ಆ್ಯಪ್ನಗರ

ಬಯಲಾಯ್ತು ಸ್ಫೋಟಕ ಸುದ್ದಿ, ಅಜಿತ್‌ ದೋವಲ್‌ ಹತ್ಯೆಗೆ ಉಗ್ರರ ಸಂಚು?

​​ಜೈಷೆ ಮೊಹಮ್ಮದ್‌ ಸಂಘಟನೆಯ ಅಂಗ-ಸಂಸ್ಥೆ ಜೈಷೆ ಮುಸ್ತಫಾ (ಜೆಇಎಂ) ಮುಖ್ಯಸ್ಥನಾದ ಮಲಿಕ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನು ದೋವಲ್‌ ಅವರ ಕಚೇರಿಯ ಪೂರ್ಣ ಚಿತ್ರೀಕರಣ ಮಾಡಿರುವುದನ್ನು ಬಾಯಿಬಿಟ್ಟಿದ್ದಾನೆ.

Vijaya Karnataka Web 14 Feb 2021, 10:46 am
ಹೊಸದಿಲ್ಲಿ: ಪಾಕಿಸ್ತಾನ ಉಗ್ರರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಹತ್ಯೆಗೆ ಸಂಚು ರೂಪಿಸಿರುವ ಸಂಗತಿ ಬಯಲಾಗಿದೆ.
Vijaya Karnataka Web ಅಜಿತ್‌ ದೋವಲ್
ಅಜಿತ್‌ ದೋವಲ್


ಜೈಷೆ ಮೊಹಮ್ಮದ್‌ ಮುಖಂಡರು ಅಜಿತ್‌ ದೋವಲ್‌ ಅವರ ಕಚೇರಿಯ ವಿಡಿಯೊ ಚಿತ್ರೀಕರಣ ಮಾಡಿಕೊಂಡಿರುವುದು ಬಂಧಿತ ಉಗ್ರನೊಬ್ಬನ ವಿಚಾರಣೆ ವೇಳೆ ತಿಳಿದುಬಂದಿದೆ. ಫೆ. 6 ರಂದು ಜಮ್ಮು ನಗರದಲ್ಲಿ ಉಗ್ರ ಹಿದಾಯತುಲ್ಲಾ ಮಲಿಕ್‌ನನ್ನು ಭದ್ರತಾ ಪಡೆಗಳು ಬಂಧಿಸಿವೆ.

ಜೈಷೆ ಮೊಹಮ್ಮದ್‌ ಸಂಘಟನೆಯ ಅಂಗ-ಸಂಸ್ಥೆ ಜೈಷೆ ಮುಸ್ತಫಾ (ಜೆಇಎಂ) ಮುಖ್ಯಸ್ಥನಾದ ಮಲಿಕ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನು ದೋವಲ್‌ ಅವರ ಕಚೇರಿಯ ಪೂರ್ಣ ಚಿತ್ರೀಕರಣ ಮಾಡಿರುವುದನ್ನು ಬಾಯಿಬಿಟ್ಟಿದ್ದಾನೆ. ಇದರ ಬೆನ್ನಿಗೇ ದೋವಲ್‌ ಸೇರಿದಂತೆ ಅವರ ಕಚೇರಿಯ ಕೆಲವು ಉನ್ನತ ಅಧಿಕಾರಿಗಳ ಭದ್ರತೆಯನ್ನು ಸರಕಾರ ಮತ್ತಷ್ಟು ಹೆಚ್ಚಿಸಿದೆ.

''2019ರ ಮೇ 24ರಂದು ಶ್ರೀನಗರದಿಂದ ದಿಲ್ಲಿಗೆ ಇಂಡಿಗೊ ವಿಮಾನವೊಂದರಲ್ಲಿ ತೆರಳಿ, ಎನ್‌ಎಸ್‌ಎ ಕಚೇರಿಗೆ ಗೌಪ್ಯವಾಗಿ ಪ್ರವೇಶ ಪಡೆದು ವಿಡಿಯೊ ಚಿತ್ರೀಕರಿಸಿದ್ದೇನೆ. ಬಳಿಕ ಬಸ್‌ನಲ್ಲಿ ಶ್ರೀನಗರಕ್ಕೆ ಮರಳಿದ್ದೇನೆ. ಜಮ್ಮುವಿನ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಕೆಲವು ವಿಡಿಯೊಗಳನ್ನೂ ಚಿತ್ರಿಸಿದ್ದೇನೆ'' ಎಂದೂ ಆತ ಬಾಯಿ ಬಿಟ್ಟಿದ್ದಾನೆ.

2019ರ ಪುಲ್ವಾಮ ದಾಳಿ ವೇಳೆ ಆತ್ಮಾಹುತಿ ದಾಳಿಕೋರ ಬಳಸಿದ್ದ ಕಾರು ಕೂಡ ಮಲಿಕ್‌ನದ್ದೇ ಎಂಬುದೂ ತನಿಖೆಯಲ್ಲಿ ಬಯಲಾಗಿತ್ತು.

ಜೈಷ್‌ ನಾಯಕನ ಹಳೆಯ ದ್ವೇಷ

1994ರಲ್ಲಿ ಜೈಷೆ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಬಂಧಿಸಿ ಅಂದಿನ ಗುಪ್ತಚರ ವಿಭಾಗದ ಜಂಟಿ ನಿರ್ದೇಶಕರಾಗಿದ್ದ ಅಜಿತ್‌ ದೋವಲ್‌ ಅವರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ 1999ರಲ್ಲಿ ವಿಮಾನ ಹೈಜಾಕ್‌ ವೇಳೆ ಅನಿವಾರ್ಯ ಸಂಧಾನ ನಡೆದು ಕಂದಹಾರ್‌ ಏರ್‌ಪೋರ್ಟ್‌ಗೆ ಉಗ್ರ ಅಜರ್‌ನನ್ನು ದೋವಲ್‌ ತಂದು ಬಿಟ್ಟಿದ್ದರು. ಹಾಗಾಗಿ ಅಜರ್‌ ಬಹಳ ವರ್ಷಗಳಿಂದಲೂ ದೋವಲ್‌ ಅವರ ಚಲನವಲನಗಳ ಮೇಲೆ ಕಣ್ಣಿಟ್ಟು ದ್ವೇಷ ತೀರಿಸಿಕೊಳ್ಳಲು ಕಾಯುತ್ತಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ