ಆ್ಯಪ್ನಗರ

ಜಮ್ಮು ಕಾಶ್ಮೀರ: ಮೂವರು ಲಷ್ಕರ್‌ ಉಗ್ರರು ಹತ್ಯೆ

​​ಸೊಪೋರ್‌ನ ಉಗ್ರರ ಅಡಗುದಾಣದ ಬಗ್ಗೆ ಖಚಿತ ಮಾಹಿತಿ ಪಡೆದ ಸೇನಾ ಪಡೆಗಳು ಸೋಮವಾರ ಬೆಳಗ್ಗೆ ದಾಳಿ ನಡೆಸಿದವು. ಒಂದು ತಾಸು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಲಷ್ಕರೆ ಉಗ್ರರು ಹತರಾದರು. ಇವರಲ್ಲಿ ಇಬ್ಬರು ಪಾಕಿಸ್ತಾನಿ­ಗಳು

Vijaya Karnataka Web 13 Jul 2020, 11:01 pm
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಧಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದ ಲಷ್ಕರೆ ತಯ್ಬಾ ಸಂಘಟನೆಯ ಮೂವರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಹೊಡೆದು­ರುಳಿಸಿವೆ.
Vijaya Karnataka Web ಯೋಧರು
ಯೋಧರು


ಸೊಪೋರ್‌ನ ಉಗ್ರರ ಅಡಗುದಾಣದ ಬಗ್ಗೆ ಖಚಿತ ಮಾಹಿತಿ ಪಡೆದ ಸೇನಾ ಪಡೆಗಳು ಸೋಮವಾರ ಬೆಳಗ್ಗೆ ದಾಳಿ ನಡೆಸಿದವು. ಒಂದು ತಾಸು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಲಷ್ಕರೆ ಉಗ್ರರು ಹತರಾದರು. ಇವರಲ್ಲಿ ಇಬ್ಬರು ಪಾಕಿಸ್ತಾನಿಗಳು ಎಂದು ಉತ್ತರ ಕಾಶ್ಮೀರದ ಡಿಐಜಿ ಮಹಮ್ಮದ್‌ ಸುಲೇಮನ್‌ ಚೌಧರಿ ತಿಳಿಸಿದ್ದಾರೆ.

''ಉತ್ತರ ಕಾಶ್ಮೀರದಲ್ಲಿ 35-40 ಉಗ್ರರು ಸಕ್ರಿಯವಾಗಿದ್ದಾರೆ. ಇವರ ಪೈಕಿ 16-17 ಉಗ್ರರು ಸ್ಥಳೀ­ಯರು'' ಎಂದು ತಿಳಿಸಿದ್ದಾರೆ.

ನರವಣೆ ಗಡಿ ಭೇಟಿ: ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಅವರು ಸೋಮ­ವಾರ ಪಠಾಣ್‌ಕೋಟ್‌-ಜಮ್ಮು ಅಂತಾರಾಷ್ಟ್ರೀಯ ಗಡಿ ಭಾಗಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಮತ್ತು ಸೇನಾ ಸನ್ನದ್ಧತೆಯ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು.

ಡ್ರೋನ್‌ ಭೀತಿ: ಜಮ್ಮುವಿನ ಗ್ರಾಮ­ವೊಂದರ ಹೊರ ವಲಯದಲ್ಲಿ ಸೋಮ­ವಾರ ಡ್ರೋನ್‌ವೊಂದು ಪ್ರತ್ಯಕ್ಷಗೊಂಡು ಕೆಲ ಕಾಲ ಆತಂಕದ ಸನ್ನಿವೇಶ ನಿರ್ಮಾಣ­ಗೊಂಡಿತ್ತು. ಅದು ನೆರೆಯ ಪಾಕಿಸ್ತಾನ­ದಿಂದ ಹಾರಿ ಬಂದ ಡ್ರೋನ್‌ ಇರಬೇಕು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ತನಿಖೆಯ ನಂತರ, ಭಾರತೀಯ ಸೇನಾ ಪಡೆಯ ಡ್ರೋನ್‌ ಎನ್ನುವುದು ಖಾತ್ರಿ­ಯಾದ ಬಳಿಕ ಸಮಾಧಾನ ತಳೆಯಲಾ­ಯಿತು. ಬ್ಯಾಟರಿ ದುರ್ಬಲಗೊಂಡಿದ್ದ­ರಿಂದ ಆ ಡ್ರೋನ್‌ ಗ್ರಾಮದ ಬಳಿ ನೆಲಕಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ