ಆ್ಯಪ್ನಗರ

ಶಿಕ್ಷಕರ ಅನುಪಸ್ಥಿತಿಯಲ್ಲಿ ಅಡುಗೆಯವಳಾದಳು ಟೀಚರ್

ಜಿಲ್ಲೆಯ ಮಧೋಗಂಜ್ ಪ್ರದೇಶದ ಶಾಲೆಯೊಂದರಲ್ಲಿ ಸೋಮವಾರ ಮುಖ್ಯ ಶಿಕ್ಷಕ ಸೇರಿದಂತೆ ಎಲ್ಲ ಶಿಕ್ಷಕರು ಗೈರಾಗಿದ್ದರಿಂದ ಅಡುಗೆಯವಳೇ ಪಾಠ ಹೇಳಿಕೊಡುವ ಪ್ರಸಂಗ ಎದುರಾಯಿತು.

Navbharat Times 7 Aug 2018, 3:30 pm
ಹರ್ದೋಯಿ: ಜಿಲ್ಲೆಯ ಮಧೋಗಂಜ್ ಪ್ರದೇಶದ ಶಾಲೆಯೊಂದರಲ್ಲಿ ಸೋಮವಾರ ಮುಖ್ಯ ಶಿಕ್ಷಕ ಸೇರಿದಂತೆ ಎಲ್ಲ ಶಿಕ್ಷಕರು ಗೈರಾಗಿದ್ದರಿಂದ ಅಡುಗೆಯವಳೇ ಪಾಠ ಹೇಳಿಕೊಡುವ ಪ್ರಸಂಗ ಎದುರಾಯಿತು.
Vijaya Karnataka Web School Chlidren


ವಾರದ ರಜೆ ಮುಗಿಸಿ ಎಂದಿನಂತೆ ಸೋಮವಾರ ಮಕ್ಕಳು ಶಾಲೆಗೆ ಬಂದಾಗ ಒಬ್ಬರೇ ಒಬ್ಬ ಶಿಕ್ಷಕರು ಕೂಡ ಇರಲಿಲ್ಲ. ಹೀಗಾಗಿ ಅಡುಗೆ ಮಾಡುತ್ತಿದ್ದ ಮಹಿಳೆಯೇ ಶಾಲಾ ಅವರಣದಲ್ಲಿ ಕುಳಿತು ಮಕ್ಕಳಿಗೆ ಪಾಠ ಮಾಡಿದ್ದಾರೆ.

ಶಿಕ್ಷಕರು ಬರುತ್ತಾರೆಂದು 11 ಗಂಟೆಯವರೆಗೆ ಕಾದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕಾದು ಕಾದು ಸುಸ್ತಾದ ಮಕ್ಕಳೆಲ್ಲ ಮನೆಗೆ ಹಿಂತಿರುಗಿದ್ದಾರೆ.

ಮಾಹಿತಿ ನೀಡದೆ ಎಲ್ಲ ಶಿಕ್ಷಕರು ಗೈರು ಹಾಜರಾದ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ಹೋಗಿದ್ದು, ಅವರು ತನಿಖೆಗೆ ಆದೇಶಿಸಿದ್ದಾರೆ.

ನಮ್ಮ ಇಲಾಖೆ ಈ ಕುರಿತು ಪರಿಶೀಲನೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹರ್ದೋಯ್ ಜಿಲ್ಲೆಯ ಪ್ರಾಥಮಿಕ ಶಿಕ್ಷಾಣಾಧಿಕಾರಿ ಹೇಮಂತ್ ರಾವ್ ಹೇಳಿದ್ದಾರೆ.


ಪ್ರತಿದಿನವೂ ಲೇಟು


ಈ ಮಧ್ಯೆ ಶಾಲೆಯ ಶಿಕ್ಷಕರ ವಿರುದ್ಧ ಗ್ರಾಮಸ್ಥರು ಕೂಡ ದೂರನ್ನು ನೀಡಿದ್ದು, ಮುಖ್ಯ ಶಿಕ್ಷಕ ಸುಧೀರ್ ಕುಮಾರ್, ಸಹಾಯಕ ಶಿಕ್ಷಕರಾದ ಶಿಲ್ಪಿ, ಜಿತೇಂದ್ರ ಸೇರಿದಂತೆ ಯಾರೊಬ್ಬರು ಕೂಡ ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ, ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಮೂಲವರದಿ: NavBharat Times

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ