ಆ್ಯಪ್ನಗರ

ಪುಲ್ವಾಮಾ ಉಗ್ರ ದಾಳಿ: ಈ ವರೆಗಿನ ಮಾಹಿತಿ

ದಾಳಿ ಹೊಣೆಯನ್ನು ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ದಾಳಿ ನಡೆಸಿದ ಭಯೋತ್ಪಾದಕ ಪುಲ್ವಾಮಾ ಜಿಲ್ಲೆಯ ಕಾಕಪೋರಾದ ಆದಿಲ್ ಅಹ್ಮದ್ ಎಂದು ಪೊಲೀಸರು ಗುರುತಿಸಿದ್ದಾರೆ. ಎಲ್ಲ ವಾಹನಗಳಲ್ಲಿ ಒಟ್ಟಾರೆ 2,500ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದರು. ಸಾಮಾನ್ಯವಾಗಿ ಒಂದು ಬೆಂಗಾವಲು ಪಡೆಯಲ್ಲಿ 1000ಕ್ಕೂ ಹೆಚ್ಚು ಯೋಧರಿರುತ್ತಾರೆ.

Vijaya Karnataka Web 14 Feb 2019, 8:30 pm
ಹೊಸದಿಲ್ಲಿ: ಭದ್ರತಾ ಪಡೆಗಳ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 18 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

* ದಾಳಿ ಹೊಣೆಯನ್ನು ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

* ದಾಳಿ ನಡೆಸಿದ ಭಯೋತ್ಪಾದಕ ಪುಲ್ವಾಮಾ ಜಿಲ್ಲೆಯ ಕಾಕಪೋರಾದ ಆದಿಲ್ ಅಹ್ಮದ್ ಎಂದು ಪೊಲೀಸರು ಗುರುತಿಸಿದ್ದಾರೆ.

* ಸ್ಫೋಟಕ ತುಂಬಿದ ವಾಹನವೊಂದು ಭದ್ರತಾ ಸಿಬ್ಬಂದಿಗಳ ಬಸ್ಸೊಂದರ ಮೇಲೆ ದಾಳಿ ನಡೆಸಿದಾಗ ಈ ದುರಂತ ಸಂಭವಿಸಿದೆ.

* ಜಮ್ಮುವಿನಿಂದ ಶ್ರೀನಗರ ಕಡೆಗೆ 78ಕ್ಕೂ ಹೆಚ್ಚು ವಾಹನಗಳು ಜತೆಯಾಗಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

* ಭದ್ರತಾ ಪಡೆ ವಾಹನಗಳು ಬೆಳಗಿನ ಜಾವ 3:30ಕ್ಕೆ ಜಮ್ಮುವಿನಿಂದ ಹೊರಟಿದ್ದು ಸಂಜೆಯ ವೇಳೆಗೆ ಶ್ರೀನಗರ ತಲುಪುವ ಉದ್ದೇಶ ಹೊಂದಿದ್ದವು.

* ಕಳೆದ ಎರಡು-ಮೂರು ದಿನಗಳಿಂದ ಪ್ರತಿಕೂಲ ಹವಾಮಾನದಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಕಣಿವೆಗೆ ಹಿಂದಿರುಗುವ ಸಿಬಂದಿಗಳ ಸಂಖ್ಯೆ ಹೆಚ್ಚಾಗಿತ್ತು.

* ಎಲ್ಲ ವಾಹನಗಳಲ್ಲಿ ಒಟ್ಟಾರೆ 2,500ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದರು. ಸಾಮಾನ್ಯವಾಗಿ ಒಂದು ಬೆಂಗಾವಲು ಪಡೆಯಲ್ಲಿ 1000ಕ್ಕೂ ಹೆಚ್ಚು ಯೋಧರಿರುತ್ತಾರೆ.

* ಗೃಹಸಚಿವ ರಾಜನಾಥ್ ಸಿಂಗ್ ಅವರು ಭಟ್ನಗರ್‌ ವಲಯದ ಸಿಆರ್‌ಪಿಎಫ್‌ ಡಿಜಿ ಅವರ ಜತೆ ಮಾತನಾಡಿದ್ದಾರೆ.

* ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

* 2016ರ ಉರಿ ದಾಳಿಯ ಬಳಿಕ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ