ಆ್ಯಪ್ನಗರ

ಸ್ವಾತಿ ಕೊಲೆ: ಮೊಬೈಲ್ ಸ್ವಿಚ್ ಆನ್ ಮಾಡಿದ್ದ ಆರೋಪಿ

ಪ್ರತಿಯೊಬ್ಬ ಅಪರಾಧಿಯೂ ಏನಾದರೊಂದು ಯಡವಟ್ಟು ಮಾಡಿಯೇ ಮಾಡುತ್ತಾನೆಂಬುವುದು ಇನ್ಫಿ ಟೆಕ್ಕಿ ಎಸ್.ಸ್ವಾತಿ ಕೊಲೆ ಆರೋಪಿಗೂ ಅನ್ವಯಿಸುತ್ತದೆ.

ಏಜೆನ್ಸೀಸ್ 3 Jul 2016, 3:56 pm
ಚೆನ್ನೈ: ಪ್ರತಿಯೊಬ್ಬ ಅಪರಾಧಿಯೂ ಏನಾದರೊಂದು ಯಡವಟ್ಟು ಮಾಡಿಯೇ ಮಾಡುತ್ತಾನೆಂಬುವುದು ಇನ್ಫಿ ಟೆಕ್ಕಿ ಎಸ್.ಸ್ವಾತಿ ಕೊಲೆ ಆರೋಪಿಗೂ ಅನ್ವಯಿಸುತ್ತದೆ. ಕೊಲೆ ಮಾಡಿದ ನಂತರ ಸ್ವಾತಿ ಮೊಬೈಲ್ ಕೊಂಡೋಯ್ದಿದ್ದ ಪಿ.ರಾಮ್‌ಕುಮಾರ್ ಕೃತ್ಯವೆಸಗಿದ ಕೆಲವು ಗಂಟೆಗಳ ನಂತರ ಮೊಬೈಲ್ ಸ್ವಿಚ್ ಆನ್ ಮಾಡಿ, ಆಫ್ ಮಾಡಿದ್ದಾನೆ. ಇದರಿಂದಲೇ ಪೊಲೀಸರಿಗೆ ಆರೋಪಿಯ ಇರುವಿಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.
Vijaya Karnataka Web switching on swathis phone did murderer in
ಸ್ವಾತಿ ಕೊಲೆ: ಮೊಬೈಲ್ ಸ್ವಿಚ್ ಆನ್ ಮಾಡಿದ್ದ ಆರೋಪಿ


ನುಂಗುಂಬಕಂ ರೈಲ್ವೆ ಸ್ಟೇಷನ್‌ನಲ್ಲಿ ಜೂನ್ 24ರಂದು ಸ್ವಾತಿ ಹತ್ಯೆಗೈದ ನಂತರ ಚೂಲೈಮೆಡುವಿನಲ್ಲಿ ಅಡಗಿದ್ದ ರವಿಕುಮಾರ್‌ನನ್ನು ಪೊಲೀಸರು ಮೊಬೈಲ್ ಮೂಲಕವೇ ಪತ್ತೆ ಹಚ್ಚಿದ್ದಾರೆ. ಆತ ಕೆಲವೇ ಕೆಲವು ಸೆಕೆಂಡ್‌ಗಳ ಪೋನ್ ಸ್ವಿಚ್ ಆನ್ ಮಾಡಿದ್ದ.

ಮೊದಲು ಸರಕಾರಿ ರೈಲ್ವೆ ಪೊಲೀಸರ ಆರೋಪಿಗಾಗಿ ಶೋಧ ನಡೆಸಿದರು. ನಂತರ ನಗರ ಪೊಲೀಸರು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯನ್ನಿಟ್ಟುಕೊಂಡು ಸೌರಾಷ್ಟ್ರ ನಗರ ಪ್ರದೇಶದಲ್ಲಿ ಆರೋಪಿಗಾಗಿ ಶೋಧಿಸಿದರು. ವಾಚ್‌ಮನ್ ಒಬ್ಬ ರವಿಕುಮಾರ್‌ನನ್ನು ಪತ್ತೆ ಹಚ್ಚಿದ್ದರಿಂದ ಪೊಲೀಸರಿಗೆ ಅನುಕೂಲವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ