ಆ್ಯಪ್ನಗರ

ಜೈಲಿಗೆ ಹಾಕಿ ಮನೋಬಲ ಕುಗ್ಗಿಸುವ ಬಿಜೆಪಿ ಪ್ರಯತ್ನ ಫಲಿಸದು ಎಂದ ಚಿದಂಬರಂ

ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಸಿಲುಕಿಸುವ ಮೂಲಕ ತಮ್ಮ ಮನೋಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಡೆಸಿತು ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ದೂರಿದ್ದಾರೆ.

Agencies 7 Dec 2019, 8:33 pm

ಚೆನ್ನೈ: ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಸಿಲುಕಿಸುವ ಮೂಲಕ ತಮ್ಮ ಮನೋಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಡೆಸಿತು ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಆರೋಪಿಸಿದರು.
Vijaya Karnataka Web Chidambaram


ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಪ್ರಕರಣದ ಬಗ್ಗೆ ನಾನೇನೂ ಮಾತನಾಡಲಾರೆ. ಆದರೆ ನನ್ನನ್ನು ಏಕೆ ಜೈಲಿಗೆ ತಳ್ಳಲಾಯಿತು? ನನ್ನ ಮನೋಬಲ ಕುಗ್ಗುತ್ತದೆ ಎಂಬುದಾಗಿ ಅವರು (ಬಿಜೆಪಿ) ಭಾವಿಸಿದ್ದರಬಹುದು. ಅದು ಎಂದಿಗೂ ಸಾಧ್ಯವಾಗದ ಮಾತು. ನಾನು ಎಡವಿ ಬೀಳುತ್ತೇನೆ ಎಂಬುದಾಗಿ ಯಾರಾದರೂ ಭಾವಿಸಿಕೊಂಡಿದ್ದರೆ ಆ ನಿರೀಕ್ಷೆ ನಿಜವಾಗದು. ಏಕೆಂದರೆ ಇಡೀ ಪಕ್ಷ ಹಾಗೂ ಸ್ವಾತಂತ್ರ್ಯದ ಪರವಾಗಿರುವ ದೇಶದ ಜನ ನನ್ನೊಂದಿಗೆ ಇದ್ದಾರೆ,'' ಎಂದು ಹೇಳಿದರು.

ಕೇಂದ್ರ ಸರಕಾರಕ್ಕೆ ಆರ್ಥಿಕತೆಯ ಬಗ್ಗೆ ಅರಿವೇ ಇಲ್ಲ: ಚಿದಂಬರಂ ಟೀಕೆ

ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಮೊದಲು ಸಿಬಿಐ, ನಂತರ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಕಾಂಗ್ರೆಸ್‌ ನಾಯಕ ಚಿದಂಬರಂ ಅವರು 106 ದಿನಗಳನ್ನು ತಿಹಾರ್‌ ಜೈಲಿನಲ್ಲಿ ಕಳೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ