ಆ್ಯಪ್ನಗರ

‘ ತೆಲಂಗಾಣ ವೀರಪ್ಪನ್‌ ’ ಪೊಲೀಸರ ಬಲೆಗೆ

ಈತನ ಪೂರ್ಣ ಹೆಸರು ಪೋಥಾರಂ ಶ್ರೀನಿವಾಸ್‌. ತೆಲಂಗಾಣದ ಪೆದ್ದಪ್ಪಲ್ಲಿ ಜಿಲ್ಲೆಯ ಮಹಾಮುತ್ತಾರಂ ಗ್ರಾಮ ಈತನ ಮೂಲ. 1999ರಲ್ಲಿ ರಸಗೊಬ್ಬರ ವ್ಯಾಪಾರ ಆರಂಭಿಸಿ ಭಾರಿ ನಷ್ಟವನ್ನು ಶ್ರೀನಿವಾಸ್‌ ಅನುಭವಿಸಿದ್ದ. ಬಳಿಕ ಸಣ್ಣಮಟ್ಟದಲ್ಲಿ ಟಿಂಬರ್‌ ವ್ಯಾಪಾರ ಆರಂಭಿಸಿದ ಈತ, ಕಾಡಿನಲ್ಲಿನ ಮರಗಳ ಕಳ್ಳ ಸಾಗಣೆಯಲ್ಲಿ ನುರಿತನಾದ.

Vijaya Karnataka 14 May 2019, 5:00 am
ಹೈದರಾಬಾದ್‌ : ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದ ಕಾಡುಗಳಲ್ಲಿ ಮರಗಳ ಕಳ್ಳಸಾಗಣೆ ಜಾಲ ನಿರ್ಮಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದುಸ್ವಪ್ನವಾಗಿದ್ದ 'ತೆಲಂಗಾಣ ವೀರಪ್ಪನ್‌' ಅಲಿಯಾಸ್‌ ಯೆಡ್ಲಾ ಶ್ರೀನು ಪೊಲೀಸರ ಬಲೆಗೆ ಬಿದ್ದಿದ್ದಾನೆ.
Vijaya Karnataka Web telangana veerappan srinu falls for police trap
‘ ತೆಲಂಗಾಣ ವೀರಪ್ಪನ್‌ ’ ಪೊಲೀಸರ ಬಲೆಗೆ


ಈತನ ಪೂರ್ಣ ಹೆಸರು ಪೋಥಾರಂ ಶ್ರೀನಿವಾಸ್‌. ತೆಲಂಗಾಣದ ಪೆದ್ದಪ್ಪಲ್ಲಿ ಜಿಲ್ಲೆಯ ಮಹಾಮುತ್ತಾರಂ ಗ್ರಾಮ ಈತನ ಮೂಲ. 1999ರಲ್ಲಿ ರಸಗೊಬ್ಬರ ವ್ಯಾಪಾರ ಆರಂಭಿಸಿ ಭಾರಿ ನಷ್ಟವನ್ನು ಶ್ರೀನಿವಾಸ್‌ ಅನುಭವಿಸಿದ್ದ. ಬಳಿಕ ಸಣ್ಣಮಟ್ಟದಲ್ಲಿ ಟಿಂಬರ್‌ ವ್ಯಾಪಾರ ಆರಂಭಿಸಿದ ಈತ, ಕಾಡಿನಲ್ಲಿನ ಮರಗಳ ಕಳ್ಳ ಸಾಗಣೆಯಲ್ಲಿ ನುರಿತನಾದ.

2009ರ ವೇಳೆಗೆ ಕಳ್ಳ ಸಾಗಣೆಯ ಬೃಹತ್‌ ಜಾಲವನ್ನು ಈತ ಸ್ಥಾಪಿಸಿದ್ದ. ಪೊಲೀಸರ ಕಣ್ಣುತಪ್ಪಿಸಲು ಗ್ರಾಮಸ್ಥರಿಗೆ ಆಮಿಷವೊಡ್ಡಿ ಅವರ ಎತ್ತಿನಗಾಡಿಯಲ್ಲಿ ಕದ್ದ ಮರಗಳನ್ನು ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡಿನಲ್ಲಿ ತನ್ನ ಜಾಲದ ಮೂಲಕ ಮರ ಕಡಿಯುವುದನ್ನು ಪೊಲೀಸರಿಗೆ ತಿಳಿಸಿದರೆ ಜೀವ ತೆಗೆಯುವುದಾಗಿ ಗ್ರಾಮಸ್ಥರನ್ನು ಬೆದರಿಸಿ, ತನ್ನ ಜಾಲಕ್ಕೆ ಸೇರಿಸಿಕೊಳ್ಳುತ್ತಿದ್ದ. ಶ್ರೀನಿವಾಸ್‌ ವಿರುದ್ಧ 20ಕ್ಕೂ ಹೆಚ್ಚಿನ ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ