ಆ್ಯಪ್ನಗರ

ಕಾವೇರಿ ವಿವಾದ: ಶಾಶ್ವತ ನ್ಯಾಯಾಧಿಕರಣಕ್ಕೆ ತ.ನಾಡು ವಿರೋಧ

ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿಂತೆ ಬಿಕ್ಕಟ್ಟು ಇತ್ಯರ್ಥಕ್ಕೆ ಶಾಶ್ವತ ನ್ಯಾಯಾಧಿಕರಣ ಸ್ಥಾಪಿಸುವ ಕೇಂದ್ರ ಸರಕಾರದ ಪ್ರಸ್ತಾವನೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ...

Agencies 30 Nov 2017, 5:30 am

ಚೆನ್ನೈ: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿಂತೆ ಬಿಕ್ಕಟ್ಟು ಇತ್ಯರ್ಥಕ್ಕೆ ಶಾಶ್ವತ ನ್ಯಾಯಾಧಿಕರಣ ಸ್ಥಾಪಿಸುವ ಕೇಂದ್ರ ಸರಕಾರದ ಪ್ರಸ್ತಾವನೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ.

Vijaya Karnataka Web t n opposes pwdt insists not to hamper cauvery tribunal
ಕಾವೇರಿ ವಿವಾದ: ಶಾಶ್ವತ ನ್ಯಾಯಾಧಿಕರಣಕ್ಕೆ ತ.ನಾಡು ವಿರೋಧ


ಶಾಶ್ವತ ನ್ಯಾಯಮಂಡಳಿ ರಚನೆಯಿಂದ ಹಾಲಿ ಇರುವ 'ಕಾವೇರಿ ನೀರು ವ್ಯಾಜ್ಯ ನ್ಯಾಯಾಧಿಕರಣ'ದ (ಸಿಡಬ್ಲ್ಯೂಡಿಟಿ) ಕಾರ್ಯನಿರ್ವಹಣೆಗೆ ಅಡ್ಡಿಯಾಗಬಾರದು ಎಂದು ಕೇಂದ್ರಕ್ಕೆ ತಮಿಳುನಾಡು ಸರಕಾರ ತಾಕೀತು ಮಾಡಿದೆ.

ಶಾಶ್ವತ ನ್ಯಾಯಾಧಿಕರಣ ಸ್ಥಾಪನೆ ಬಗ್ಗೆ ತಮಿಳುನಾಡಿಗೆ ಮಾಹಿತಿ ನೀಡಿ, ಕೇಂದ್ರ ಸರಕಾರ ಬರೆದಿರುವ ಪತ್ರಕ್ಕೆ ಪ್ರತ್ಯುತ್ತರ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ''ಅಂತಾರಾಜ್ಯ ನದಿ ನೀರು ವಿವಾದಗಳನ್ನು ಬಗೆಹರಿಸಲು ಶಾಶ್ವತ ಇತ್ಯರ್ಥ ನ್ಯಾಯಾಧಿಕರಣವೊಂದನ್ನು ಸ್ಥಾಪಿಸುವ ಅಗತ್ಯವೇ ಇಲ್ಲ,'' ಎಂದಿದ್ದಾರೆ.

ಉದ್ದೇಶಿತ 'ಅಂತಾರಾಜ್ಯ ನದಿ ನೀರು ವಿವಾದ (ತಿದ್ದುಪಡಿ) ವಿಧೇಯಕ-2017'ವು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಉದ್ದೇಶಿತ ಶಾಶ್ವತ ನ್ಯಾಯಮಂಡಳಿಗೆ ಬಾಕಿ ಉಳಿದಿರುವ ಪ್ರಕರಣಗಳನ್ನು ವರ್ಗಾಯಿಸುವ ನೆಪದಲ್ಲಿ, ಹಾಲಿ ನ್ಯಾಯಮಂಡಳಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಾರದು ಎಂದು ಅವರು ಹೇಳಿದ್ದಾರೆ.

''ರಾಜ್ಯಗಳ ನಡುವಿನ ಜಲ ವಿವಾದಗಳನ್ನು ಇತ್ಯರ್ಥಗೊಳಿಸಲು 2002ರವರೆಗೂ ಪರಿಷ್ಕರಣೆಗೆ ಒಳಪಟ್ಟಿರುವ ಅಂತಾರಾಜ್ಯ ನದಿ ನೀರು ವಿವಾದ ಕಾಯಿದೆಯೇ(1956) ಸಾಕಾಗಿದೆ. ಮತ್ತೊಂದು ಹೊಸ ವಿಧೇಯಕ ಅಥವಾ ತಿದ್ದುಪಡಿ ಅಗತ್ಯವಿಲ್ಲ ಎಂಬುದು ತಮಿಳುನಾಡು ಸರಕಾರದ ನಂಬಿಕೆ,'' ಎಂದಿದ್ದಾರೆ.

ಅಲ್ಲದೆ, ಉದ್ದೇಶಿತ ವಿಧೇಯಕದ ವಿಚಾರದಲ್ಲಿ ಕೇಂದ್ರ ಸರಕಾರ ಮುಂದವರಿಯಬಾರದು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ