ಆ್ಯಪ್ನಗರ

2 ವರ್ಷಗಳಿಂದ ಕೋಮಾದಲ್ಲಿರುವ ವ್ಯಕ್ತಿ ಭಾರತಕ್ಕೆ ವಾಪಸ್

ಎರಡು ವರ್ಷದ ಹಿಂದೆ ಅಬುಧಾಬಿನಲ್ಲಿ ನಡೆದಿದ್ದ ಅಪಘಾತದಲ್ಲಿ ಕೋಮಾಗೆ ಜಾರಿದ್ದ ವ್ಯಕ್ತಿಯನ್ನು ಮತ್ತೆ ಭಾರತಕ್ಕೆ ಕರೆ ತರಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 19 Jul 2017, 12:15 pm
ಚೆನ್ನೈ: ಎರಡು ವರ್ಷದ ಹಿಂದೆ ಅಬುಧಾಬಿನಲ್ಲಿ ನಡೆದಿದ್ದ ಅಪಘಾತದಲ್ಲಿ ಪೆಟ್ಟು ಬಿದ್ದ ನಂತರ ಕೋಮಾಗೆ ಜಾರಿದ್ದ ಚೆನ್ನೈ ಮೂಲದ ವ್ಯಕ್ತಿಯನ್ನು ಭಾರತೀಯ ದೂತಾವಾಸ ಅಧಿಕಾರಿಗಳ ನೆರವಿನಿಂದ ಮತ್ತೆ ಭಾರತಕ್ಕೆ ಕರೆ ತರಲಾಗಿದೆ.
Vijaya Karnataka Web tamil nadu man in coma for 2 years in gulf brought home
2 ವರ್ಷಗಳಿಂದ ಕೋಮಾದಲ್ಲಿರುವ ವ್ಯಕ್ತಿ ಭಾರತಕ್ಕೆ ವಾಪಸ್


2015ರಲ್ಲಿ ಚಿತ್ರವೇಲ್‌ ವೆನೈತೀರ್ಥ ಉದಯೈರ್‌ ಎಂಬವರು ಅಬುಧಾಬಿನಲ್ಲಿ ಕಚೇರಿ ಕೆಲಸದ ನಿಮಿತ್ತ ಪ್ರಯಾಣ ಮಾಡುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದರು. ಘಟನೆ ನಂತರ ಕೋಮಾಗೆ ಜಾರಿರುವ ಉದಯೈರ್‌ ಆಸ್ಪತ್ರೆ ಖರ್ಚನ್ನು ಪೂರೈಸಲು ವಿಮಾ ಕಂಪನಿ ಹಿಂದೇಟು ಹಾಕಿತ್ತು. ಹೀಗಾಗಿ ಇವರ ಕುಟುಂಬ ಅಲ್ಲಿನ ನ್ಯಾಯಾಲಯದ ಮೆಟ್ಟಲೇರಿತ್ತು.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಉದಯೈರ್‌ ಪರ ತೀರ್ಪು ನೀಡಿತ್ತು. ಅಪರೂಪದಲ್ಲಿ ಅಪರೂಪವೆಂಬಂತೆ ಕೋಮಾ ಸ್ಥಿತಿಯಲ್ಲಿರುವ ಉದಯೈರ್‌ ಆಸ್ಪತ್ರೆ ಖರ್ಚನ್ನು ಸಂಪೂರ್ಣವಾಗಿ ಭರಿಸುವಂತೆ ನ್ಯಾಯಾಲಯ ವಿಮಾ ಕಂಪನಿಗೆ ಆದೇಶಿಸಿತ್ತು.

ರಾಷ್ಟ್ರೀಯ ಕಾರ್ಮಿಕರ ಚಳವಳಿ ನಾಯಕಿ ಸಿಸ್ಟರ್‌ ಜೋಸೆಫೈನ್ ವ್ಯಾಲರ್ಮತಿ ಈ ಪ್ರರಕಣವನ್ನು ಕೇಂದ್ರದ ಗಮನಕ್ಕೆ ತಂದಿದ್ದರು. ನಂತರ ದೂತಾವಾಸ ಅಧಿಕಾರಿಗಳು ಉದಯೈರ್‌ ದೇಶಕ್ಕೆ ವಾಪಸಾಗಲು ಸಹಕರಿಸಿದರು.

'ಸುಮಾರು ಎರಡು ವರ್ಷಗಳ ಕಾಲ ಉದಯೈರ್‌ ಕೋಮಾ ಸ್ಥಿತಿಯಲ್ಲಿದ್ದು ಇವರ ವೇತನವನ್ನು ಕಂಪನಿಯು ನನಗೆ ನೀಡುತ್ತಿದ್ದೆ, ಅಲ್ಲದೇ ಚಿಕಿತ್ಸಾ ವೆಚ್ಚ ಕೂಡಾ ಕಂಪನಿಯೇ ಬರಿಸುತ್ತಿದೆ. ನಮಗೆ ನಾಲ್ಕು ವರ್ಷದ ಮಗಳಿದ್ದು, ಕುಟುಂಬ ನಿರ್ವಹಣೆಗೆ ಏನೂ ತೊಚದಂತಾಗಿದೆ,' ಎಂದಿರುವ ಉದಯೈರ್‌ ಪತ್ನಿ ಸಿ ಪರಮೇಶ್ವರಿ ಸರಕಾರದ ನೆರವು ಯಾಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ