ಆ್ಯಪ್ನಗರ

ಶ್ರೀಕೃಷ್ಣನಾದ ತೇಜ್ ಪ್ರತಾಪ್; ವೈರಲ್ ಆಯ್ತು ಈ ಅವತಾರ

ಬಿಹಾರ್ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಮತ್ತೆ ಚರ್ಚೆಯಲ್ಲಿದ್ದಾರೆ. ಮತ್ತೀಗ ಅವರು ಕೃಷ್ಣ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Times Now 26 Aug 2019, 2:45 pm
ಪಟನಾ: ಸದಾ ವಿಲಕ್ಷಣ ವರ್ತನೆಗಳಿಂದಲೇ ಸುದ್ದಿಯಾಗುವ , ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರ, ತೇಜ್ ಪ್ರತಾಪ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಂದರ್ಭೋಚಿತವಾಗಿ ವಿವಿಧ ಅವತಾರಗಳಲ್ಲಿ ಪ್ರತ್ಯಕ್ಷರಾಗುವ ಅವರೀಗ ಕೃಷ್ಣಾಷ್ಟಮಿಯ ಈ ಶುಭ ಗಳಿಗೆಯಲ್ಲಿ ಶ್ರೀಕೃಷ್ಣ ಪರಮಾತ್ಮನ ಅವತಾರವೆತ್ತಿದ್ದರು.
Vijaya Karnataka Web tej_pratap


ನಿತೀಶ್ ಕುಮಾರ್ ಅವರ ನೇತೃತ್ವದ ಜೆಡಿಯು- ಆರ್‌ಜೆಡಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ತೇಜ್, ಜನ್ಮಾಷ್ಟಮಿ ವಿಶೇಷವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಕೊಳಲನೂದುತ್ತ ಕಾಣಿಸಿಕೊಂಡರು. ಅವರ ಈ ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂದೆ ಅನೇಕ ಬಾರಿ ಅವರು ಶಿವ ಮತ್ತು ಕೃಷ್ಣನ ವೇಷದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಕೆಲ ದಿನಗಳ ಹಿಂದೆ ಶ್ರಾವಣದ ಪ್ರಯುಕ್ತ ಶಿವರೂಪ ಧರಿಸಿದ್ದರು. ರುದ್ರಾಕ್ಷಿ ಧರಿಸಿ, ಹಣೆಗೆ ಚಂದನವನ್ನು ಲೇಪಿಸಿಕೊಂಡು ಪಟನಾದ ದೇವಸ್ಥಾನವೊಂದರಲ್ಲಿ ಪೂಜೆ ಮಾಡುತ್ತ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ಕೃಷ್ಣನ ವಿವಿಧ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಒಮ್ಮೆ ಗೋವುಗಳ ಮಧ್ಯೆ ಕೊಳಲನುದೂತ್ತ ಇರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.


ಪತ್ನಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಅವರು, ಅದನ್ನು ವಿರೋಧಿಸಿದ್ದಕ್ಕಾಗಿ ತಮ್ಮ ಕುಟುಂಬದಿಂದ ದೂರವಿದ್ದಾರೆ.

ಪತಿ ವಿರುದ್ಧ ಗಂಭೀರ ಆರೋಪ ಮಾಡಿರುವ ಪತ್ನಿ ಐಶ್ವರ್ಯ, ಅವರೊಬ್ಬ ಡ್ರಗ್ ಅಡಿಕ್ಟ್ ಆಗಿದ್ದು, ಅಮಲಿನಲ್ಲಿ ಬೇರೆ ಬೇರೆ ಪೋಷಾಕು ಧರಿಸಿಕೊಂಡು ತಾವು ಶಿವನ ಅವತಾರ ಎಂದು ವಾದಿಸುತ್ತಿದ್ದರು. ರಾಧಾ- ಕೃಷ್ಣರ ವೇಷ ಧರಿಸಿಕೊಂಡು, ರಾಧೆಯಂತೆ ಕಾಣಿಸಲು ಉದ್ದ ಕೂದಲನ ವಿಗ್ ಕೂಡ ಧರಿಸುತ್ತಿದ್ದರು ಎಂದಿದ್ದರು.

ಅಷ್ಟೇ ಅಲ್ಲ, ಪತಿಯಿಂದ ತಮಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿರುವ ಅವರು, ತಮ್ಮ ಉನ್ನತ ವಿದ್ಯಾಭ್ಯಾಸದ ಬಗ್ಗೆ ಸದಾ ಅವಮಾನ ಮಾಡುತ್ತಿದ್ದರು. ನಿನ್ನ ಕೆಲಸ ಪರಿವಾರವನ್ನು ನೋಡಿಕೊಳ್ಳುವುದು ಮತ್ತು ಅಡುಗೆ ಮಾಡುವುದಷ್ಟೇ ಎಂದು ಹಂಗಿಸುತ್ತಿದ್ದರು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ