ಆ್ಯಪ್ನಗರ

ಉಗ್ರರು ಹತರಾಗಿರುವುದು ನಿಜ: ವಾಯುಪಡೆ

44 ಸಿಆರ್‌ಪಿಎಫ್‌ ಯೋಧರನ್ನು ಬಲಿಪಡೆದ ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಬಾಲಾಕೋಟ್‌ನ ಜೈಷೆ ಮೊಹಮದ್‌ ಉಗ್ರ ನೆಲೆಗಳನ್ನು ಭಾರತೀಯ ವಾಯುಪಡೆ ಧ್ವಂಸಗೊಳಿಸಿತು.

Vijaya Karnataka 26 Apr 2019, 5:00 am
ಹೊಸದಿಲ್ಲಿ: ಪಾಕಿಸ್ತಾನದ ಬಾಲಾಕೋಟ್‌ ಉಗ್ರ ಶಿಬಿರದ ಮೇಲೆ ಫೆ.27ರಂದು ನಡೆದ ವಾಯುದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿರುವುದು ನಿಜ ಎಂದು ವಾಯುಪಡೆ ಗುರುವಾರ ಸ್ಪಷ್ಟನೆ ನೀಡಿದೆ. 44 ಸಿಆರ್‌ಪಿಎಫ್‌ ಯೋಧರನ್ನು ಬಲಿಪಡೆದ ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಬಾಲಾಕೋಟ್‌ನ ಜೈಷೆ ಮೊಹಮದ್‌ ಉಗ್ರ ನೆಲೆಗಳನ್ನು ಭಾರತೀಯ ವಾಯುಪಡೆ ಧ್ವಂಸಗೊಳಿಸಿತು. ಆದರೆ ಇದನ್ನು ನಿರಾಕರಿಸಿರುವ ಪಾಕಿಸ್ತಾನ, ಭಾರತದ ದಾಳಿಯಿಂದ ಯಾವುದೇ ಸಾವು-ನೋವು, ಆಸ್ತಿ ಹಾನಿ ಸಂಭವಿಸಿಲ್ಲ. ಕೇವಲ ಕಾಡಿನಲ್ಲಿರುವ ಮರಗಳು ನೆಲಕ್ಕುರುಳಿವೆ ಎಂದು ವಾದಿಸುತ್ತಾ ಬಂದಿದೆ. ''ಐಎಎಫ್‌ ಮಿರಾಜ್‌ 2000 ವಿಮಾನ ಬಳಸಿ ಬಾಲಾಕೋಟ್‌ನ ಉಗ್ರ ತರಬೇತಿ ಕೇಂದ್ರಗಳು ಸೇರಿದಂತೆ ಜೈಷೆ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಆ ಪ್ರದೇಶದ ತಾಂತ್ರಿಕ ಮಾಹಿತಿ ಲಭಿಸಿದ್ದರೆ ಇನ್ನಷ್ಟು ಹಾನಿ ಮಾಡಲು ಸಾಧ್ಯವಿತ್ತು, '' ಎಂದು ವಾಯುಪಡೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ