ಆ್ಯಪ್ನಗರ

ಜಮ್ಮು-ಕಾಶ್ಮೀರ: ಟಾಯ್ಲೆಟ್‌ ಕೆಳಗಿನ ಸೆಪ್ಟಿಕ್‌ ಟ್ಯಾಂಕ್‌ ಇದೀಗ ಉಗ್ರರ ಹೊಸ ಅಡಗುತಾಣ!

ಕಂಗಾಲಾಗಿರುವ ಉಗ್ರರಿಗೆ ಅಡಗುದಾಣಗಳೇ ಇಲ್ಲದಂತಾಗಿದೆ. ಸ್ಥಳೀಯ ಸಹಚರರ ಸಹಾಯದಿಂದ ಅರಣ್ಯದಲ್ಲಿ ಗುಹೆಗಳನ್ನು ನಿರ್ಮಿಸಿ ಶಸ್ತ್ರಾಸ್ತ್ರಗಳನ್ನು ದೇಹದ ಸಮೇತ ಅಡಗುತ್ತಿದ್ದ ಉಗ್ರರಿಗೆ ಸದ್ಯ ಶೌಚಾಲಯಗಳ ಸೆಪ್ಟಿಕ್‌ ಟ್ಯಾಂಕ್‌ ಅಡಗುದಾಣವಾಗುತ್ತಿದೆ. ''ಅನಂತ್‌ನಾಗ್‌ ಜಿಲ್ಲೆಯ ವಾತ್ರಿಗಾಮ್‌ ಪ್ರದೇಶದಲ್ಲಿಗುಪ್ತಚರರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದಾಗ ಮನೆಯೊಂದರ ಶೌಚಾಲಯದ ಕಮೋಡಿನ ಕೆಳಗಿನ ಸೆಪ್ಟಿಕ್‌ ಟ್ಯಾಂಕ್‌ನಲ್ಲಿ ಉಗ್ರರು ಅಡಗಿರುವುದು ಪತ್ತೆಯಾಗಿತ್ತು.

Vijaya Karnataka Web 28 Sep 2020, 7:58 am
ಶ್ರೀನಗರ: ಭದ್ರತಾ ಪಡೆಗಳ ಕಣ್ಣು ತಪ್ಪಿಸಿ ಬಚಾವಾಗಲು ಜಮ್ಮು-ಕಾಶ್ಮೀರದಲ್ಲಿ ಉಗ್ರರು ಶೌಚಾಲಯಗಳ ಸೆಪ್ಟಿಕ್‌ ಟ್ಯಾಂಕ್‌ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಗಡಿಯಲ್ಲಿಅಕ್ರಮ ಒಳನುಸುಳುವಿಕೆ ತಡೆಯಲು ಕಟ್ಟೆಚ್ಚರವಹಿಸಿರುವ ಬಿಎಸ್‌ಎಫ್‌ ಯೋಧರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡುತ್ತಿದ್ದರೆ, ಇನ್ನೊಂದೆಡೆ ಭದ್ರತಾ ಪಡೆಗಳು ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾಶ್ಮೀರದಲ್ಲಿನ ಮೂಲೆ ಮೂಲೆಗಳಲ್ಲಿಅಡಗಿರುವ ಉಗ್ರರನ್ನು ಹುಡುಕಿ ಬೇಟೆಯಾಡುತ್ತಿದ್ದಾರೆ.
Vijaya Karnataka Web toilet
Picture used for representational purpose only


ಇದರಿಂದ ಕಂಗಾಲಾಗಿರುವ ಉಗ್ರರಿಗೆ ಅಡಗುದಾಣಗಳೇ ಇಲ್ಲದಂತಾಗಿದೆ. ಸ್ಥಳೀಯ ಸಹಚರರ ಸಹಾಯದಿಂದ ಅರಣ್ಯದಲ್ಲಿ ಗುಹೆಗಳನ್ನು ನಿರ್ಮಿಸಿ ಶಸ್ತ್ರಾಸ್ತ್ರಗಳನ್ನು ದೇಹದ ಸಮೇತ ಅಡಗುತ್ತಿದ್ದ ಉಗ್ರರಿಗೆ ಸದ್ಯ ಶೌಚಾಲಯಗಳ ಸೆಪ್ಟಿಕ್‌ ಟ್ಯಾಂಕ್‌ ಅಡಗುದಾಣವಾಗುತ್ತಿದೆ. ''ಅನಂತ್‌ನಾಗ್‌ ಜಿಲ್ಲೆಯ ವಾತ್ರಿಗಾಮ್‌ ಪ್ರದೇಶದಲ್ಲಿಗುಪ್ತಚರರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದಾಗ ಮನೆಯೊಂದರ ಶೌಚಾಲಯದ ಕಮೋಡಿನ ಕೆಳಗಿನ ಸೆಪ್ಟಿಕ್‌ ಟ್ಯಾಂಕ್‌ನಲ್ಲಿ ಉಗ್ರರು ಅಡಗಿರುವುದು ಪತ್ತೆಯಾಗಿತ್ತು.

ಟೈಲ್ಸ್‌ಗಳನ್ನು ಸೀಳಿ ಹೊಸದಾಗಿ ಸಿಮೆಂಟ್‌ ಮೆತ್ತಲಾಗಿತ್ತು. ಜತೆಗೆ ಕಮೋಡ್‌ನಲ್ಲಿಆಗ ತಾನೆ ಟಾಯ್ಲೆಟ್‌ ಬಳಸಿರುವಂತೆ ಅಶೌಚ ಕಾಯ್ದುಕೊಳ್ಳಲಾಗಿತ್ತು. ಆದರೆ ಅನುಮಾನಗೊಂಡು ಟೈಲ್ಸ್‌ಗಳನ್ನು ಅಗೆದಾಗ ಕೂಡಲೇ ಗುಂಡಿನ ದಾಳಿ ಕೆಳಗಿನಿಂದ ಆರಂಭವಾಯಿತು,'' ಎಂದು ಡಿಜಿಪಿ ದಿಲ್‌ಬಾಗ್‌ ಸಿಂಗ್‌ ಹೇಳಿದ್ದಾರೆ. ಇದೇ ರೀತಿ ಪುಲ್ವಾಮಾ-ಶೋಪಿಯಾನ್‌ ಗಡಿಯಲ್ಲಿನ ಮನೆಯೊಂದರಲ್ಲಿ ಆರು ಬಾರಿ ಶೋಧ ನಡೆಸಿದಾಗಲೂ ಸಿಗದ ಉಗ್ರರು ಏಳನೇ ಬಾರಿ ಮಲ-ಮೂತ್ರಗಳ ಸಂಗ್ರಹದ ಟ್ಯಾಂಕ್‌ನಲ್ಲಿ ಅಡಗಿದ್ದು ಪತ್ತೆಯಾಗಿತ್ತು ಎಂದಿದ್ದಾರೆ.

ಸೆ. 28: ಇಂದು ಸರ್ಜಿಕಲ್‌ ದಾಳಿ ದಿನಾಚರಣೆ, ಪಾಪಿಗಳನ್ನು ಯಮಲೋಕಕ್ಕೆ ಅಟ್ಟಿದ ದಿನಕ್ಕೆ 4 ವರ್ಷ!

ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿದು ನಂತರ ಒಣಗುವ ನದಿಗಳ ಮಧ್ಯೆ 6-10 ಅಡಿ ಆಳದ ಗುಂಡಿಗಳನ್ನು ತೋಡಿ ಅದರಲ್ಲಿ ಬಂಕರ್‌ ನಿರ್ಮಿಸಿ ಪಾಕ್‌ ಪೋಷಿತ ಉಗ್ರರು ಅಡಗಿಕೊಳ್ಳುತ್ತಿರುವುದನ್ನು ಕೂಡ ಡ್ರೋನ್‌ಗಳ ಬಳಕೆ ಮೂಲಕ ಪತ್ತೆ ಮಾಡಲಾಗಿದೆ.

ಭಾರತ-ಪಾಕ್‌ ನಡುವೆ ಗುಂಡಿನ ಚಕಮಕಿ!

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಶನಿವಾರ ರಾತ್ರಿ ಸುಮಾರು 30 ನಿಮಿಷಗಳ ಕಾಲ ಭಾರತ ಮತ್ತು ಪಾಕಿಸ್ತಾನ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮಾಂಗು ಛಾಕ್‌ ಗಡಿ ಔಟ್‌ಪೋಸ್ಟ್‌ ನಲ್ಲಿ ರಾತ್ರಿ 11.45ಕ್ಕೆ ಅನುಮಾನಾಸ್ಪದವಾಗಿ 3-4 ಜನರು ಪಾಕಿಸ್ತಾನದ ಪೀರ್‌ ಬಂಕರ್‌ ಪೋಸ್ಟ್‌ ಕಡೆಯಿಂದ ಗುಂಡು ಹಾರಿಸಿದ್ದಾರೆ. ಅವರು ಭಾರತ ಗಡಿ ಪ್ರವೇಶಿಸಲು ಕೂಡ ಯತ್ನಿಸಿದ್ದಾರೆ.

ಭಾರತೀಯ ಯೋಧರ ಗಮನ ಅತ್ತ ಹರಿದಾಗ, ಪಾಕ್‌ ಸೈನಿಕರು ಕತ್ತಲೆಯಲ್ಲಿಯೇ ಭಾರತದ ಗಡಿಯತ್ತ ಗುಂಡು ಹಾರಿಸಿದ್ದಾರೆ. ಭಾರತೀಯ ಯೋಧರು ಕೂಡ ಅರ್ಧ ಗಂಟೆಗಳ ಕಾಲ ಪಾಕ್‌ ಗಡಿಯತ್ತ ಗುಂಡಿನ ದಾಳಿ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ ಪ್ರದೇಶದ ಸುತ್ತಲೂ ತೀವ್ರ ಶೋಧ ಕಾರ್ಯ ನಡೆಸಲಾಗಿದೆ. ಡ್ರೋನ್‌ ಮೂಲಕ ಶಸ್ಸ್ತ್ರಾಸ್ತ್ರಗಳನ್ನು ಪಾಕ್‌ ಮಿಲಿಟರಿ ಎಸೆದಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ