ಆ್ಯಪ್ನಗರ

ಹೊಸ ಹೆಸರು ಪಡೆದ ಜೈಷೆ; ಭಾರತದಲ್ಲಿ ಆತ್ಮಾಹುತಿ ದಾಳಿಗಾಗಿ 30 ಮಂದಿಗೆ ತರಬೇತಿ

ಜಮ್ಮು-ಕಾಶ್ಮೀರದ ವಿಷಯದಲ್ಲಿ ಭಾರತ ಸಾಧಿಸಿದ ಪಾರಮ್ಯವನ್ನು ಅರಗಿಸಿಕೊಳ್ಳಲಾಗದ ಪಾಕಿಸ್ತಾನ ತನ್ನ ಮಡಿಲಲ್ಲಿ ಪೋಷಿಸುತ್ತಿರುವ ಉಗ್ರ ಸಂಘಟನೆಗಳಿಗೆ ಪರೋಕ್ಷ ಸುಪಾರಿ ನೀಡುವ ಕಿಡಿಗೇಡಿ ಕೃತ್ಯವನ್ನು ತ್ವರಿತಗೊಳಿಸಿದೆ.

Vijaya Karnataka 25 Sep 2019, 8:28 am
ಹೊಸದಿಲ್ಲಿ: ಭಾರತದ ಪ್ರಾಬಲ್ಯದ ವಿರುದ್ಧ ಹತಾಶೆ, ಅಸಹಾಯಕತೆಯಿಂದ ಕುದಿಯುತ್ತಿರುವ ಪಾಕ್‌ ಪೋಷಿತ ಉಗ್ರ ಸಂಘಟನೆಗಳು 'ಮೋಸದ ದಾಳಿ'ಗಾಗಿ ದಿನಕ್ಕೊಂದು ಸಂಚು ರೂಪಿಸತೊಡಗಿವೆ. ಜೈಷೆ ಮೊಹಮ್ಮದ್‌ (ಜೆಇಎಂ) ಎನ್ನುವ ಹಳೆಯ ಪಾತಕ ಸಂಘಟನೆ ಈಗ 'ಮಜ್ಲಿಸ್‌ ವುರಸಾ ಇ ಶುಹುದಾ ಜಮ್ಮು ವಾ ಕಾಶ್ಮೀರ್‌' ಎನ್ನುವ ಹೊಸ ಹೆಸರು ಪಡೆದು ಉಗ್ರ ಚಟುವಟಿಕೆ ತೀವ್ರಗೊಳಿಸಲು ಸಜ್ಜಾಗಿದೆ.
Vijaya Karnataka Web Terrorists


ಆರೆಸ್ಸೆಸ್‌ ನಾಯಕರ ಹತ್ಯೆ ಮಾಡಿದ್ದ ಮೂವರು ಉಗ್ರರ ಸೆರೆ

ಜಮ್ಮು-ಕಾಶ್ಮೀರದ ವಿಷಯದಲ್ಲಿ ಭಾರತ ಸಾಧಿಸಿದ ಪಾರಮ್ಯವನ್ನು ಅರಗಿಸಿಕೊಳ್ಳಲಾಗದ ಪಾಕಿಸ್ತಾನ ತನ್ನ ಮಡಿಲಲ್ಲಿ ಪೋಷಿಸುತ್ತಿರುವ ಉಗ್ರ ಸಂಘಟನೆಗಳಿಗೆ ಪರೋಕ್ಷ ಸುಪಾರಿ ನೀಡುವ ಕಿಡಿಗೇಡಿ ಕೃತ್ಯವನ್ನು ತ್ವರಿತಗೊಳಿಸಿದೆ. ಈ ದಿಸೆಯಲ್ಲಿ ಮಸೂದ್‌ ಅಜರ್‌ ನೇತೃತ್ವದ ಜೈಷೆ ಮೊಹಮ್ಮದ್‌ ಸಂಘಟನೆ ಹೊಸ ಅವತಾರದಲ್ಲಿದಾಳಿಗೆ ಮುಂದಾಗಿದೆ. ಈ ಸಂಘಟನೆ ಹೆಸರು ಬದಲಾವಣೆ ಜತೆಗೆ 30 ಆತ್ಮಾಹುತಿ ದಾಳಿಕೋರರಿಗೆ ತರಬೇತಿ ನೀಡುತ್ತಿದ್ದು, ಹೇಗದರೂ ಮಾಡಿ ಭಾರತವನ್ನು ಅಲುಗಾಡಿಸುವ ಶಪಥ ಮಾಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಪಿಒಕೆಗಾಗಿ ಯುದ್ಧಕ್ಕೂ ಸೇನೆ ರೆಡಿ

ಮಸೂದ್‌ ಅಜರ್‌ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದು ಹಾಸಿಗೆ ಹಿಡಿದಿದ್ದಾನೆ. ಆತನ ಅನುಪಸ್ಥಿತಿಯಲ್ಲಿ ಕಿರಿಯ ಸೋದರ ಮುಫ್ತಿ ಅಬ್ದುಲ್‌ ರೌಫ್‌ ಅಸ್ಗರ್‌ ಹೊಸ ಸಂಘಟನೆಯ ನೇತೃತ್ವ ವಹಿಸಿದ್ದಾನೆ. ಹೆಸರು ಬದಲಾವಣೆಯೊಂದಿಗೆ ಕಾಶ್ಮೀರ ವಿಷಯದಲ್ಲಿಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಸೃಷ್ಟಿಸುವುದು ಕೂಡ ಸಂಚಿನ ಭಾಗವಾಗಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

ಅಂತಾರಾಷ್ಟ್ರೀಯ ನಿಷೇಧಕ್ಕೆ ಒಳಗಾದ ಬಳಿಕ ಕೆಲ ಕಾಲ ಮಂಕಾಗಿದ್ದ ಜೈಷೆ ಸಂಘಟನೆ, ಖುದಮ್‌ ಉಲ್‌ ಇಸ್ಲಾಂ ಮತ್ತು ಅಲ್‌ ರೆಹಮತ್‌ ಟ್ರಸ್ಟ್‌ ಹೆಸರಿನಲ್ಲಿಚಟುವಟಿಕೆ ಆರಂಭಿಸಿತ್ತು. ಈಗ ಜಮ್ಮು-ಕಾಶ್ಮೀರವನ್ನು ಒಳಗೊಂಡ ಹೊಸ ಹೆಸರು ಪಡೆದು ದುಷ್ಟ ಚಟುವಟಿಕೆ ಆರಂಭಿಸಿದೆ. ಈ ಸಂಘಟನೆಯಲ್ಲಿಬದಲಾಗಿರುವುದು ಹೆಸರು ಮಾತ್ರ, ಉಳಿದಂತೆ ನಾಯಕತ್ವ ಮತ್ತು ಉಗ್ರರ ಪಡೆ ಹಳೆಯದೇ ಇದೆ. ಧ್ವಜ ಕೂಡ ಹಳೆಯದೇ ಆಗಿದ್ದು ಅದರಲ್ಲಿನ ಘೋಷ ವಾಕ್ಯ 'ಅಲ್‌ ಜೆಹಾದ್‌' ಬದಲಿಗೆ ಈಗ 'ಅಲ್‌ ಇಸ್ಲಾಂ' ಎಂದು ಬದಲಾಗಿದೆ.

ಬಾಲಾಕೋಟ್‌ನಲ್ಲಿ ಮತ್ತೆ ಸಕ್ರಿಯರಾದ ಉಗ್ರರು: 500 ಉಗ್ರರು ಭಾರತಕ್ಕೆ ನುಸುಳಲು ಹೊಂಚು

ಭಾರತವೇ ಗುರಿ: ಮಜ್ಲಿಸ್‌ ವುರಸಾ ಇ ಶುಹುದಾ ಜಮ್ಮು ವಾ ಕಾಶ್ಮೀರ್‌ ಉಗ್ರ ಸಂಘಟನೆಯ ಏಕೈಕ ಗುರಿ ಭಾರತದ ಮೇಲೆ ದಾಳಿ ನಡೆಸುವುದು. ಭಾರತವನ್ನು ಗುರಿಯಾಗಿಟ್ಟುಕೊಂಡು ಜೈಷ್‌ ಸಂಘಟನೆ 30 ಆತ್ಮಾಹುತಿ ದಾಳಿಕೋರರಿಗೆ ತರಬೇತಿ ನೀಡಿದೆ. ವಿಶೇಷವಾಗಿ ಜಮ್ಮು-ಕಾಶ್ಮೀರದ ಮಿಲಿಟರಿ ನೆಲೆಗಳನ್ನು ಈ ಉಗ್ರರು ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಅಜರ್‌ ಸೋದರ ರೌಫ್‌ ಅಸ್ಗರ್‌ ಖುದ್ದು ಈ ಉಗ್ರರ ತರಬೇತಿ ಹೊಣೆ ಹೊತ್ತಿದ್ದಾನೆ. ಬಾಲಾಕೋಟ್‌ನ ಉಗ್ರ ತರಬೇತಿ ಕೇಂದ್ರವನ್ನು ಕಳೆದ ಕೆಲವು ದಿನಗಳ ಹಿಂದೆ ಆರಂಭಿಸಲಾಗಿದೆ. ಜತೆಗೆ ಭಾವಲ್ಪುರ ಮತ್ತು ಸಿಯಾಲ್‌ಕೋಟ್‌ ಉಗ್ರ ನೇಮಕಾತಿ ನೆಲೆಗಳನ್ನೂ ಸಕ್ರಿಯಗೊಳಿಸಲಾಗಿದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ