ಆ್ಯಪ್ನಗರ

ಅತ್ತ ಸಚಿವರಿಲ್ಲ, ಇತ್ತ ಹಿರಿಯ ಅಧಿಕಾರಿಗಳಿಗೆ ಕೊರೊನಾ; ಅನಾಥವಾದ ಮ. ಪ್ರದೇಶ ಆರೋಗ್ಯ ಇಲಾಖೆ

ಕಳೆದ 2-3 ವಾರದಲ್ಲಿ ಅಪಾಯಕಾರಿ ಸೋಂಕಿತ ರಾಜ್ಯವಾಗಿ ಮಧ್ಯ ಪ್ರದೇಶ ಹೊರಹೊಮ್ಮಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯನ್ನು ಮುಂದೆ ನಿಂತು ಮುನ್ನಡೆಸಬೇಕಿದ್ದ ಸಚಿವರೇ ಇಲ್ಲ. ಏಕೆಂದರೆ ಸಿಎಂ ಮಂತ್ರಿ ಮಂಡಲವನ್ನೇ ವಿಸ್ತರಿಸಿಲ್ಲ!

Agencies 17 Apr 2020, 11:31 pm

ಇಂದೋರ್‌: ದೇಶದಲ್ಲಿಅತಿ ಹೆಚ್ಚು ಕೊರೊನಾ ಪೀಡಿತ ಐದು ರಾಜ್ಯಗಳ ಪೈಕಿ 3ನೇ ಸ್ಥಾನದಲ್ಲಿರುವ ಮಧ್ಯ ಪ್ರದೇಶದಲ್ಲಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಿದ್ದ ಆರೋಗ್ಯ ಇಲಾಖೆ ಅಕ್ಷರಶಃ ಅನಾಥವಾಗಿದೆ! ಆರೋಗ್ಯ ಸಚಿವರೂ ಇಲ್ಲ, ಇರುವ ಉನ್ನತಾಧಿಕಾರಿಗಳೂ ಕೊರೊನಾ ವೈರಸ್‌ ಪೀಡಿತರಾಗಿದ್ದಾರೆ.
Vijaya Karnataka Web Shivraj Singh Chouhan


ಪ್ರಧಾನಿ ಮೋದಿ ಅವರು ಲಾಕ್‌ಡೌನ್‌ ಘೋಷಿಸುವ ಮೊದಲು ಕಾಂಗ್ರೆಸ್‌ ಸರಕಾರವನ್ನು ಕೆಡವಿ ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಮುಖ್ಯಮಂತ್ರಿಯಾಗಿ ಮಾರ್ಚ್‌ 23ರಂದು ಅಧಿಕಾರ ಸ್ವೀಕರಿಸಿದ್ದರು. ಆ ಸಮಯದಲ್ಲಿ ರಾಜ್ಯದಲ್ಲಿ ಸೋಂಕು ಇರಲಿಲ್ಲ. ಆದರೆ, ಕಳೆದ 2-3 ವಾರದಲ್ಲಿ ಅಪಾಯಕಾರಿ ಸೋಂಕಿತ ರಾಜ್ಯವಾಗಿ ಮಧ್ಯ ಪ್ರದೇಶ ಹೊರಹೊಮ್ಮಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯನ್ನು ಮುಂದೆ ನಿಂತು ಮುನ್ನಡೆಸಬೇಕಿದ್ದ ಸಚಿವರೇ ಇಲ್ಲ. ಏಕೆಂದರೆ ಸಿಎಂ ಮಂತ್ರಿ ಮಂಡಲವನ್ನೇ ವಿಸ್ತರಿಸಿಲ್ಲ!

ಕೇರಳದಲ್ಲಿ ಏ.20ರ ನಂತರ ಲಾಕ್‌ಡೌನ್‌ ವಿನಾಯಿತಿ: ವಾಹನಗಳಿಗೆ ಸಮ-ಬೆಸ ವ್ಯವಸ್ಥೆ ಜಾರಿ!

ಐಎಎಸ್‌ ಅಧಿಕಾರಿಗಳು, ವೈದ್ಯರೂ ಸೇರಿದಂತೆ ಆರೋಗ್ಯ ಇಲಾಖೆಯ ಕನಿಷ್ಠ 89 ಸಿಬ್ಬಂದಿಗೆ ಸೋಂಕು ತಗುಲಿದೆ. 40 ಪೊಲೀಸರು ಮತ್ತು ಅವರು ಕುಟುಂಬದ ಸದಸ್ಯರೂ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ದಿನೇ ದಿನೆ ಹೆಚ್ಚುತ್ತಿರುವ ಸೋಂಕಿ­ತರ ಸಂಖ್ಯೆ ತಲೆನೋವು ತಂದಿದೆ. ಜೊತೆಗೆ ಅಧಿಕಾರಿಗಳು, ಸಚಿವರಿಲ್ಲದ ಅನಾಥ ಪ್ರಜ್ಞೆ ಇಲಾಖೆಯನ್ನು ಕಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ