ಆ್ಯಪ್ನಗರ

ಕೇರಳ: 10 ವರ್ಷ ಪಂಚಾಯಿತಿಯಲ್ಲಿ ಕಸ ಗುಡಿಸಿದಾಕೆ ಈಗ ಅದೇ ಪಂಚಾಯತ್‌ ಅಧ್ಯಕ್ಷೆ!

ಕೊಲ್ಲಂ ಜಿಲ್ಲೆಯ ಪಥನಂಪುರಂ ಪಂಚಾಯಿತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಿಪಿಐ(ಎಂ) ಬೆಂಬಲದಿಂದ ಸ್ಪರ್ಧಿಸಿದ್ದ ಆನಂದವಲ್ಲಿ ಅವರು ಜಯಗಳಿಸಿದ್ದು. ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಾದ ಹಿನ್ನೆಲೆಯಲ್ಲಿ ಅವರಿಗೆ ಅಧ್ಯಕ್ಷ ಹುದ್ದೆಯೂ ಒಲಿದು ಬಂದಿದೆ.

Agencies 1 Jan 2021, 8:47 pm
ತಿರುವನಂತಪುರಂ: ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹತ್ತು ವರ್ಷಗಳಿಂದ ಅರೆಕಾಲಿಕ ಸಿಬ್ಬಂದಿಯಾಗಿ ಕಸ ಗುಡಿಸಿಕೊಂಡಿದ್ದ 46 ವರ್ಷದ ಎ. ಆನಂದವಲ್ಲಿ ಈಗ ಅದೇ ಪಂಚಾಯಿತಿಯ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ!
Vijaya Karnataka Web Sweeper to president kerala


ಕೇರಳದ ಕೊಲ್ಲಂ ಜಿಲ್ಲೆಯ ಪಥನಂಪುರಂ ಬ್ಲಾಕ್‌ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಿಪಿಐ(ಎಂ)ನಿಂದ ಟಿಕೆಟ್‌ ಪಡೆದು ಸ್ಪರ್ಧಿಸಿದ್ದ ಆನಂದವಲ್ಲಿ ಅವರು ಜಯಗಳಿಸಿದ್ದು. ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಾದ ಹಿನ್ನೆಲೆಯಲ್ಲಿ ಆನಂದವಲ್ಲಿ ಅವರಿಗೆ ಅಧ್ಯಕ್ಷ ಹುದ್ದೆ ಒಲಿದಿದೆ. 13 ಸದಸ್ಯರ ಬಲದ ಪಂಚಾಯಿತಿಯಲ್ಲಿ ಎಲ್‌ಡಿಎಫ್‌ 7 ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟ ಆರು ಸ್ಥಾನ ಗೆದ್ದುಕೊಂಡಿವೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಿಣರಾಯಿಗೆ ಭರ್ಜರಿ ಗೆಲುವು, ಕಾಂಗ್ರೆಸ್‌ಗೆ ಭಾರಿ ಮುಖಭಂಗ
ಎಲ್‌ಡಿಎಫ್‌ನಿಂದ ಆನಂದವಲ್ಲಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಡಿ.30 ರಿಂದ ಅವರು ಪಂಚಾಯಿತಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆನಂದವಲ್ಲಿ, "ನನ್ನ ಕೈಯಿಂದ ಟೀ ತರಿಸಿಕೊಂಡು ಕುಡಿಯುತ್ತಿದ್ದ ಪಂಚಾಯಿತಿ ಅಧಿಕಾರಿಗಳು ಅದೇ ಪಂಚಾಯಿತಿಯ ಉನ್ನತ ಹುದ್ದೆಯಲ್ಲಿ ನಾನಿರುವುದನ್ನು ಕಂಡು ತುಂಬ ಸಂತಸಪಡುತ್ತಿದ್ದಾರೆ. ಅವರೇ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿದ್ದರು. ನನ್ನ ಪತಿ ಮೋಹನನ್‌ ಸ್ಥಳೀಯ ಸಿಪಿಐ(ಎಂ) ಸಮಿತಿ ಸದಸ್ಯರಾಗಿದ್ದಾರೆ. ಆಡಳಿತದ ಕ್ರಮಗಳನ್ನು ನಿಧಾನವಾಗಿ ಕಲಿಯುತ್ತೇನೆ. ಉತ್ತಮ ಕೆಲಸ ಮಾಡಬೇಕೆನ್ನುವುದು ಮಾತ್ರ ನನ್ನ ಇಚ್ಛೆ," ಎಂದಿದ್ದಾರೆ.

ಆನಂದವಲ್ಲಿ ಅವರಿಗೆ 2017ರವರೆಗೂ ಪಂಚಾಯಿತಿ ವತಿಯಿಂದ ಮಾಸಿಕ 2 ಸಾವಿರ ರೂ. ವೇತನ ನೀಡಲಾಗುತ್ತಿತ್ತು. 2017ರಲ್ಲಿ ವೇತನವನ್ನು 6 ಸಾವಿರ ರೂ.ಗೆ ಏರಿಕೆ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ