ಆ್ಯಪ್ನಗರ

ಮೋದಿಗಾಗಿ ಗುಡಿ ಕಟ್ಟಿ, ನಿತ್ಯ ಪೂಜೆ: ವಿಭಿನ್ನ ಅಭಿಮಾನ ಮೆರೆದ ತಮಿಳುನಾಡು ರೈತ

ಮೋದಿ ಅವರ ಬಹುದೊಡ್ಡ ಅಭಿಮಾನಿಯಾಗಿರುವ ತಮಿಳುನಾಡಿನ ರೈತನೋರ್ವ ಮೋದಿಗಾಗಿ ಗುಡಿ ಕಟ್ಟಿಸಿದ್ದಾನೆ. 8 ಚದರ ಅಡಿ ವಿಸ್ತೀರ್ಣದಲ್ಲಿ ಈ ಗುಡಿ ಕಟ್ಟಲಾಗಿದ್ದು, ಇಲ್ಲಿ ದಿನಾಲು ಪೂಜೆ ನಡೆಯುತ್ತದೆ.

Vijaya Karnataka Web 26 Dec 2019, 3:59 pm
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಬಹುದೊಡ್ಡ ಅಭಿಮಾನಿಯಾಗಿರುವ ತಮಿಳುನಾಡು ರೈತನೋರ್ವ ಬಹಳ ವಿಭಿನ್ನವಾಗಿ ತನ್ನ ಪ್ರೇಮವನ್ನು ಮೆರೆದಿದ್ದಾನೆ. ತಿರುಚಿರಾಪಲ್ಲಿಯಲ್ಲಿ ಮೋದಿಗಾಗಿ ದೇವಾಲಯವನ್ನು ಕಟ್ಟಿಸಿದ್ದಾನೆ.
Vijaya Karnataka Web modi


ತಿರುಚಿರಾಪಲ್ಲಿಯ ಎರಾಕ್ಕುಡಿ ಎಂಬ ಗ್ರಾಮದಲ್ಲಿ 50 ವರ್ಷದ ಪಿ.ಶಂಕರ್ ಎಂಬ ರೈತ ಮೋದಿ ದೇವಾಲಯ ಕಟ್ಟಿಸಿದಾತ. ಅಯ್ಯ (ಮೋದಿ) ಗಾಗಿ ದೇಗುಲ ನಿರ್ಮಾಣ ಮಾಡಲು 8 ತಿಂಗಳ ಹಿಂದೆಯೇ ನಿರ್ಧಾರ ಮಾಡಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ವಾರಗಳ ಹಿಂದೆ ದೇಗುಲ ಉದ್ಘಾಟನೆಯಾಗಿದೆ. ಪ್ರಧಾನಿ ಮೋದಿ ಅವರು ಮಾಡಿರುವ ಕೆಲಸದಿಂದ ತುಂಬಾ ಪ್ರಭಾವಿತನಾಗಿದ್ದು, ಅವರ ಯೋಜನೆಗಳ ಫಲಾನುಭವಿಯೂ ಆಗಿದ್ದೇನೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ನನಗೆ ಹಲವು ಪ್ರಯೋಜನವಾಗಿದೆ. ಹೀಗಾಗಿ ಅವರಿಗೆ ದೇವಾಲಯ ಕಟ್ಟಿಸಿದ್ದೇನೆ" ಎಂದು ರೈತ ಹೇಳಿದ್ದಾನೆ.



ಮೋದಿಗಾಗಿ ಕಟ್ಟಿರುವ ಈ ಗುಡಿಯು 8 ಚದರ ಅಡಿ ವಿಸ್ತೀರ್ಣ ಇದ್ದು, ಇದಕ್ಕೆ ಪ್ರತೀದಿನ ಪೂಜೆ ಸಲ್ಲಿಸಲಾಗುತ್ತಿದೆ. ಈ ಗುಡಿ ನಿರ್ಮಿಸಲು ರೂ.1.2 ಲಕ್ಷ ವೆಚ್ಚವಾಗಿದೆಯಂತೆ. ಮೋದಿ ಅವರ ಪ್ರತಿಮೆಯ ಜೊತೆಗೆ ಅದೇ ಕೊಠಡಿಯಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ, ಹಾಲಿ ಸಿಎಂ ಪಳನಿಸ್ವಾಮಿ, ಗೃಹ ಮಂತ್ರಿ ಅಮಿತ್ ಶಾ ಚಿತ್ರಗಳನ್ನೂ ಇಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ