ಆ್ಯಪ್ನಗರ

ಪೋಟೊ ತೆಗೆಯಲೆಂದು ರೈಲು ಎಂಜಿನ್‌ ಏರಿ ವಿದ್ಯುತ್‌ ಸ್ಪರ್ಶಕ್ಕೆ ಬಲಿ

ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ರೈಲಿನ ಎಂಜಿನ್‌ನ ಮೇಲ್ಭಾಗಕ್ಕೆ ಹತ್ತಿ ಪೋಟೊ ತೆಗೆಯುತ್ತಿರುವಾಗ ವಿದ್ಯುತ್‌ ತಂತಿ ತಗುಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.

TIMESOFINDIA.COM 13 Aug 2018, 3:17 pm
ಪುಣೆ: ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ರೈಲಿನ ಎಂಜಿನ್‌ನ ಮೇಲ್ಭಾಗಕ್ಕೆ ಹತ್ತಿ ಪೋಟೊ ತೆಗೆಯುತ್ತಿರುವಾಗ ವಿದ್ಯುತ್‌ ತಂತಿ ತಗುಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.
Vijaya Karnataka Web death


ಭೆಗ್ದೆವಾಡಿಯ ರೈಲು ನಿಲ್ದಾಣದಲ್ಲಿ ಎಂಜಿನ್‌ ಮೇಲೆ ಹತ್ತಿ ಪೋಟೊ ತೆಗೆಯಲು ಮುಂದಾಗಿದ್ದಾಗ ಬಾಲಕನಿಗೆ ವಿದ್ಯುತ್‌ ವೈರ್‌ ಸ್ಪರ್ಶವಾಗಿ ಬೆಂಕಿ ಹೊತ್ತಿಕೊಂಡು ಕೆಳಗೆ ಬಿದ್ದಿದ್ದಾನೆ. ಗಾಯಗೊಂಡಿದ್ದ ಆತ ಐದು ದಿನಗಳ ಬಳಿಕ ಔಂದ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮೂಲತಃ ಒಡಿಶಾ ಕುಟುಂಬದ ಈ ಬಾಲಕ ಸಾಂಗ್ವಿ ನಿವಾಸಿ. ಕುಟುಂಬ ಮತ್ತು ಸ್ನೇಹಿತರ ಜತೆ ತಲೇಗಾಂವ್‌ ದಭದೆಗೆ ಟ್ರಿಪ್‌ ಹೊರಟಿದ್ದು, ಭೆಗ್ದೆವಾಡಿಯ ರೈಲು ಹತ್ತಿದ್ದರು. ಬಾಲಕ ಪೋಟೊ ತೆಗೆಯಲೆಂದು ನಿಲ್ದಾಣದಲ್ಲಿದ್ದ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಹತ್ತಿದ್ದ. ಪೋಟೊ ತೆಗೆಯುತ್ತಿರುವಾಗ ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ಬಂದಿದೆ. ತಕ್ಷಣವೇ ಈತನಿಗೆ ಎಂನಿನ್‌ ಮೇಲಿನಿಂದ ವಿದ್ಯುತ್‌ ಪ್ರವಹಿಸುತತಿದ್ದ ತಂತಿ ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ