ಆ್ಯಪ್ನಗರ

ರಜೆಯ ಮೇಲೆ ತೆರಳಿದ್ದ ಮತ್ತೊಬ್ಬ ಸೈನಿಕನ ಹತ್ಯೆ

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ವಾರ್ಪೋರಾದಲ್ಲಿ ಶನಿವಾರ ಸಂಜೆ 5.25ಕ್ಕೆ ಈ ಕೃತ್ಯ ನಡೆದಿದ್ದು, ಮುಸುಕುಧಾರಿ ಉಗ್ರರು ಆತನನ್ನು ಗುಂಡಿಕ್ಕಿ ಪರಾರಿಯಾಗಿದ್ದಾರೆ.

TIMESOFINDIA.COM 7 Apr 2019, 10:00 am
ಶ್ರೀನಗರ: ಕಣಿವೆ ನಾಡಿನಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು ಯುಗಾದಿ ದಿನ (ಶನಿವಾರ) ರಜೆಯ ಮೇಲೆ ಮನೆಗೆ ತೆರಳಿದ್ದ ಸೈನಿಕನನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.
Vijaya Karnataka Web Terrorists


ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ವಾರ್ಪೋರಾದಲ್ಲಿ ಶನಿವಾರ ಸಂಜೆ 5.25ಕ್ಕೆ ಈ ಕೃತ್ಯ ನಡೆದಿದ್ದು, ಮುಸುಕುಧಾರಿ ಉಗ್ರರು ಆತನನ್ನು ಗುಂಡಿಕ್ಕಿ ಪರಾರಿಯಾಗಿದ್ದಾರೆ.

ಮೃತರನ್ನು ಮೊಹಮ್ಮದ್ ರಫಿ ಯಾತೂ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಗೊಳಗಾದ ಅವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅವರದಾಗಲೇ ಮೃತ ಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಸೈನಿಕ ಔರಂಗ್ ಜೇಬ್ ಅವರನ್ನು ರಜೆಯ ಮೇಲೆ ಮನೆಗೆ ತೆರಳುತ್ತಿದ್ದಾಗ ಹತ್ಯೆಗೈಯ್ಯಲಾಗಿತ್ತು. 10 ತಿಂಗಳಲ್ಲಿ ಇದೇ ರೀತಿಯಲ್ಲಿ ನಡೆದ ನಾಲ್ಕನೇ ಹತ್ಯೆ ಇದಾಗಿದೆ.

ಜುಲೈ ತಿಂಗಳಲ್ಲಿ 23 ವರ್ಷದ ಸೈನ್ಯಾಧಿಕಾರಿ ಉಮರ್ ಫಯಾಜ್ ಎಂಬುವವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ತಮ್ಮ ಸೋದರ ಸಂಬಂಧಿ ಮದುವೆಗೆ ಹೋಗಿದ್ದ ವೇ ಅವರ ಹತ್ಯೆ ನಡೆದಿತ್ತು.

ಸೆಪ್ಟೆಂಬರ್ ತಿಂಗಳಲ್ಲಿ ಲ್ಯಾನ್ಸ್ ನಾಯಕ್ ಮುಕ್ತಾರ್ ಅಬ್ಬಾಸ್ ಮಲಿಕ್ ಅವರನ್ನು ಹತ್ಯೈಗೆಯ್ಯಲಾಗಿತ್ತು. ಮಗನ ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ನಡೆಸುತ್ತಿದ್ದ ವೇಳೆ ಪತ್ರಕರ್ತರ ವೇಷದಲ್ಲಿ ಬಂದು ಕೊಲ್ಲಲಾಗಿತ್ತು. ನನ್ನನ್ನು ಕೊಂದರೂ ನಾನು ಸೇನೆಯ ಮಾಹಿತಿ ಹೇಳಲಾರೆ ಎಂಬುದು ಮಲಿಕ್‌ರವರ ಕೊನೆಯ ಮಾತಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ