ಆ್ಯಪ್ನಗರ

ಉಗ್ರ ಬೆದರಿಕೆ: ಉತ್ತರ ಪ್ರದೇಶದಲ್ಲಿ ಕಟ್ಟೆಚ್ಚರ

ಮಥುರಾದ ಶ್ರೀ ಕೃಷ್ಣ ದೇವಾಲಯ, ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ದೇಶದ ಕೆಲವು ಪ್ರಮುಖ ಪುಣ್ಯಕ್ಷೇತ್ರಗಳು, ಸಹಾರಣಪುರ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Vijaya Karnataka Web 6 Jun 2018, 9:13 pm
ಲಖನೌ: ಮಥುರಾದ ಶ್ರೀ ಕೃಷ್ಣ ದೇವಾಲಯ, ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ದೇಶದ ಕೆಲವು ಪ್ರಮುಖ ಪುಣ್ಯಕ್ಷೇತ್ರಗಳು, ಸಹರಣ್‌ಪುರ ರೈಲು ನಿಲ್ದಾಣ ಸೇರಿದಂತೆ ಕೆಲವು ಜನನಿಬಿಡ ಪ್ರದೇಶಗಳಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಲಷ್ಕರೆ ತಯ್ಬಾ ಸಂಘಟನೆಯ ಮುಖಂಡನೊಬ್ಬನಿಂದ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
Vijaya Karnataka Web ಉಗ್ರರ ಬೆದರಿಕೆ
ಉಗ್ರರ ಬೆದರಿಕೆ


26/11ರ ಮುಂಬಯಿ ದಾಳಿಯ ಆರೋಪಕ್ಕೊಳಗಾಗಿರುವ ಲಷ್ಕರೆ ಏರಿಯಾ ಕಮಾಂಡರ್‌ ಮೌಲಾನಾ ಅಂಬು ಶೇಖ್‌ ಮೇ 29ರಂದು ದಿಲ್ಲಿಯ ಉತ್ತರ ರೈಲ್ವೆಯ ವಿಭಾಗ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾನೆ ಎನ್ನಲಾಗಿದೆ. ಬುಧವಾರ ಅಥವಾ ಆ ನಂತರದ ದಿನಗಳಲ್ಲಿ ದಾಳಿ ನಡೆಸುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿರುವ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶ ಪೊಲೀಸರು ರೈಲು ನಿಲ್ದಾಣಗಳು ಹಾಗೂ ಪುಣ್ಯಕ್ಷೇತ್ರಗಳಲ್ಲಿ ಹದ್ದಿನ ಕಣ್ಣಿನ ಕಾವಲು ನಿರ್ಮಿಸಿದ್ದಾರೆ.

ಸಹರಣ್‌ಪುರ, ಹಾಪುಡ ಮತ್ತಿತರ ರೈಲು ನಿಲ್ದಾಣಗಳಲ್ಲಿ ಜೂನ್‌ 6ರಂದು ಹಾಗೂ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯದಲ್ಲಿ ಜೂನ್‌ 8 ಮತ್ತು 10ರಂದು ದಾಳಿ ನಡೆಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ