ಆ್ಯಪ್ನಗರ

ಆಲೂ ಹಾಕಿದರೆ ಚಿನ್ನ ಕೊಡೋ ಯಂತ್ರ ಸ್ಥಾಪಿಸುವೆ: ರಾಹುಲ್ ಹೇಳಿಕೆ ವೈರಲ್

'ಕೊಟ್ಟ ಭರವಸೆಗಳನ್ನು ಮೋದಿ ಈಡೇರಿಸಿಲ್ಲ,' ಎಂದು ಹೇಳುವ ಭರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, 'ಆಲೂಗಡ್ಡೆ ಹಾಕಿದರೆ, ಚಿನ್ನ ಹೊರ ಬರುವಂಥ ಯಂತ್ರ ಸ್ಥಾಪಿಸುವೆ,' ಎಂದು ಹೇಳಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Vijaya Karnataka Web 16 Nov 2017, 11:31 am
ಹೊಸದಿಲ್ಲಿ: 'ಕೊಟ್ಟ ಭರವಸೆಗಳನ್ನು ಮೋದಿ ಈಡೇರಿಸಿಲ್ಲ,' ಎಂದು ಹೇಳುವ ಭರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, 'ಆಲೂಗಡ್ಡೆ ಹಾಕಿದರೆ, ಚಿನ್ನ ಹೊರ ಬರುವಂಥ ಯಂತ್ರ ಸ್ಥಾಪಿಸುವೆ,' ಎಂದು ಹೇಳಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Vijaya Karnataka Web the truth behind rahul gandhis viral potato gold speech
ಆಲೂ ಹಾಕಿದರೆ ಚಿನ್ನ ಕೊಡೋ ಯಂತ್ರ ಸ್ಥಾಪಿಸುವೆ: ರಾಹುಲ್ ಹೇಳಿಕೆ ವೈರಲ್


ಈಗಾಗಲೇ ಮೋದಿ ಕಾಲೆಳೆಯಲು ಹೋಗಿ, ಸಾಮಾಜಿಕ ಜಾಲತಾಣದಲ್ಲಿ ತಮಾಷೆಗೆ ಒಳಗಾಗಿರುವ ರಾಹುಲ್, ಮತ್ತೊಮ್ಮೆ ಜನರನ್ನು ಮೆಚ್ಚಿಸಲು ಏನೋ ಹೇಳಲು ಹೋಗಿ, ಏನನ್ನೋ ಹೇಳಿದ್ದು ಎಡವಟ್ಟಾಗಿದೆ.

ಗುಜರಾತಿನಲ್ಲಿ ಮುಂದಿನ ತಿಂಗಳು ನಡೆಯುವ ಚುನಾವಣೆಗಾಗಿ ರಾಹುಲ್ ಪ್ರಚಾರ ಕಾರ್ಯ ಕೈಗೊಂಡಿದ್ದು, ತನ್ನನ್ನು ತಾನು ಶ್ರೀ ಸಾಮಾನ್ಯನಂತೆ ಬಿಂಬಿಸಿಕೊಳ್ಳಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮೋದಿ ತೆಗೆದುಕೊಂಡಿರುವ ಕ್ರಾಂತಿಕಾರಿ ಯೋಜನೆಗಳಿಂದ ಜನರು ಸಂಕಟ ಅನುಭವಿಸುತ್ತಿದ್ದಾರೆಂದು ಆರೋಪಿಸುತ್ತಿದ್ದು, ರೈತರಿಗೆ, ಶ್ರೀ ಸಾಮಾನ್ಯರಿಗೆ ಅನುಕೂಲವಾಗುವಂಥ ಯಾವ ಯೋಜನೆಗಳನ್ನೂ ಪ್ರಧಾನಿ ಕೈಗೊಂಡಿಲ್ಲ ಎಂದೇ ಪ್ರಚಾರ ಮಾಡುತ್ತಿದ್ದಾರೆ.

ನಿಜವಾಗಲೂ ಕಾಂಗ್ರೆಸ್ ಉಪಾಧ್ಯಕ್ಷ ಹೇಳಿದ್ದೇನು?:

ಆದಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, 'ರಾಜ್ಯದ ಆದಿವಾಸಿಗಳಿಗೆ 40 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿದ್ದ ಮೋದಿ, ಒಂದೇ ಒಂದು ಪೈಸಾವನ್ನೂ ಕೊಟ್ಟಿಲ್ಲ. ತಿಂಗಳ ಹಿಂದೆ ಗುಜರಾತಿನಲ್ಲಿ ಪ್ರವಾಹವಿತ್ತು. ಆಗಲೂ 500 ಕೋಟಿ ರೂ. ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದು, ಇದುವರೆಗೂ ಒಂದು ರುಪಾಯಿಯನ್ನೂ ನೀಡಿಲ್ಲ, ' ಎಂದು ಹೇಳಿದ್ದರು.

ವೀಡಿಯೋ ನೋಡಿ
RT if you think Rahul Gandhi is India's best stand up comedian😂😂 pic.twitter.com/Xm4PSaw1Z4 — Rishi Bagree 🇮🇳 (@rishibagree) 14 November 2017
'ಆಲೂಗಡ್ಡೆ ಹಾಕಿದರೆ ಚಿನ್ನ ನೀಡುವಂಥ ಯಂತ್ರವನ್ನು ಸ್ಥಾಪಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ, ಯಾವ ಭರವಸೆಯನ್ನೂ ಈಡೇರಿಸಿಲ್ಲ,' ಎಂದು ಸುಮಾರು 27 ನಿಮಿಷಗಳ ಕಾಲ ಮಾಡಿದ ಭಾಷಣದಲ್ಲಿ ರಾಹುಲ್ ಪ್ರಧಾನಿಯನ್ನು ಟೀಕಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗುವಾಗ 'ಮೋದಿ ಹೇಳಿದ್ದರು' ಎಂದು ಹೇಳಿರುವುದನ್ನು ಕತ್ತರಿಸಿ, ರಾಹುಲ್ ಭಾಷಣವನ್ನು ಪೋಸ್ಟ್ ಮಾಡಲಾಗುತ್ತಿದೆ, ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಇದು ಕೆಲವೆಡೆ ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ