ಆ್ಯಪ್ನಗರ

ಮಗಳ ಮೃತದೇಹ ಕೈಯಲ್ಲೇ ಹೊತ್ತು ಸಾಗಿದ ತಂದೆ!

ಚಿಕಿತ್ಸೆ ಫಲಿಸದೆ ಬಾಲಕಿ ಮಂಗಳವಾರ ಮೃತಪಟ್ಟಳು. ಖಾಸಗಿ ಆ್ಯಂಬುಲೆನ್ಸ್‌ಗೆ ಹಣ ಹೊಂದಿಸಲು ಸಾಧ್ಯವಾಗದ ಕಾರಣ ಆಸ್ಪತ್ರೆಯವರಲ್ಲಿ ಆ್ಯಂಬುಲೆನ್ಸ್‌ ಒದಗಿಸುವಂತೆ ಕೋರಿದರು.

PTI 4 Sep 2019, 5:00 am
ಕರೀಂನಗರ: ಆಸ್ಪತ್ರೆಯಲ್ಲಿ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್‌ ದೊರೆಯದ ಕಾರಣ, ಅಸಹಾಯಕ ತಂದೆಯೊಬ್ಬರು ಮಗಳ ದೇಹವನ್ನು ಕೈಯ್ಯಲ್ಲೇ ಹೊತ್ತು ಸಾಗಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ. ಸಂಪತ್‌ ಕುಮಾರ್‌ ಎಂಬವರು ಪುತ್ರಿ ಕೋಮಲತಾ (7) ಎಂಬಾಕೆಯನ್ನು ಕರೀಂನಗರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಬಾಲಕಿ ಮಂಗಳವಾರ ಮೃತಪಟ್ಟಳು. ಖಾಸಗಿ ಆ್ಯಂಬುಲೆನ್ಸ್‌ಗೆ ಹಣ ಹೊಂದಿಸಲು ಸಾಧ್ಯವಾಗದ ಕಾರಣ ಆಸ್ಪತ್ರೆಯವರಲ್ಲಿ ಆ್ಯಂಬುಲೆನ್ಸ್‌ ಒದಗಿಸುವಂತೆ ಕೋರಿದರು. ಆದರೆ ಅವರು ನಿರಾಕರಿಸಿದ್ದರಿಂದ ಅನ್ಯಮಾರ್ಗವಿಲ್ಲದೆ ಮೃತದೇಹವನ್ನು ಎದೆಗೆ ಅವುಚಿಕೊಂಡು, ಕಣ್ಣೀರು ಹಾಕುತ್ತಲೇ 50 ಕಿ.ಮೀ ದೂರದ ಊರಿನಲ್ಲಿದ್ದ ಮನೆಯತ್ತ ಹೆಜ್ಜೆ ಹಾಕಿದರು. ಈ ಮನಕಜಲಕುವ ದೃಶ್ಯ ಕಂಡ ರಿಕ್ಷಾ ಚಾಲಕನೊಬ್ಬರು ಕೊನೆಗೆ ಮೃತದೇಹ ಸಾಗಿಸಲು ಸಹಾಯ ಮಾಡಿದರು. ಸಂಪತ್‌ ಕುಮಾರ್‌ಗೆ ಆ್ಯಂಬುಲೆನ್ಸ್‌ ನಿರಾಕರಿಸಲಾಗಿದೆ ಎಂಬುದನ್ನು ಆಸ್ಪತ್ರೆಯ ವೈದ್ಯರು ಅಲ್ಲಗಳೆದಿದ್ದಾರೆ.
Vijaya Karnataka Web shava

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ