ಆ್ಯಪ್ನಗರ

ಎಂಜಿನಿಯರ್‌ ಮಗನನ್ನು ದೇವರಿಗೆ ಬಲಿ ಕೊಡಲು ಅನುಮತಿ ಕೋರಿದ ಮಾಂತ್ರಿಕ!

ಪಾಗ್ಲಾ ಬಾಬಾ(ಹುಚ್ಚ ಬಾಬಾ) ಎಂದೇ ಹೆಸರಾಗಿರುವ ಬೇಗುಸರಾಯಿಯ ಮೋಹನ್‌ಪುರ ಪಹಾಡ್‌ಪುರದ ಮಾಂತ್ರಿಕ ಸುರೇಂದ್ರ ಪ್ರಸಾದ್‌ ಸಿಂಗ್‌ ಈ ರೀತಿ ಮನವಿ ಮಾಡಿದವನು. ಆತ ಉಪವಿಭಾಗಾಧಿಕಾರಿಗೆ ಬರೆದ ಪತ್ರದ ವಿಡಿಯೊ ವೈರಲ್‌ ಆಗಿದೆ. ಆದರೆ, ಅಧಿಕಾರಿಗಳು ತಮಗೆ ಯಾವುದೇ ಪತ್ರ ಬಂದಿಲ್ಲ ಎಂದು ಹೇಳಿದ್ದಾರೆ.

Vijaya Karnataka 3 Feb 2019, 12:40 pm
ಪಟನಾ: ಕದ್ದು ಮುಚ್ಚಿ ನರಬಲಿ ಕೊಡುತ್ತಾರೆ ಅಂತ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಬಾಬಾ ಎಂಜಿನಿಯರ್‌ ಆಗಿರುವ ತನ್ನ ಮಗನನ್ನು ದೇವರಿಗೆ ಬಲಿ ಕೊಡಲು ಆಡಳಿತದ ಅನುಮತಿ ಕೋರಿ ಪತ್ರ ಬರೆದಿದ್ದಾನೆ!
Vijaya Karnataka Web mata


ಪಾಗ್ಲಾ ಬಾಬಾ(ಹುಚ್ಚ ಬಾಬಾ) ಎಂದೇ ಹೆಸರಾಗಿರುವ ಬೇಗುಸರಾಯಿಯ ಮೋಹನ್‌ಪುರ ಪಹಾಡ್‌ಪುರದ ಮಾಂತ್ರಿಕ ಸುರೇಂದ್ರ ಪ್ರಸಾದ್‌ ಸಿಂಗ್‌ ಈ ರೀತಿ ಮನವಿ ಮಾಡಿದವನು. ಆತ ಉಪವಿಭಾಗಾಧಿಕಾರಿಗೆ ಬರೆದ ಪತ್ರದ ವಿಡಿಯೊ ವೈರಲ್‌ ಆಗಿದೆ. ಆದರೆ, ಅಧಿಕಾರಿಗಳು ತಮಗೆ ಯಾವುದೇ ಪತ್ರ ಬಂದಿಲ್ಲ ಎಂದು ಹೇಳಿದ್ದಾರೆ.

'ಬಿಂದು ಮಾ ಮಾನವ ಕಲ್ಯಾಣ ಸಂಸ್ಥೆ'ಯ ಲೆಟರ್‌ ಹೆಡ್‌ನಲ್ಲಿ ಈ ಪತ್ರ ಬರೆದಿದ್ದು, ಕಾಮಾಖ್ಯ ದೇವರು ನರಬಲಿ ಕೇಳಿದ್ದಾರೆ ಎಂದಿದ್ದಾನೆ. ಕೈಯಲ್ಲೊಂದು ತಲೆ ಬುರುಡೆ ಹಿಡಿದುಕೊಂಡು ನಗ್ನವಾಗಿ ಓಡಾಡುವ ಈತ ಮಾನವ ಬಲಿ ತಪ್ಪಲ್ಲ ಎನ್ನುತ್ತಾನೆ. ಬೇಕಿದ್ದರೆ ಮೊದಲು ಮಗನನ್ನೇ ಬಲಿ ಕೊಡುತ್ತೇನೆ ಎನ್ನುತ್ತಾನೆ.

ಅಸಲಿ ವಿಷಯವೇನೆಂದರೆ, ಎಂಜಿನಿಯರ್‌ ಆಗಿರುವ ಮಗ ಸಂಜೀವ್‌ ಕುಮಾರ್‌ ದೇವಳಕ್ಕೆ ಹಣ ಕೊಡಲು ನಿರಾಕರಿಸಿದ್ದಾನಂತೆ. ಇದೀಗ ನರಬಲಿ ಹೆಸರಲ್ಲಿ ಅವನನ್ನು ಮುಗಿಸುವುದು ಈ ಮಂತ್ರವಾದಿಯ ಪ್ಲ್ಯಾನ್‌. ಅಧಿಕಾರಿಗಳು ಆತನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ