ಆ್ಯಪ್ನಗರ

ಜಮ್ಮು-ಕಾಶ್ಮೀರ: ಪೊಲೀಸರ ಗುಂಪಿನ ಮೇಲೆ ಉಗ್ರರಿಂದ ಏಕಾಏಕಿ ಗುಂಡಿನ ದಾಳಿ, ಇಬ್ಬರು ಹುತಾತ್ಮ!

ಪೊಲೀಸರ ಮೇಲೆ ಇಬ್ಬರು ಉಗ್ರರು ಏಕಾಏಕಿ ಗುಂಡಿನ ಮಳೆಗೈದು ಎಸ್ಕೇಪ್ ಆಗಿದ್ದಾರೆ‌. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ತಕ್ಷಣ ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಈ ಪೈಕಿ ಇಬ್ಬರು ಗಮಭೀರ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

Agencies 14 Aug 2020, 11:26 am
ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಬೆಳಗ್ಗೆಯೇ ಪಾಕಿಸ್ತಾನ ಪೋಷಿತ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶ್ರೀನಗರದ ಹೊರಭಾಗದ ನೌಗಾಮ್‌ನಲ್ಲಿರುವ ಪೊಲೀಸ್‌ ಪಡೆ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಅಲ್ಲದೇ ಒಬ್ಬ ಪೊಲೀಸ್‌ ಗಾಯಗೊಂಡಿದ್ದಾರೆ.
Vijaya Karnataka Web EfWwMCXUEAAWR4q


ಗುಂಪಾಗಿ ಚಲಿಸುತ್ತಿದ್ದ ಪೊಲೀಸರ ಮೇಲೆ ಇಬ್ಬರು ಉಗ್ರರು ಏಕಾಏಕಿ ಗುಂಡಿನ ಮಳೆಗೈದು ಎಸ್ಕೇಪ್ ಆಗಿದ್ದಾರೆ‌. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ತಕ್ಷಣ ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಈ ಪೈಕಿ ಇಬ್ಬರು ಗಮಭೀರ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಮತ್ತೋರ್ವ ಪೊಲೀಸ್‌ಗೆ ಕಣ್ಣಿಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದುಬಂದಿದೆ.

ಕಳೆದ ಮೂವತ್ತು ದಿನಗಳ ಅವಧಿಯಲ್ಲಿ ಶ್ರೀನಗರದಲ್ಲಿ ಇದು ಮೂರನೇ ದಾಳಿಯಾಗಿದೆ. ಸೇನೆ ಕೂಡ ಉಗ್ರರನ್ನ ಮಟ್ಟ ಹಾಕುತ್ತಲೆ ಇದ್ದರು. ರಕ್ತ ಬೀಜಾಸುರರಂತೆ ಉಗ್ರರು ಹುಟ್ಟುತ್ತಿದ್ದಾರೆ. ಆದರೆ ಇವರಿಗೆ ಎಲ್ಲಿಂದ ಶಸ್ತ್ರಾಸ್ತ್ರಗಳು ಸಿಗುತ್ತಿವೆ ಅನ್ನುವುದು ಯೋಧರ ನಿದ್ದೆಗೆಡಿಸಿದೆ. ಇತ್ತೀಚೆಗೆ ದೊಡ್ಡ ಶಸ್ತ್ರಾಸ್ತ್ರಗಳ ಶೇಖರಣೆಯನ್ನ ಬೇಧಿಸಿತ್ತು ಭದ್ರತಾ ಪಡೆ. ಘಟನೆ ಬಳಿಕ ಸೇನೆ ಹಾಗೂ ಪೊಲೀಸ್‌ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದೆ. ಸುತ್ತಮುತ್ತ ಪ್ರದೇಶಗಳನ್ನ ಸುತ್ತುವರಿದಿವೆ.
ಬಿಜೆಪಿಯಿಂದ ಅವಿಶ್ವಾಸ, ಕಾಂಗ್ರೆಸ್‌ನಿಂದ ಬಹುಮತ ಸಾಬೀತು: ರೋಚಕ ರಾಜಸ್ಥಾನ ಅಧಿವೇಶನ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ