ಠಾಣೆ: 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಆರೋಪಿ ಹಾಗೂ ಆತನ ತಾಯಿ ವಿರುದ್ಧ ದೂರು ದಾಖಲಾಗಿದೆ.
ಪಂಚಪಕಾಡಿಯಲ್ಲಿ ಈ ಹೀನ ಕೃತ್ಯ ನಡೆದ ಬಗ್ಗೆ ವರದಿಯಾಗದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಸಂತ್ರಸ್ತ ಬಾಲಕಿಯ ಭಾವ ಪ್ರಕರಣದ ಪ್ರಮುಖ ಆರೋಪಿ. ಕಾಮುಕ ಕಳೆದ ಎಂಟು ತಿಂಗಳಿಂದ ಅತ್ಯಾಚಾರ ನಡೆಸಿದ್ದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಮೂಲತಃ ಪರ್ಭಾನಿ ಗ್ರಾಮದವಳು. 2016ರ ಜುಲೈನಿಂದ ತನ್ನ ಸಹೋದರ ಸಂಬಂಧಿ ಕುಟುಂಬದ ಜತೆ ವಾಸವಾಗಿದ್ದಳು ಎಂದು ಇನ್ಸ್ಪೆಕ್ಟರ್ ಪ್ರಶಾಂತ್ ಲೋಂಡೆ ಹೇಳಿದ್ದಾರೆ.
ದಿನಗೂಲಿ ಕಾರ್ಮಿಕನಾಗಿರುವ ಆರೋಪಿ ಅಪ್ರಾಪ್ತೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಹಲ್ಲೆ ನಡೆಸಿದ್ದ. ಈ ವಿಷಯವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿಯೂ ಆಕೆಗೆ ಬೆದರಿಕ ಒಡ್ಡಿದ್ದ ಎನ್ನಲಾಗಿದೆ.
ಗರ್ಭ ಧರಿಸುವ ಬಗ್ಗೆ ಅನುಮಾನ ಮೂಡಿದ ನಂತರ ಬಾಲಕಿ ಈ ವಿಷಯವನ್ನು ಆರೋಪಿಯ ತಾಯಿಯ ಗಮನಕ್ಕೆ ತಂದಿದ್ದಳು. ಆಗ ಆಕೆ ಮಗ ಪರವಹಿಸಿ ಸಂತ್ರಸ್ತೆಯನ್ನೇ ದಬಾಯಿಸಿದ್ದಳು. ನಂತರ ಮಗನ ದುಷ್ಕೃತ್ಯಕ್ಕೆ ಆಕೆಯೂ ಕುಮ್ಮಕ್ಕು ನೀಡುತ್ತಿದ್ದಳು ಎಂದು ಸಂತ್ರಸ್ತೆ ದೂರಿದ್ದಾಳೆ.
ಪಂಚಪಕಾಡಿಯಲ್ಲಿ ಈ ಹೀನ ಕೃತ್ಯ ನಡೆದ ಬಗ್ಗೆ ವರದಿಯಾಗದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಸಂತ್ರಸ್ತ ಬಾಲಕಿಯ ಭಾವ ಪ್ರಕರಣದ ಪ್ರಮುಖ ಆರೋಪಿ. ಕಾಮುಕ ಕಳೆದ ಎಂಟು ತಿಂಗಳಿಂದ ಅತ್ಯಾಚಾರ ನಡೆಸಿದ್ದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಮೂಲತಃ ಪರ್ಭಾನಿ ಗ್ರಾಮದವಳು. 2016ರ ಜುಲೈನಿಂದ ತನ್ನ ಸಹೋದರ ಸಂಬಂಧಿ ಕುಟುಂಬದ ಜತೆ ವಾಸವಾಗಿದ್ದಳು ಎಂದು ಇನ್ಸ್ಪೆಕ್ಟರ್ ಪ್ರಶಾಂತ್ ಲೋಂಡೆ ಹೇಳಿದ್ದಾರೆ.
ದಿನಗೂಲಿ ಕಾರ್ಮಿಕನಾಗಿರುವ ಆರೋಪಿ ಅಪ್ರಾಪ್ತೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಹಲ್ಲೆ ನಡೆಸಿದ್ದ. ಈ ವಿಷಯವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿಯೂ ಆಕೆಗೆ ಬೆದರಿಕ ಒಡ್ಡಿದ್ದ ಎನ್ನಲಾಗಿದೆ.
ಗರ್ಭ ಧರಿಸುವ ಬಗ್ಗೆ ಅನುಮಾನ ಮೂಡಿದ ನಂತರ ಬಾಲಕಿ ಈ ವಿಷಯವನ್ನು ಆರೋಪಿಯ ತಾಯಿಯ ಗಮನಕ್ಕೆ ತಂದಿದ್ದಳು. ಆಗ ಆಕೆ ಮಗ ಪರವಹಿಸಿ ಸಂತ್ರಸ್ತೆಯನ್ನೇ ದಬಾಯಿಸಿದ್ದಳು. ನಂತರ ಮಗನ ದುಷ್ಕೃತ್ಯಕ್ಕೆ ಆಕೆಯೂ ಕುಮ್ಮಕ್ಕು ನೀಡುತ್ತಿದ್ದಳು ಎಂದು ಸಂತ್ರಸ್ತೆ ದೂರಿದ್ದಾಳೆ.