ಆ್ಯಪ್ನಗರ

ಕಾಶ್ಮೀರದ ಉಗ್ರರು ಚಂದ್ರಲೋಕದಿಂದ ಬಂದಿಲ್ಲ

'ಕಾಶ್ಮೀರ ಸ್ಥಿತಿಗತಿ' ಕುರಿತ ವಿಷಯದ ಮೇಲೆ ಮಂಗಳವಾರ ಐರೋಪ್ಯ ಒಕ್ಕೂಟದ ಸಂಸತ್ತಿನಲ್ಲಿವಿಶೇಷ ಚರ್ಚೆ ನಡೆಯಿತು. ಮಿನಿಸ್ಟರ್ಸ್‌ ಆಫ್‌ ಯುರೋಪಿಯನ್‌ ಪಾರ್ಲಿಮೆಂಟ್‌ (ಎಮ್‌ಇಪಿಎಸ್‌) ಈ ಚರ್ಚೆಯಲ್ಲಿಭಾಗವಹಿಸಿದ್ದು ಗಮನಾರ್ಹ.

PTI 19 Sep 2019, 5:00 am
ಬ್ರುಸೆಲ್ಸ್‌: ವಿಶ್ವದಲ್ಲಿಅತ್ಯಂತ ಬೃಹತ್‌ ಮತ್ತು ಮಹತ್ವದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತ ಸಾಕ್ಷಿಯಾಗಿದೆ. ಆದರೆ ಇಂಥ ದೇಶದ ಮೇಲೆ ಉಗ್ರರು ನಿರಂತರ ದಾಳಿ ನಡೆಸಿದ್ದಾರೆ. ಅವರೆಲ್ಲರೂ ಚಂದ್ರಲೋಕದಿಂದ ಇಳಿದು ಭಾರತಕ್ಕೆ ಬರಲಿಲ್ಲ. ಬದಲಿಗೆ ನೆರೆ ರಾಷ್ಟ್ರವೇ ಅವರನ್ನು ಪೋಷಿಸಿ ಕಳುಹಿಸಿದೆ ಎಂದು ಐರೋಪ್ಯ ಒಕ್ಕೂಟ ಸಂಸತ್ತಿನಲ್ಲಿಭಾರತವನ್ನು ಬೆಂಬಲಿಸಿದ ಅಲ್ಲಿನ ಸಂಸದರು ಪಾಕ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web european parliament 01


'ಕಾಶ್ಮೀರ ಸ್ಥಿತಿಗತಿ' ಕುರಿತ ವಿಷಯದ ಮೇಲೆ ಮಂಗಳವಾರ ಐರೋಪ್ಯ ಒಕ್ಕೂಟದ ಸಂಸತ್ತಿನಲ್ಲಿವಿಶೇಷ ಚರ್ಚೆ ನಡೆಯಿತು. ಮಿನಿಸ್ಟರ್ಸ್‌ ಆಫ್‌ ಯುರೋಪಿಯನ್‌ ಪಾರ್ಲಿಮೆಂಟ್‌ (ಎಮ್‌ಇಪಿಎಸ್‌) ಈ ಚರ್ಚೆಯಲ್ಲಿಭಾಗವಹಿಸಿದ್ದು ಗಮನಾರ್ಹ. ಪೊಲೆಂಡ್‌, ಇಟಲಿ ಹಾಗೂ ಬ್ರಿಟನ್‌ನ ಹಲವು ಸಂಸದರು ಭಾರತದ ಪರವಾಗಿ ನಿಂತಿದ್ದಲ್ಲದೇ ಉಗ್ರರನ್ನು ಪೋಷಿಸುತ್ತಿರುವ ಪಾಕ್‌ ವಿರುದ್ಧ ಹರಿಹಾಯ್ದರು.

370ನೇ ವಿಧಿ ರದ್ದತಿ ಸಂಪೂರ್ಣ ಭಾರತದ ಆಂತರಿಕ ವಿಚಾರ. ಭಾರತದ ಸಾರ್ವಭೌಮತೆಯನ್ನು ಐರೋಪ್ಯ ಒಕ್ಕೂಟ ಗೌರವಿಸುತ್ತದೆ. ಮಾತುಕತೆ ಮೂಲಕ ಭಾರತ-ಪಾಕ್‌ ಕಾಶ್ಮೀರ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕು ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.

ಉಗ್ರ ತವರು: ಯುರೋಪಿಯನ್‌ ಕನ್ಸರ್ವೆಟೀವ್‌್ಸ ಆ್ಯಂಡ್‌ ರಿಫಾರ್ಮಿಸ್ಟ್‌$್ಸ ಗ್ರೂಪ್‌ನ ಉಪಾಧ್ಯಕ್ಷ ಹಾಗೂ ಯುರೋಪ್‌ ಸಂಸತ್‌ ಸದಸ್ಯ ಜೆಫ್ರಿ ವ್ಯಾನ್‌ ಆರ್ಡನ್‌ ಮಾತನಾಡಿ, ''ಗಡಿ ನಿಯಂತ್ರಣ ರೇಖೆಯಲ್ಲಿಉಗ್ರರಿಗೆ ಬೆಂಬಲವಾಗಿ ನಿಲ್ಲಲು ತನ್ನ ಸೇನೆಯ ವಿಶೇಷ ವಿಭಾಗವನ್ನೇ ಪಾಕಿಸ್ತಾನ ನಿಯೋಜಿಸಿದೆ. ಅಷ್ಟಲ್ಲದೇ ಭಾರತದ ರಾಜ್ಯ ಜಮ್ಮು-ಕಾಶ್ಮೀರದ ಹಲವು ಪ್ರದೇಶಗಳನ್ನು ಪಾಕ್‌ ಅತಿಕ್ರಮಿಸಿದೆ, '' ಎಂದು ಗುಡುಗಿದರು.

.....
ಐತಿಹಾಸಿಕ ಬದಲಾವಣೆ ಎಂದು ಶ್ಲಾಘನೆ


370ನೇ ವಿಧಿ ರದ್ದುಗೊಳಿಸಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರಕ್ಕೆ ಐರೋಪ್ಯ ಒಕ್ಕೂಟದ ಸಂಸತ್ತಿನಲ್ಲಿಮೆಚ್ಚುಗೆ ವ್ಯಕ್ತವಾಗಿದ್ದು ವಿಶೇಷ. ವಿಶೇಷ ವಿಧಿಯಿಂದ ಜಮ್ಮು-ಕಾಶ್ಮೀರ ನಿವಾಸಿಗಳು ಸ್ಥಳೀಯವಾಗಿ ಪ್ರತ್ಯೇಕ ನಿಯಮಗಳನ್ನು ಹೇರಿಕೊಂಡು ಜೀವಿಸುತ್ತಿದ್ದರು. ಮಾನವ ಹಕ್ಕುಗಳ ರಕ್ಷಣೆ ಎಂಬ ಪದಕ್ಕೆ ಅರ್ಥವೇ ಇರಲಿಲ್ಲ. ಆದರೆ ಮೋದಿ ಸರಕಾರದ ಐತಿಹಾಸಿಕ ಬದಲಾವಣೆ ಕ್ರಮದಿಂದ ಕಣಿವೆ ರಾಜ್ಯದಲ್ಲಿಬದಲಾವಣೆ ಗಾಳಿ ಬೀಸುತ್ತಿದೆ ಎಂದು ಆರ್ಡನ್‌ ಅಭಿಪ್ರಾಯಪಟ್ಟಿದ್ದಾರೆ.

.....
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರದಲ್ಲಿನ ಜಮ್ಮು-ಕಾಶ್ಮೀರ ಸ್ಥಿತಿಗತಿ ಬಗ್ಗೆ ವಿಶಾಲ ದೃಷ್ಟಿಯಿಂದ ನಾವು ಗಮನಹರಿಸಬೇಕು. ಚಂದ್ರನಿಂದ ಜಿಗಿದು ಉಗ್ರರು ಭಾರತದೊಳಗೆ ನುಗ್ಗುತ್ತಿಲ್ಲ. ನೆರೆ ರಾಷ್ಟ್ರ ಪಾಕ್‌ನ ಕುಮ್ಮಕ್ಕು ಇದರಲ್ಲಿದೆ.

- ಫುಲ್ವಿಯೊ ಮಾರ್ಟುಶಿಯೆಲ್ಲೊ, ಯುರೋಪಿಯನ್‌ ಸಂಸತ್ತಿನ ಸದಸ್ಯ

ಭಾರತದ ಜಮ್ಮು-ಕಾಶ್ಮೀರದಲ್ಲಿನಿಜವಾಗಲೂ ಏನಾಗುತ್ತಿದೆ ಎಂದು ನಮಗೆ ಗೊತ್ತಿಲ್ಲ. ಪ್ರಾಥಮಿಕ ಮಾಹಿತಿಗಳು ನಮಗೆ ಸಿಕ್ಕಿಲ್ಲ. ಇದುವರೆಗೂ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ಆಂತರಿಕ ನೀತಿಗಳಲ್ಲಿಭಾರತ ಮೂಗುತೂರಿಸಿಲ್ಲ, ಹಸ್ತಕ್ಷೇಪ ಕೂಡ ಮಾಡಿಲ್ಲ. ಹಾಗಾಗಿ ನಾವು ಕೂಡ ಭಾರತದ ಸಾರ್ವಭೌಮತೆಯನ್ನು ಗೌರವಿಸಬೇಕು.

- ಮಿಲನ್‌ ಉಹ್ರಿಕ್‌, ಸ್ಲೊವಾಕಿಯಾದ ರಾಜಕಾರಣಿ ಹಾಗೂ ಯುರೋಪಿಯನ್‌ ಸಂಸತ್ತಿನ ಸದಸ್ಯ

......
ವಿಶ್ವಸಂಸ್ಥೆಯಲ್ಲಿಬಲವಂತವಾಗಿಯಾದರೂ ಕಾಶ್ಮೀರ ವಿಚಾರ ಪ್ರಸ್ತಾಪಿಸುವೆ


ಇಸ್ಲಾಮಾಬಾದ್‌: ಮುಂದಿನ ವಾರ ನಡೆಯುವೆ ವಿಶ್ವಸಂಸ್ಥೆ ಪ್ರಧಾನ ಅಧಿವೇಶನದಲ್ಲಿ(ಯುಎನ್‌ಜಿಎ) ಬಲವಂತವಾಗಿ ಒತ್ತಡ ಹೇರಿಯಾದರೂ ಸರಿ ಕಾಶ್ಮೀರ ವಿಚಾರವನ್ನು ತಪ್ಪದೇ ಪ್ರಸ್ತಾಪಿಸುವೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿಮಾತನಾಡಿದ ಖಾನ್‌, 370ನೇ ವಿಧಿ ರದ್ದತಿ ಹಿನ್ನೆಲೆ ಹೇರಲಾಗಿರುವ ನಿರ್ಬಂಧಗಳನ್ನು ಭಾರತ ಸಂಪೂರ್ಣ ತೆರವುಗೊಳಿಸುವ ತನಕ ಭಾರತದೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಲ್ಲಎಂದಿದ್ದಾರೆ.

...............
ಮೋದಿ ವಿಮಾನಕ್ಕೆ ವಾಯುಪ್ರದೇಶ ಬಳಕೆ ನಿರಾಕರಿಸಿದ ಪಾಕ್‌


ಸೆ.21 ರಿಂದ 27ರವರೆಗೆ ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನಕ್ಕೆ ಪಾಕ್‌ನ ವಾಯುಪ್ರದೇಶ ಬಳಕೆಗೆ ಅನುಮತಿ ನೀಡಲ್ಲಎಂದು ಪಾಕ್‌ ವಿದೇಶಾಂಗ ಸಚಿವ ಷಾ ಮೆಹಮೂದ್‌ ಖುರೇಷಿ ಹೇಳಿದ್ದಾರೆ. ಪ್ರಧಾನಿ ಮೋದಿ ವಿಮಾನಕ್ಕೆ ನಮ್ಮ ವಾಯುಪ್ರದೇಶದಲ್ಲಿಸಾಗಲು ಬಿಡಲ್ಲ ಎಂದು ಈಗಾಗಲೇ ಭಾರತೀಯ ರಾಯಭಾರ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

.........
ಗಡಿ ನುಸುಳಿಕೆ ವಿಡಿಯೊ ಬಿಡುಗಡೆ


ಸೆ.12 ಮತ್ತು 13ರಂದು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಉಗ್ರರನ್ನು ಗಡಿ ನುಸುಳಿಸಲು ಯತ್ನಿಸಿದ ಪಾಕಿಸ್ತಾನ ಬಾರ್ಡರ್‌ ಆ್ಯಕ್ಷನ್‌ ಟೀಂ (ಬ್ಯಾಟ್‌) ಯತ್ನವನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ. ಈ ಕುರಿತು ವಿಡಿಯೊ ಸಾಕ್ಷ್ಯವನ್ನು ಕೂಡ ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಕಮಾಂಡೊಗಳು ಮತ್ತು ಉಗ್ರರು ಗಡಿ ನುಸುಳಲು ಯತ್ನಿಸಿದಾಗ ಭಾರತದ ಯೋಧರು ಗ್ರೆನೇಡ್‌ಗಳನ್ನು ಹಾರಿಸಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ.

.............
ಪಾಕ್‌ನಿಂದ ಭಾರತೀಯ ಸೇನಾಧಿಕಾರಿಗಳ ನಕಲಿ ಟ್ವಿಟರ್‌ ಖಾತೆ ಸೃಷ್ಟಿ


ಕಾಶ್ಮೀರದಲ್ಲಿಭಾರತ ಮಾನವ ಹಕ್ಕುಗಳನ್ನು ಉಲ್ಲಂಘಿಘಿಸಿ ದೌರ್ಜನ್ಯ ಎಸಗುತ್ತಿದೆ ಎಂದು ಜಾಗತಿಕವಾಗಿ ಬಿಂಬಿಸಲು ಮತ್ತೊಂದು ಹುಸಿ ಯತ್ನಕ್ಕೆ ಪಾಕ್‌ ಸೇನೆ ಮುಂದಾಗಿದೆ. ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಸೇರಿದಂತೆ ಉನ್ನತ ಸೇನಾಧಿಕಾರಿಗಳ ಹೆಸರಿನಲ್ಲಿನಕಲಿ ಟ್ವಿಟರ್‌ ಖಾತೆಗಳನ್ನು ಪಾಕ್‌ ಸೃಷ್ಟಿಸಿದೆ. ಇದರಲ್ಲಿಕಾಶ್ಮೀರಿಗರ ಮೇಲೆ ದೌರ್ಜನ್ಯ ಎಂಬ ಶೀರ್ಷಿಕೆ ಅಡಿಯಲ್ಲಿನಕಲಿ ವಿಡಿಯೊಗಳನ್ನು ಪೋಸ್ಟ್‌ ಮಾಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ