ಆ್ಯಪ್ನಗರ

ನಗದಿಗಾಗಿ ಟಾರ್ಸ್ಕ್ ಫೋರ್ಸ್

ದೇಶಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆ, ಅಂಚೆ ಕಚೇರಿ ಸೇರಿದಂತೆ ಅಧಿಕೃತ ಹಣಕಾಸು ಸಂಸ್ಥೆಗಳಿಗೆ ನಗದು ಲಭ್ಯತೆ ಸುಗಮಗೊಳಿಸಲು ಹಾಗೂ ಎಟಿಎಂ ಜಾಲವನ್ನು ತುರ್ತಾಗಿ ಹೊಸ ನೋಟುಗಳಿಗೆ ಸಜ್ಜುಗೊಳಿಸಲು ಕೇಂದ್ರ ಸರಕಾರ ಸೋಮವಾರ ‘ಕಾರ್ಯಪಡೆ’ಯನ್ನು ರಚಿಸಿದೆ.

ಏಜೆನ್ಸೀಸ್ 15 Nov 2016, 4:00 am
ನಗದು ಬಟವಾಡೆ ಸುಗಮಕ್ಕೆ ಮತ್ತಷ್ಟು ಕ್ರಮ / ಅಂಚೆ ಕಚೇರಿಗಳಿಗೆ ಹೆಚ್ಚಿನ ಕ್ಯಾಶ್ / ಬ್ಯಾಂಕ್‌ಗಳ ಹಣ ಸಂಗ್ರಹ ಮಿತಿ ಏರಿಕೆ
Vijaya Karnataka Web task force constituted to speed up cash distribution
ನಗದಿಗಾಗಿ ಟಾರ್ಸ್ಕ್ ಫೋರ್ಸ್


ಹೊಸದಿಲ್ಲಿ: ದೇಶಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆ, ಅಂಚೆ ಕಚೇರಿ ಸೇರಿದಂತೆ ಅಧಿಕೃತ ಹಣಕಾಸು ಸಂಸ್ಥೆಗಳಿಗೆ ನಗದು ಲಭ್ಯತೆ ಸುಗಮಗೊಳಿಸಲು ಹಾಗೂ ಎಟಿಎಂ ಜಾಲವನ್ನು ತುರ್ತಾಗಿ ಹೊಸ ನೋಟುಗಳಿಗೆ ಸಜ್ಜುಗೊಳಿಸಲು ಕೇಂದ್ರ ಸರಕಾರ ಸೋಮವಾರ ‘ಕಾರ್ಯಪಡೆ’ಯನ್ನು ರಚಿಸಿದೆ.

ಆರ್‌ಬಿಐ ಗವರ್ನರ್ ಎಸ್.ಎಸ್. ಮುಂದ್ರಾ ನೇತೃತ್ವದ ಕಾರ್ಯಪಡೆಯು ಎಟಿಎಂ ಜಾಲದ ಹಾರ್ಡ್‌ವೇರ್, ಸಾಫ್ಟ್‌ವೇರ್ ಪರಿಷ್ಕರಣೆ ಮತ್ತು ನಗದು ಬಟವಾಡೆಯ ಮೇಲೆ ನಿಗಾ ಇಡುವ ಜವಾಬ್ದಾರಿಗಳನ್ನು ನಿರ್ವಹಿಸಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಮುಂದ್ರಾ ನೇತೃತ್ವದ ಕಾರ್ಯಪಡೆಯು ಬ್ಯಾಂಕ್‌ಗಳು ಸೇರಿದಂತೆ ನಾನಾ ಹಣಕಾಸು ಸಂಸ್ಥೆಗಳ ಜತೆ ನಿಕಟವಾಗಿ ಕೆಲಸ ಮಾಡಲಿದೆ. ಸಾರ್ವಜನಿಕರಿಗೆ ಹೊಸ 500 ರೂ. ಹಾಗೂ 2,000 ರೂ. ಮುಖಬೆಲೆಯ ನೋಟುಗಳ ಲಭ್ಯತೆ ಸುಗಮಗೊಳಿಸುವ ಜವಾಬ್ದಾರಿಯನ್ನು ಇದು ನಿರ್ವಹಿಸಲಿದೆ. 8 ಸದಸ್ಯರ ಕಾರ್ಯಪಡೆ ಶೀಘ್ರವೇ ಸಭೆ ನಡೆಸಿ, ಎಟಿಎಂ ಜಾಲವನ್ನು ತ್ವರಿತವಾಗಿ ಸಕ್ರಿಯಗೊಳಿಸುವ ಕುರಿತು ಪರಾಮರ್ಶೆ ನಡೆಸಲಿದೆ.

ಇದೇ ವೇಳೆ, ಅಂಚೆ ಕಚೇರಿಗಳಿಗೆ ನಗದು ಹರಿವು ಹೆಚ್ಚಿಸುವ ಮತ್ತು ಬ್ಯಾಂಕ್‌ಗಳ ನಗದು ಸಂಗ್ರಹ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ