ಆ್ಯಪ್ನಗರ

ಉಗ್ರರ ದಾಳಿ: ಎಂಟು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಅಟ್ಟಹಾಸಕ್ಕೆ ಎಂಟು ಭದ್ರತಾ ಸಿಬ್ಬಂಧಿ ಮೃತಪಟ್ಟಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 26 Aug 2017, 8:51 pm
ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಅಟ್ಟಹಾಸಕ್ಕೆ ಎಂಟು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.
Vijaya Karnataka Web terrorists attack district police lines in pulwama three security personnel martyred
ಉಗ್ರರ ದಾಳಿ: ಎಂಟು ಯೋಧರು ಹುತಾತ್ಮ


ಪುಲ್ವಾಮ ಜಿಲ್ಲೆಯ ಜಿಲ್ಲಾ ಪೊಲೀಸ್ ರೇಖೆ (ಡಿಪಿಎಲ್) ಬಳಿ ಉಗ್ರರು ಶನಿವಾರ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಸೈನಿಕರು ಹಾಗೂ ಓರ್ವ ಪೊಲೀಸ್‌ ಅಧಿಕಾರಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.

ಬಳಿಕ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಮತ್ತೆ ಐವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಡಿಪಿಎಲ್‌ನ ಕ್ವಾರ್ಟರ್ಸ್‌ಗೆ ಇಬ್ಬರು ಉಗ್ರರು ನುಸುಳಿದ್ದರು ಎಂದು ಊಹಿಸಲಾಗಿತ್ತು. ಆದರೆ ನಾಲ್ವರು ಉಗ್ರರು ಗಡಿದಾಟಿ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ನಾಲ್ವರನ್ನೂ ಹೊಡೆದುರುಳಿಸಿದ್ದು ಕಾರ್ಯಾಚರಣೆ ಮುಂದುವರೆದಿದೆ ಲೆಫ್ಟಿನೆಂಟ್ ಜೆನ್ ಜೆಎಸ್ ಸಂಧು ಹೇಳಿದ್ದಾರೆ.

ಮೂವರು ಪಾಕ್‌ ರೇಂಜರ್‌ ಹತ

ಜಮ್ಮು ಕಾಶ್ಮೀರದ ಮತ್ತೊಂದು ಭಾರ ರಜೌರಿ ಜಿಲ್ಲೆಯಲ್ಲೂ ಪಾಕಿಸ್ತಾನಿ ರೇಂಜರ್ಸ್‌ಗಳು ಸೇನೆಯನ್ನು ಉದ್ದೇಶಿಸಿ ದಾಳಿ ನಡೆಸಿದ್ದರು, ದಾಳಿಗೆ ಪ್ರತ್ಯುತ್ತರ ನೀಡಿರುವ ಸೇನೆ ಪಾಕಿಸ್ತಾನದ ಮೂವರು ಯೋಧರನ್ನು ಹೊಡೆದುರುಳಿಸಿದೆ.

ರಜೌರಿ ಜಿಲ್ಲೆಯ ಸುಂದರ್‌ಬಾನಿಯಲ್ಲಿ ಕದನ ವಿರಾಮ ಉಲ್ಲಂಘಿಸಿರುವ ಪಾಕ್‌ ರೇಂಜರ್‌ಗಳು ಶೆಲ್‌ ದಾಳಿ ನಡೆಸಿದರು. ದಾಳಿಗೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಮೂವರು ಪಾಕ್‌ ರೇಂಜರ್‌ಗಳನ್ನು ಹೊಡೆದುರುಳಿಸಿದೆ ಎಂದು ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

terrorists attack district police lines in pulwama

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ