ಆ್ಯಪ್ನಗರ

'ಕಿಸ್' ಬೇಡ ಎಂದಿದ್ದಕ್ಕೆ ಶಾಲಾ ಬಾಲಕಿಯನ್ನು ಕೊಂದೇ ಬಿಟ್ಟ!

ಸ್ನೇಹಿತೆಗೆ ಮುತ್ತು ಕೊಡಲು ಯತ್ನಿಸಿದ ಆತ, ಆಕೆ ತಳ್ಳಿದಾಗ ಕೋಪದಲ್ಲಿ ಕಲ್ಲ ಮೇಲಿಂದ ತಳ್ಳಿದ. ಪರಿಣಾಮ ಅನೂಹ್ಯವಾಗಿದ್ದು ನಡೆದು ಹೋಯಿತು.

TIMESOFINDIA.COM 9 Sep 2019, 2:59 pm
ಜಬಲ್ಪುರ: 12ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಗೆ ಮುತ್ತು ಕೊಡಲು ಪ್ರಯತ್ನಿಸಿದ ಹದಿಹರೆಯದ ಯುವಕನೋರ್ವ , ಆಕೆ ವಿರೋಧಿಸಿದ್ದಕ್ಕೆ ಕೋಪಗೊಂಡು ಕೊಂದೇ ಹಾಕಿದ ಬೆಚ್ಚಿ ಬೀಳಿಸುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
Vijaya Karnataka Web Police Hat


ಸೆಪ್ಟೆಂಬರ್ 5 ರಂದು ಈ ಹೇಯ ಘಟನೆ ನಡೆದಿದ್ದು, ಶನಿವಾರ ಆರೋಪಿಯನ್ನು ಬಂಧಿಸಲಾಗಿದೆ.

ಬಿಜಾಪುರಿ ಗ್ರಾಮದ ಅರಣ್ಯದಲ್ಲಿ ವಿದ್ಯಾರ್ಥಿನಿಯ ಮೃತ ದೇಹ ಪತ್ತೆಯಾಗಿದ್ದು ಆಕೆಯನ್ನು ಪಿಂಕಿ ಧುರ್ವೆ (18) ಎಂದು ಗುರುತಿಸಲಾಗಿದೆ. ಕುಟರಗೊಂಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಬಾಲಕಿ ಗುರುವಾರ ಮುಂಜಾನೆ ಮನೆಯಿಂದ ಶಾಲೆಗೆ ಹೊರಟವಳು ಮರಳಿರಲಿಲ್ಲ.

ಆಕೆಯ ಪತ್ತೆಗೆ ಬಲೆ ಬೀಸಿದ ಪೊಲೀಸರಿಗೆ ಸಂಬಂಧಿಕರಿಂದ ಮತ್ತು ಸ್ನೇಹಿತರಿಂದ ರಮಣ್ ಸಿಂಗ್ ಸಯ್ಯಮ್ (19) ಎಂಬಾತ ಆಕೆಯೊಂದಿಗೆ ಆಪ್ತ ಒಡನಾಟ ಇಟ್ಟಕೊಂಡಿದ್ದ ಎಂದು ತಿಳಿದುಬಂದಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ನಾವಿಬ್ಬರು ಆತ್ಮೀಯ ಸ್ನೇಹಿತರಾಗಿದ್ದು, ಶಾಲೆ ಮುಗಿದ ಬಳಿಕ ಹತ್ತಿರದ ಕಾಡಿಗೆ ಹೋಗಿ ಕಲ್ಲೊಂದರ ಮೇಲೆ ಕುಳಿತಿದ್ದೆವು. ನಾನಾಕೆಗೆ ಮುತ್ತು ಕೊಡಲು ಯತ್ನಿಸಿದೆ. ಆದರೆ ಪಿಂಕಿ ನನ್ನನ್ನು ದೂರ ತಳ್ಳಿದಳು. ಸಿಟ್ಟಲ್ಲಿ ನಾನು ಕೂಡ ಆಕೆಯನ್ನು ತಳ್ಳಿದ್ದು ಕಲ್ಲ ಮೇಲೆ ಬಿದ್ದ ಆಕೆ ಅಲ್ಲಿಯೇ ಸಾವನ್ನಪ್ಪಿದ್ದಾಳೆ. ಆಕಸ್ಮಿಕವಾಗಿ ಆದ ಅನಾಹುತದಿಂದ ಹೆದರಿದ ನಾನು ಎಲೆಗಳಿಂದ ಆಕೆಯನ್ನು ಮುಚ್ಚಿ ಅಲ್ಲಿಂದ ಪರಾರಿಯಾದೆ, ಎಂದಾತ ಹೇಳಿದ್ದಾನೆ.

ಆರೋಪಿಯನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 302( ಹತ್ಯೆ) ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ