ಆ್ಯಪ್ನಗರ

ರಕ್ತದ ಮಡುವಿನಲ್ಲಿ ಟೆಕ್ಕಿ ವಿಲವಿಲ: ವೀಡಿಯೊ ಕ್ಲಿಕ್ಕಿಸಿದ ಜನ

ಅಪಘಾತಗೊಂಡು ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡುತ್ತಿರುವಾಗ ಅಲ್ಲಿದ್ದವರು ನೆರವು ನೀಡುವ ಬದಲು ವೀಡಿಯೊ ಕ್ಲಿಕ್ಕಿಸಿರುವ ಪ್ರಕರಣ ಪುಣೆಯ ಭೋಸರಿಯಲ್ಲಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 21 Jul 2017, 8:30 am
ಪುಣೆ: ಅಪಘಾತಗೊಂಡು ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡುತ್ತಿರುವಾಗ ಅಲ್ಲಿದ್ದವರು ನೆರವು ನೀಡುವ ಬದಲು ವೀಡಿಯೊ ಕ್ಲಿಕ್ಕಿಸಿರುವ ಪ್ರಕರಣ ಪುಣೆಯ ಭೋಸರಿಯಲ್ಲಿ ನಡೆದಿದೆ.
Vijaya Karnataka Web techie lies bleeding on pune road passersby click photos
ರಕ್ತದ ಮಡುವಿನಲ್ಲಿ ಟೆಕ್ಕಿ ವಿಲವಿಲ: ವೀಡಿಯೊ ಕ್ಲಿಕ್ಕಿಸಿದ ಜನ


ಕೊನೆಗೆ ದಂತ ವೈದ್ಯ ಕಾರ್ತಿಕ್‌ ರಾಜ್‌ ಕಾಟೆ ಎಂಬವರು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಸತೀಶ್‌ ಪ್ರಭಾಕರ್‌ ಮೇಟೆ ಅವರನ್ನು ಪಿಂಪ್ರಿಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಸತೀಶ್‌ ಮೃತಪಟ್ಟಿದ್ದರು.

ರಸ್ತೆಯಲ್ಲಿ ರಕ್ತದ ಮಡುವಿನಲ್ಲಿದ್ದ ಸತೀಶ್‌ ಅವರ ಕೈ ಕಾಲು ಅಲ್ಲಾಡುತ್ತಿತ್ತು. ಆದರೆ ಯಾರೂ ನೆರವಿಗೆ ಮುಂದಾಗದೆ ವೀಡಿಯೊ ಮಾಡುತ್ತಿದ್ದರು. ಕೊನೆಗೆ ಆಟೊ ನಿಲ್ಲಿಸಿ ಚಾಲಕನ ನೆರವಿನೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಟೊ ಚಾಲಕ ಅದರಲ್ಲಿದ್ದ ಪ್ರಯಾಣಿಕರನ್ನುಇಳಿಸಿ ಸತೀಶ್‌ ಅವರನ್ನು ಕರೆದೊಯ್ಯಲು ನೆರವಾದ. ತಕ್ಷಣವೇ ಯಾರಾದರೂ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರೆ ಜೀವ ಉಳಿಯುತ್ತಿತ್ತು ಎಂದು ಕಾರ್ತಿಕ್‌ ತಿಳಿಸಿದ್ದಾರೆ.

ಸತೀಶ್‌ ಔರಂಗಬಾದ್‌ ನಿವಾಸಿಯಾಗಿದ್ದು, ಮೋಶಿಯಲ್ಲಿ ವಾಸವಿದ್ದು, ಭೋಸರಿಯಲ್ಲಿ ಕೆಲಸ ಮಾಡುತ್ತಿದ್ದರು.

techie lies bleeding: A 25-year-old software engineer, who was bleeding severely after being knocked down by a hit-andrun accident, died because he did not get timely help from passersby at Indrayaninagar corner in Bhosari on Wednesday evening.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ