ಆ್ಯಪ್ನಗರ

ಸ್ವಾಮೀಜಿ ಬಕೆಟ್ ಮುಟ್ಟಿದ್ದಕ್ಕೆ ದಲಿತ ಕಾರ್ಮಿಕನ ಮೇಲೆ ಹಲ್ಲೆ

ಪ್ರಮಾದವಶಾತ್ ಸ್ವಾಮೀಜಿಯ ಬಕೆಟ್ ಮುಟ್ಟಿದ್ದ ದಲಿತ ಕಾರ್ಮಿಕನ ಮೇಲೆ ಸಾಧುಗಳು ಕೊಲಿನಿಂದ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.

TIMESOFINDIA.COM 28 Dec 2018, 11:56 am
ಅಲಹಾಬಾದ್: ಕುಂಭಮೇಳ ನಡೆಯುವ ಆವರಣದಲ್ಲಿ ಕಸ ಗುಡಿಸುವಾಗ ಪ್ರಮಾದವಶಾತ್ ಸ್ವಾಮೀಜಿಯ ಬಕೆಟ್ ಮುಟ್ಟಿದ್ದ ದಲಿತ ಕಾರ್ಮಿಕನನ್ನು ಸಾಧುಗಳು ಕ್ರೂರವಾಗಿ ಥಳಿಸಿದ ಅಮಾನವೀಯ ಘಟನೆ ಝಾನ್ಸಿ ಠಾಣಾ ವ್ಯಾಪ್ತಿಯ ಟ್ರಾನ್ಸ್-ಗಂಗಾ ಪ್ರದೇಶದಲ್ಲಿ ನಡೆದಿದೆ.
Vijaya Karnataka Web assult


ಭೀಕರ ಹಲ್ಲೆಯಲ್ಲಿ ಮಧ್ಯಪ್ರದೇಶದ ಛತ್ತರ್ಪುರ್ ಮೂಲದ ಕಾರ್ಮಿಕ ಮತಾದೀನ್ ಎಂಬವರ ಬಲಗೈ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಅಪರಿಚಿತ ಸಾಧು-ಸಂತರ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆಕೋರರ ವಿರುದ್ಧ ವಿವಿಧ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದರೂ, ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.

'ಕಳೆದ ಆರು ದಿನಗಳ ಹಿಂದೆ ಕುಂಭಮೇಳ ನಡೆಯುವ ಆವರಣದಲ್ಲಿ ಕಸ ಗುಡಿಸುವಾಗ ಪ್ರಮಾದವಶಾತ್ ಸ್ವಾಮೀಜಿಯ ಬಕೆಟ್ ಮುಟ್ಟಿದ್ದ ದಲಿತ ಕಾರ್ಮಿಕನ ಮೇಲೆ ಸಾಧುಗಳು ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಆರೋಪಿತ ಸಾಧುಗಳ ಪತ್ತೆಗೆ ಬಲೆ ಬೀಸಿದ್ದೇವೆ. ಶೀಘ್ರದಲ್ಲಿಯೇ ಅವರನ್ನು ಬಂಧಿಸುತ್ತೇವೆ' ಎಂದು ಝಾನ್ಸಿ ಠಾಣಾಧಿಕಾರಿ ಎ.ಕೆ.ತ್ಯಾಗಿ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ