ಆ್ಯಪ್ನಗರ

ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿಯ ಸಂಚು ವಿಫಲ, 3 ಉಗ್ರರ ಸೆರೆ

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಯೋತ್ಪಾದನೆ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಮೂವರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Agencies 25 Nov 2019, 9:39 pm
ಗುವಾಹಟಿ/ಕೊಚ್ಚಿ: ರಾಷ್ಟ್ರ ರಾಜಧಾನಿ ಮತ್ತು ಹಲವು ರಾಜ್ಯಗಳಲ್ಲಿ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿ ಬಾಂಬ್‌ ದಾಳಿ ನಡೆಸಲು ಹೊಂಚು ಹಾಕಿದ್ದ ಐಸಿಸ್‌ ಪ್ರಚೋದಿತ ಮೂವರು ಉಗ್ರರನ್ನು ಸೋಮವಾರ ಅಸ್ಸಾಂನಲ್ಲಿ ಬಂಧಿಸಲಾಗಿದೆ.
Vijaya Karnataka Web terrorist arrested in assam by delhi police
ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿಯ ಸಂಚು ವಿಫಲ, 3 ಉಗ್ರರ ಸೆರೆ


ದಿಲ್ಲಿ ಪೊಲೀಸ್‌ ವಿಶೇಷ ವಿಭಾಗ ಹಾಗೂ ಅಸ್ಸಾಂ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿಉಗ್ರರನ್ನು ಬಂಧಿಸಲಾಗಿದೆ. ರಂಜಿತ್‌ ಅಲಿ, ಮುಕದ್ದರ್‌ ಹಾಗೂ ಜಮೀಲ್‌ ಜಮಾಲ್‌ ಬಂಧಿತರು.

ಬಂಧಿತರಿಂದ 1 ಕೆ.ಜಿ. ಸ್ಫೋಟಕ ಸಾಮಗ್ರಿ, ಸುಧಾರಿತ ಸ್ಫೋಟಕ ಸಾಮಾಗ್ರಿ (ಐಇಡಿ)ಗಳು ಹಾಗೂ ಒಂದು ಚಾಕು ವಶಪಡಿಸಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಸ್ಸಾಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಭಯೋತ್ಪಾದನೆ ನಂಟಿನ ಆರೋಪ: ಪಿಎಫ್‌ಐ, ಎಸ್‌ಡಿಪಿಐ ನಿಷೇಧಿಸಲು ಮುತಾಲಿಕ್ ಆಗ್ರಹ

ಸದ್ಯ ಅಸ್ಸಾಂನ ಗೋಲ್‌ಪಾರಾದಲ್ಲಿ ನಡೆಯುತ್ತಿರುವ ರಾಸ್‌ ಮೇಳದಲ್ಲಿ ಬಾಂಬ್‌ ಸ್ಫೋಟಿಸಿ ಜನರನ್ನು ಬಲಿ ಪಡೆಯುವಂತೆ ಬಂಧಿತ ಉಗ್ರರಿಗೆ ಐಸಿಸ್‌ ಮುಖಂಡರು ಸೂಚನೆ ನೀಡಿದ್ದರು. ಅದರಂತೆ ಮೂವರೂ ಸಿದ್ಧತೆಯಲ್ಲಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬಂಧಿತ ಉಗ್ರರೆಲ್ಲರೂ ಅಸ್ಸಾಂನಲ್ಲಿಉತ್ತಮ ನೌಕರಿಯಲ್ಲಿದ್ದರು. ದಾಳಿಯ ಮುಖ್ಯ ಮಾಸ್ಟರ್‌ ಮೈಂಡ್‌ ಎನ್ನಲಾಗುತ್ತಿರುವ ಜಮೀಲ್‌ ಆಧಾರ್‌ ನೋಂದಣಿ ಕೇಂದ್ರದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಮತ್ತೊಬ್ಬ ಉಗ್ರ ಮುಕದ್ದರ್‌ ಕಾರು ಚಾಲಕನಾಗಿದ್ದ, ರಂಜೀತ್‌ ಮೀನು ವ್ಯಾಪಾರ ಕಂಪನಿಯಲ್ಲಿ ಮ್ಯಾನೇಜರ್‌ ಹುದ್ದೆಯಲ್ಲಿದ್ದ ಎಂದು ಪೊಲೀಸ್‌ ಪತ್ತೆ ಮಾಡಿದ್ದಾರೆ.

ಐಸಿಸ್‌ ಉಗ್ರರು ಅಪರಾಧಿಗಳು ಎನ್‌ಐಎ ಕೋರ್ಟ್ ತೀರ್ಪು

ಕೇರಳ ಮತ್ತು ನೆರೆಹೊರೆಯ ರಾಜ್ಯಗಳಲ್ಲಿ ವಿಧ್ವಂಸ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿದ್ದ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯ ಆರು ಉಗ್ರರು ಅಪರಾಧಿಗಳು ಎಂದು ಕೊಚ್ಚಿಯ ಎನ್‌ಐಎ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ.

ಮನ್ಸೀದ್‌ ಮುಹಮೂದ್‌, ಸ್ವಾಲ್ಹಿ ಮೊಹಮ್ಮದ್‌, ರಶೀದ್‌ ಅಲಿ ರಂಶಾದ್‌, ಸಫ್ವಾನ್‌ ಮತ್ತು ಮೊಯಿನುದ್ದಿನ್‌ ಶಿಕ್ಷೆಗೊಳಗಾದ ಉಗ್ರರು. ಇನ್ನೊಬ್ಬ ಬಂಧಿತ ಆರೋಪಿ ಎನ್‌.ಕೆ.ಜಾಸಿಂನನ್ನು ದೋಷಮುಕ್ತಗೊಳಿಸಲಾಗಿದೆ. ನ್ಯಾಯಾಧೀಶರು, ಪೊಲೀಸ್‌ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವಿದೇಶಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಬಾಂಬ್‌ ದಾಳಿ ನಡೆಸಲು ಈ ಉಗ್ರರು ಸಂಚು ರೂಪಿಸಿದ್ದರು.

2016ರಲ್ಲಿಸಭೆ ನಡೆಸುತ್ತಿದ್ದಾಗಲೇ ಇವರನ್ನು ಪೊಲೀಸರು ಬಂಧಿಸಿದ್ದರು. ಉಗ್ರ ಸಂಘಟನೆ ಜತೆಗಿನ ನಂಟು, ಉಗ್ರ ಸಂಘಟನೆಗೆ ಬೆಂಬಲ ಸೇರಿದಂತೆ ಅಕ್ರಮ ಚಟುವಟಿಕೆ ತಡೆ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಇವರ ವಿರುದ್ಧ ದೂರು ದಾಖಲಿಸಲಾಗಿತ್ತು. ಆ ಎಲ್ಲಾಆರೋಪಗಳನ್ನು ಎತ್ತಿ ಹಿಡಿದ ವಿಶೇಷ ನ್ಯಾಯಮೂರ್ತಿ ಪಿ.ಕೃಷ್ಣಕುಮಾರ್‌, ಇವರನ್ನು ಅಪರಾಧಿಗಳೆಂದು ಘೋಷಿಸಿದರು.

ಶಿಕ್ಷೆ ಪ್ರಮಾಣವನ್ನು ಶೀಘ್ರವೇ ನಿರ್ಧರಿಸುವುದಾಗಿ ಕೋರ್ಟ್‌ ತಿಳಿಸಿದೆ. ''ಘೋರ ಅಪರಾಧಕ್ಕೆ ಸಂಚು ರೂಪಿಸಿದ್ದ ಇವರನ್ನು ಸುಮ್ಮನೆ ಬಿಡಬಾರದು. ತಾವು ನೆಲೆಸಿದ ದೇಶದ ವಿರುದ್ಧವೇ ಇವರು ಸಮರ ಸಾರಿದ್ದರು. ಈ ಪಾತಕಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು,'' ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ವಾದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ