ಆ್ಯಪ್ನಗರ

ಪೊಲೀಸ್ ನಾಯಿಗೆ ಹೆದರಿ 16 ಲಕ್ಷ ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿದ ಕಳ್ಳರು

ಪೊಲೀಸ್ ನಾಯಿಗೆ ಹೆದರಿದೆ ಕಳ್ಳರು ತಾವು ಕದ್ದಿದ್ದ ಚಿನ್ನದಾಭರಣಗಳನ್ನು ಹಿಂತಿರುಗಿಸಿದ ಸ್ವಾರಸ್ಯಕರ ಘಟನೆ ನೆರೆಯ ತಮಿಳುನಾಡಿನಲ್ಲಿ ನಡೆದಿದೆ.

TIMESOFINDIA.COM 3 Sep 2018, 11:50 am
ಚೆನ್ನೈ: ಪೊಲೀಸ್ ನಾಯಿಗೆ ಹೆದರಿದೆ ಕಳ್ಳರು ತಾವು ಕದ್ದಿದ್ದ ಚಿನ್ನದಾಭರಣಗಳನ್ನು ಹಿಂತಿರುಗಿಸಿದ ಸ್ವಾರಸ್ಯಕರ ಘಟನೆ ನೆರೆಯ ತಮಿಳುನಾಡಿನಲ್ಲಿ ನಡೆದಿದೆ.
Vijaya Karnataka Web Police Dog


ಪೆರಂಬೂರು ನಿವಾಸಿ ಇಮ್ತಿಯಾಸ್ ಅಬೂಬಕರ್ ಮನೆಯಲ್ಲಿ ಆಗಸ್ಟ್ 26ರಂದು ಕಳ್ಳತನವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ್ದರ ಪ್ರಯೋಜನ ಪಡೆದ ಕಳ್ಳರು ಬಾಗಿಲು ಮುರಿದು ಬರೋಬ್ಬರಿ 16 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದರು. ಈ ಕುರಿತು ಸೆಂಬಿಯಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಬೂಬಕರ್ ಮನೆಗೆ ಬಂದ ಪೊಲೀಸರು ಬೆರಳಚ್ಚು ಗುರುತು ಸಂಗ್ರಹಿಸಿ ತನಿಖೆ ಆರಂಭಿಸಿದ್ದರು. ಸಂತ್ರಸ್ತರ ಸಂಬಂಧಿಕರು ಮತ್ತು ನೆರೆಹೊರೆಯವರು ತನಿಖೆಗೆ ಸ್ಪಂದಿಸದಿದ್ದಾಗ ಇದು ಪರಿಚಯಸ್ಥರ ಕೆಲಸವೇ ಆಗಿರಬೇಕೆಂದು ಪೊಲೀಸರಿಗೆ ಅನುಮಾನ ಹುಟ್ಟಿದೆ. ಈ ಅನುಮಾನವನ್ನು ಸಂತ್ರಸ್ತ ಕುಟುಂಬದ ಜತೆ ಹಂಚಿಕೊಂಡ ಪೊಲೀಸರು, ಇಲಾಖೆಯ ನಾಯಿಗಳ ಸಹಾಯದಿಂದ ಇನ್ನೆರಡು ದಿನಗಳೊಳಗೆ ಪ್ರಕರಣವನ್ನು ಭೇದಿಸುವುದಾಗಿ ಹೇಳಿ ಹೋದರು.

ಮರುದಿನ ಬೆಳಗ್ಗೆ ನಿದ್ದೆಯಿಂದೆಂದ್ದ ಕುಟುಂಬಕ್ಕೆ ಆಶ್ಚರ್ಯ ಕಾದಿತ್ತು. ಅವರ ಮನೆಬಾಗಿಲಲ್ಲಿ ಇಡಲಾಗಿದ್ದ ಬ್ಯಾಗೊಂದರಲ್ಲಿ ಕದ್ದ ಆಭರಣಗಳೆಲ್ಲವೂ ಇದ್ದವು.

ಅಬೂಬಕರ್ ಕುಟುಂಬ ಕಳೆದುಕೊಂಡಿದ್ದ ಆಭರಣಗಳೆಲ್ಲವೂ ಮರಳಿ ದೊರೆಯಿತು. ಕುಟುಂಬದ ಸದಸ್ಯರು ಅಥವಾ ಪರಿಚಿತರೇ ಇದನ್ನು ಮಾಡಿಸಿರಬೇಕು. ನಾವು ನಾಯಿಯ ಸಹಾಯದಿಂದ ಕಾರ್ಯಾಚರಣೆ ನಡೆಸುವುದಾಗಿ ಹೇಳಿದಾಗ ಕಳ್ಳರು ಹೆದರಿರಬೇಕು. ನಮ್ಮ ತಂತ್ರ ಫಲ ನೀಡಿತು. ಸಂತ್ರಸ್ತರದು ಅವಿಭಕ್ತ ಕುಟುಂಬವಾಗಿದ್ದು, ತನಿಖೆಗೆ ಸಹಕಾರ ನೀಡದಿದ್ದಾಗಲೇ ನಮಗೆ ಮನೆಯೊಳಗಿನವರೇ ಈ ದುಷ್ಕೃತ್ಯವನ್ನೆಸಗಿದ್ದಾರೆ ಎಂಬ ಅನುಮಾನವಿತ್ತು, ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ