ಆ್ಯಪ್ನಗರ

ತೆಲಂಗಾಣ ಎಸಿಪಿ ಮನೆ ಮೇಲೆ ದಾಳಿ: 70 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ, ಭ್ರಷ್ಟಚಾರದಲ್ಲಿ ಕೋಟಿ ಗಳಿಕೆ‌!

​​ತೆಲಂಗಾಣದ ಮಲ್ಕಜ್‌ಗಿರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹ ರೆಡ್ಡಿ ವಿರುದ್ಧ ಬಂದಿದ್ದ ದೂರು ಆಧರಿಸಿ ಎಸಿಬಿ ದಾಳಿ ನಡೆಸಿದೆ. ಹೈದರಾಬಾದ್‌, ವಾರಂಗಲ್‌, ಜನ್‌ಗಾಂವ್‌, ನಲ್ಗೊಂಡ, ಕರಿಂನಗರ, ಅನಂತಪುರ ಜಿಲ್ಲೆಗಳ 25 ಕಡೆಗಳಲ್ಲಿ ದಾಳಿ ನಡೆದಿದ್ದು, ಎಲ್ಲಾ ಕಡೆಗಳಲ್ಲೂಅಕ್ರಮ ಆಸ್ತಿ ಪತ್ತೆಯಾಗಿದೆ.

Vijaya Karnataka Web 25 Sep 2020, 6:46 am
ಹೈದರಾಬಾದ್‌: ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಗುರುವಾರ ದೊಡ್ಡ ಕುಳವೊಂದನ್ನು ಬಲೆಗೆ ಕೆಡವಿದ್ದಾರೆ. 70 ಕೋಟಿ ರೂ.ಗಳಿಗೂ ಹೆಚ್ಚಿನ ಅಕ್ರಮ ಆಸ್ತಿ ಸಂಪಾದಿಸಿರುವ ಸಹಾಯಕ ಪೊಲೀಸ್‌ ಆಯುಕ್ತ (ಎಸಿಪಿ) ಯೆಲಮಕುರಿ ನರಸಿಂಹ ರೆಡ್ಡಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಈ ಸ್ಫೋಟಕ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ.
Vijaya Karnataka Web telangan


ತೆಲಂಗಾಣದ ಮಲ್ಕಜ್‌ಗಿರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹ ರೆಡ್ಡಿ ವಿರುದ್ಧ ಬಂದಿದ್ದ ದೂರು ಆಧರಿಸಿ ಎಸಿಬಿ ದಾಳಿ ನಡೆಸಿದೆ. ಹೈದರಾಬಾದ್‌, ವಾರಂಗಲ್‌, ಜನ್‌ಗಾಂವ್‌, ನಲ್ಗೊಂಡ, ಕರಿಂನಗರ, ಅನಂತಪುರ ಜಿಲ್ಲೆಗಳ 25 ಕಡೆಗಳಲ್ಲಿ ದಾಳಿ ನಡೆದಿದ್ದು, ಎಲ್ಲಾ ಕಡೆಗಳಲ್ಲೂಅಕ್ರಮ ಆಸ್ತಿ ಪತ್ತೆಯಾಗಿದೆ.

55 ಎಕರೆ ಕೃಷಿ ಜಮೀನು, ಪ್ಲಾಟ್‌, ಖಾಲಿ ಸೈಟ್‌, ವಾಣಿಜ್ಯ ಕಟ್ಟಡಗಳು, ಚಿನ್ನಾಭರಣ ಸೇರಿ 70 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಎಸಿಪಿ ನರಸಿಂಹ ರೆಡ್ಡಿ ಸಂಬಂಧ ಅನೇಕ ದೂರುಗಳು ಬಂದಿದ್ದವು. ಈತ ಅಕ್ರಮವಾಗಿ, ಭ್ರಷ್ಟಚಾರ ಮೂಲಕ ಹಣ ಸಂಪಾದಿಸಿರುವ ಆರೋಪವು ಈತನ ಮೇಲಿತ್ತು. ಹೀಗಾಗಿ ಎಸಿಬಿ ಪೊಲೀಸಪ್ಪನ ಮೇಲೆ ಕಣ್ಣಿಟ್ಟಿತ್ತು. ಇದೀಗ ದಾಳಿ ನಡೆಸಿ ಅಕ್ರಮ ಆಸ್ತಿ ವಶಕ್ಕೆ ಪಡೆದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
ತಿರುಪತಿಗೆ ಭೇಟಿ ನೀಡಿದ ಬಿ.ಎಸ್. ಯಡಿಯೂರಪ್ಪ: ಕರ್ನಾಟಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ