ಆ್ಯಪ್ನಗರ

ತೆಲಂಗಾಣ ಎನ್‌ಕೌಂಟರ್‌: ಡಿ.9ರವರೆಗೆ ಶವಗಳನ್ನು ಸಂರಕ್ಷಿಸಿ ಇಡಲು ಹೈಕೋರ್ಟ್‌ ಆದೇಶ

ಹೈದರಾಬಾದ್‌ ಪಶುವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳು ಎನ್‌ಕೌಂಟರ್‌ನಲ್ಲಿ ಹತರಾಗಿದ್ದು, ನಾಲ್ವರ ಅಂತ್ಯಕ್ರಿಯೆ ಮಾಡುವುದು ಬೇಡ ಎಂದು ಹೈಕೋರ್ಟ್‌ ಆದೇಶಿಸಿದೆ.

Vijaya Karnataka Web 7 Dec 2019, 7:16 am
ಹೈದರಾಬಾದ್‌: ಎನ್‌ಕೌಂಟರ್‌ ವಿರುದ್ಧ ರಿಟ್‌ ಅರ್ಜಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿದಿಶಾ ಪ್ರಕರಣದ ಆರೋಪಿಗಳ ಶವಗಳನ್ನು ಡಿ.9ರ ರಾತ್ರಿ 8 ಗಂಟೆವರೆಗೆ ಸಂರಕ್ಷಿಸಿ ಇರಿಸುವಂತೆ ತೆಲಂಗಾಣ ಸರಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.
Vijaya Karnataka Web ತೆಲಂಗಾಣ ಅತ್ಯಾಚಾರ ಪ್ರಕರಣ
ತೆಲಂಗಾಣ ಅತ್ಯಾಚಾರ ಪ್ರಕರಣ


''ಆರೋಪಿಗಳ ಶವದ ಮರಣೋತ್ತರ ಪರೀಕ್ಷೆಯನ್ನು ವಿಡಿಯೊ ಮಾಡಿ, ಅದನ್ನು ಮುದ್ರಿಸಿರುವ ಸಿಡಿ ಅಥವಾ ಪೆನ್‌ಡ್ರೈವ್‌ ಅನ್ನು ಮೆಹಬೂಬನಗರ ಜಿಲ್ಲಾನ್ಯಾಯಾಧೀಶರಿಗೆ ಸಲ್ಲಿಸಿ. ಶನಿವಾರ ಸಂಜೆಯೊಳಗೆ ಅದು ಹೈಕೋರ್ಟ್‌ ತಲುಪಲಿ. ಡಿ.9ರ ರಾತ್ರಿ 8ರವರೆಗೆ ಮೃತದೇಹಗಳನ್ನು ಜೋಪಾನವಾಗಿರಿಸಿ'' ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ಸೋಮವಾರ ಕೂಡ ವಿಚಾರಣೆ ಮುಂದುವರಿಯಲಿದೆ.

ದಿಶಾ ಹತ್ಯೆ ಮಾಡಿದ ರಾಕ್ಷಕರ ಅಂತ್ಯಕ್ರಿಯೆ ನಮ್ಮ ಗ್ರಾಮದಲ್ಲಿ ಬೇಡ: ಗ್ರಾಮಸ್ಥರ ಆಕ್ರೋಶ

ಹತ್ಯೆಯಾಗಿರುವ ಆರೋಪಿಗಳ ಅಂತ್ಯಸಂಸ್ಕಾರವನ್ನು ಅವರ ಗ್ರಾಮಗಳಲ್ಲಿ ನಡೆಸಲು ಗ್ರಾಮಸ್ಥರು ನಿರಾಕರಿಸುತ್ತಿರುವುದು ಪೊಲೀಸರಿಗೆ ಹೊಸ ತಲೆನೋವು ತಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ