ಆ್ಯಪ್ನಗರ

ಹಿಂದೂ ವಿರೋಧಿ ಸಭಾಪತಿ ಮುಂದೆ ಪ್ರಮಾಣವಚನ ಸ್ವೀಕರಿಸಲ್ಲ ಎಂದ ಬಿಜೆಪಿ ಶಾಸಕ

ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ಎಐಎಂಐಎಂ ಪಕ್ಷದ ಹಂಗಾಮಿ ಸ್ಪೀಕರ್ ಉಪಸ್ಥಿತಿಯಲ್ಲಿ ತಾವು ಯಾವುದೇ ಕಾರಣಕ್ಕೂ ಪ್ರಮಾಣವಚನ ಸ್ವೀಕರಿಸುವುದಿಲ್ಲವೆಂದು ಅವರು ಕೆಲ ದಿನಗಳ ಹಿಂದೆಯೇ ಶಪಥ ಮಾಡಿದ್ದರು.

TIMESOFINDIA.COM 18 Jan 2019, 12:36 pm
ಹೈದರಾಬಾದ್: ಉಗ್ರ ಹಿಂದೂವಾದಿ, ಗೋರಕ್ಷಕ ಎಂದು ಕರೆಸಿಕೊಳ್ಳುವ ಟಿ.ರಾಜಾ ಸಿಂಗ್‌ ಮತ್ತದೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಹಿಂದೂ ವಿರೋಧಿ ಸಭಾಪತಿ (ಹಂಗಾಮಿ) ಮಮ್ತಾಜ್ ಅಹ್ಮದ್ ಖಾನ್ ಎದುರು ಪ್ರಮಾಣವಚನ ಸ್ವೀಕರಿಸುವುದಿಲ್ಲವೆಂಬ ನಿಲುವಿಗೆ ತಾವು ಕಟಿಬದ್ಧ ಎಂದು ಹೇಳಿದ್ದ ಅವರು ಗುರುವಾರ ಹಾಗೆಯೇ ನಡೆದುಕೊಂಡರು.
Vijaya Karnataka Web T Raja Singh


ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ಎಐಎಂಐಎಂ ಪಕ್ಷದ ಹಂಗಾಮಿ ಸ್ಪೀಕರ್ ಉಪಸ್ಥಿತಿಯಲ್ಲಿ ತಾವು ಯಾವುದೇ ಕಾರಣಕ್ಕೂ ಪ್ರಮಾಣವಚನ ಸ್ವೀಕರಿಸುವುದಿಲ್ಲವೆಂದು ಅವರು ಕೆಲ ದಿನಗಳ ಹಿಂದೆಯೇ ಶಪಥ ಮಾಡಿದ್ದರು.

ಹಂಗಾಮಿ ಸಭಾಪತಿ ಹಿಂದೂ ವಿರೋಧಿ ಸಿದ್ಧಾಂತ ಹೊಂದಿರುವ ಎಐಎಮ್ಐಎಮ್ ಪಕ್ಷಕ್ಕೆ ಸೇರಿದವರೆಂದು ಸಂಪೂರ್ಣ ಜಗತ್ತಿಗೆ ಗೊತ್ತು. ಅವರ ಪಕ್ಷ ಹಿಂದೂಗಳ ಭಾವನೆ, ಸಂಸ್ಕೃತಿಗೆ ಗೌರವ ಕೊಡುವುದಿಲ್ಲ ಮತ್ತು ಆ ಪಕ್ಷದ ನಾಯಕರು ಸದಾ ಹಿಂದೂಗಳನ್ನು ಸರ್ವನಾಶ ಮಾಡುತ್ತೇವೆ ಎಂದು ಹೇಳುತ್ತಿರುತ್ತಾರೆ. ಅಷ್ಟೇ ಅಲ್ಲ ಭಾರತ್ ಮಾತಾ ಕಿ ಜೈ ಹೇಳುವುದಿಲ್ಲ, ವಂದೇ ಮಾತರಂ ಹಾಡುವುದಿಲ್ಲ. ಅವರು ಭಾರತ್ ಮಾತಾ ಕಿ ಜೈ ಎಂದರೆ ಮತ್ತು ವಂದೇ ಮಾತರಂ ಹಾಡಲೊಪ್ಪಿದರೆ ನಾನು ಈಗಲೇ ಹಂಗಾಮಿ ಸ್ಪೀಕರ್ ಮುಂದೆ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಯಿಂದ ಗೆದ್ದಿರುವ ಏಕೈಕ ಶಾಸಕ

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪಾಲಿಗೆ ಏಕೈಕ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಮಾನ ಉಳಿಸಿದ್ದು ಇದೇ ಸಿಂಗ್. ಉಗ್ರ ಹಿಂದೂವಾದಿ, ಗೋರಕ್ಷಕ ಎಂದು ಕರೆಸಿಕೊಳ್ಳುವ ಟಿ.ರಾಜಾ ಸಿಂಗ್‌ ಗೋಶ್‌ಮಹಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಟಿಆರ್‌ಎಸ್‌ ನ ಪ್ರೇಮ್‌ ಸಿಂಗ್ ರಾಥೋಡ್‌ ಅವರನ್ನು 17,750 ಮತಗಳ ಅಂತರದಿಂದ ಸೋಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ