲ. ಈತನಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಾಗಿದ್ದು, ಈತನ ಬಗ್ಗೆ ಮಾಹಿತಿ ಪೊಲೀಸರ ಬಳಿ ಇಲ್ಲ.

ಈ ಕೊಲೆ ಪ್ರಕರಣದ ಮತ್ತೊಬ್ಬ ಪ್ರಮುಖ ಸಾಕ್ಷಿ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ನಟೇಸನ್. ಈತ ರಾಮ್‌ಕುಮಾರ್‌ ರೂಂಮೇಟ್‌ ಆಗಿದ್ದ. ಪೊಲೀಸರ ರೇಲ್ವೆ ಸ್ಟೇಷನ್‌ನಲ್ಲಿ ಆರೋಪಿ ಕೊಲೆ ಮಾಡಿದ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿದ ಕೂಡಲೇ, ಆರೋಪಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ, ನಂತರ ನೀಡಿದ್ದಾನೆ. ಈ ನಿಧಾನಕ್ಕೆ ಕಾರಣವೇನು ಎಂಬುವುದು ತಿಳಿಯಬೇಕಾಗಿದೆ. ಏತನ್ಮಧ್ಯೆ, ಈತ ಪೊಲೀಸ್ ವಶದಲ್ಲಿದ್ದಾನೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ