ಆ್ಯಪ್ನಗರ

ಉ.ಪ್ರ ಚುನಾವಣೆ ಬಳಿಕ ತ್ರಿವಳಿ ತಲಾಖ್ ನಿಷೇಧ?

ಸಾಮಾಜಿಕ ದುಷ್ಟ ಸಂಪ್ರದಾಯವಾಗಿರುವ ‘ತ್ರಿವಳಿ ತಲಾಖ್’ಗೆ ತಿಲಾಂಜಲಿ ಹಾಡಲು ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.

Vijaya Karnataka Web 6 Feb 2017, 10:22 am
ಲಖನೌ: ಸಾಮಾಜಿಕ ದುಷ್ಟ ಸಂಪ್ರದಾಯವಾಗಿರುವ ‘ತ್ರಿವಳಿ ತಲಾಖ್’ಗೆ ತಿಲಾಂಜಲಿ ಹಾಡಲು ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
Vijaya Karnataka Web talaq ban after up election
ಉ.ಪ್ರ ಚುನಾವಣೆ ಬಳಿಕ ತ್ರಿವಳಿ ತಲಾಖ್ ನಿಷೇಧ?


ಈ ಸಂಬಂಧ ಸ್ಪಷ್ಟ ನಿಲುವು ತಳೆಯುವಂತೆ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಬಿಎಸ್ಪಿಗೆ ಸೂಚಿಸಿರುವ ಅವರು, ಉತ್ತರ ಪ್ರದೇಶ ಚುನಾವಣೆ ಬಳಿಕ ಸರಕಾರ ಈ ಸಂಬಂಧ ದೃಢ ನಿರ್ಧಾರ ಕೈಗೊಳ್ಳುವ ಸುಳಿವು ನೀಡಿದ್ದಾರೆ.

‘ಉತ್ತರ ಪ್ರದೇಶ ಚುನಾವಣೆ ಬಳಿಕ ಸರಕಾರ ಮಹಿಳೆಯರಿಗೆ ಗೌರವ ನೀಡದ ತ್ರಿವಳಿ ತಲಾಖ್ಗೆ ನಿಷೇಧ ಹೇರಲು ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಲ್ಲಿ ಮಾತನಾಡಿದ ಮಾತನಾಡಿದ ಸಚಿವರು, ‘ಸರಕಾರ ನಂಬಿಕೆಯನ್ನು ಗೌರವಿಸುತ್ತದೆ, ಆದರೆ ಆರಾಧನೆ ಮತ್ತು ದುಷ್ಟ ಸಂಪ್ರದಾಯಗಳು ಎರಡೂ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ’ ಎಂದರು.

ಇದೇ ವೇಳೆ ತ್ರಿವಳಿ ತಲಾಖ್ ಧರ್ಮಕ್ಕೆ ಸಂಬಂಧಿಸಿದ ವಿಚಾರವಲ್ಲ, ಬದಲಿಗೆ ಅದು ಮಹಿಳೆಯ ಘನತೆಗೆ ಸಂಬಂಧಿಸಿದ ವಿಷಯ ಎಂದು ಪ್ರಸಾದ್ ಸ್ಪಷ್ಟಪಡಿಸಿದರು.

‘ಮಹಿಳೆಯರಿಗೆ ಗೌರವ ನೀಡುವ ಏಕೈಕ ಪಕ್ಷವೆಂದರೆ, ಅದು ಬಿಜೆಪಿ ಮಾತ್ರ. ಇತರ ಪಕ್ಷಗಳು ಮಹಿಳೆಯರಿಗೆ ಗೌರವ ನೀಡುವುದಿಲ್ಲ, ಅವರಿಗೆ ಉತ್ತಮ ಸ್ಥಾನವನ್ನೂ ನೀಡುವುದಿಲ್ಲ’ ಎಂದು ಅವರು ಸಮರ್ಥಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ