ಆ್ಯಪ್ನಗರ

ರಾಮ ಮಂದಿರ ನಿರ್ಮಾ­ಣಕ್ಕೆ ಟ್ರಸ್ಟ್‌ ರಚನೆ ಅಗತ್ಯವೇ ಇಲ್ಲ ಎಂದ ರಾಮ­ಜನ್ಮಭೂಮಿ ನ್ಯಾಸ್‌!

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾಮ ಮಂದಿರ ನಿರ್ಮಾ­ಣಕ್ಕೆ ಕೇಂದ್ರ ಸರಕಾರ ಟ್ರಸ್ಟ್‌ ರಚನೆಗೆ ಮುಂದಾಗಿರುವ ಹೊತ್ತಿನಲ್ಲಿ ರಾಮ­ಜನ್ಮಭೂಮಿ ನ್ಯಾಸ್‌, ಹೊಸ ಟ್ರಸ್ಟ್‌ನ ಅಗತ್ಯ ಇಲ್ಲ ಎಂದು ಹೇಳಿಕೆ ನೀಡಿದೆ.

Vijaya Karnataka Web 14 Nov 2019, 11:26 am
ಅಯೋಧ್ಯೆ: ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಟ್ರಸ್ಟ್‌ ರಚನೆಗೆ ಮುಂದಾಗಿರುವ ಹೊತ್ತಿನಲ್ಲಿ ರಾಮಜನ್ಮಭೂಮಿ ನ್ಯಾಸ್‌, ಹೊಸ ಟ್ರಸ್ಟ್‌ನ ಅಗತ್ಯವೇ ಇಲ್ಲ ಎಂದು ಹೇಳಿದೆ.
Vijaya Karnataka Web Ramjanmabhoomi Nyas kaaryashala in Ayodhya


ಅಯೋಧ್ಯೆ ಮಹಾ ತೀರ್ಪು: ಸುಪ್ರೀಂ ಕೋರ್ಟ್ ಆದೇಶದ ಪಿನ್ ಟು ಪಿನ್ ಮಾಹಿತಿ ಹೀಗಿದೆ

''ಮಂದಿರ ನಿರ್ಮಾಣ ಕುರಿತು ಈಗಾಗಲೇ ರಾಮಜನ್ಮಭೂಮಿ ನ್ಯಾಸ್‌ ಟ್ರಸ್ಟ್‌ ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ ಹೊಸ ಟ್ರಸ್ಟ್‌ ರಚನೆ ಬೇಕಿಲ್ಲ. ಅಗತ್ಯಕ್ಕೆ ತಕ್ಕಂತೆ ಹಾಲಿ ಇರುವ ಟ್ರಸ್ಟ್‌ಗೆ ಹೊಸ ಸದಸ್ಯರನ್ನು ನೇಮಿಸಿಕೊಂಡು ರೂಪು­ರೇಷೆ ಬದಲಿಸಬಹುದಾಗಿದೆ,'' ಎಂದು ನ್ಯಾಸ್‌ ಟ್ರಸ್ಟ್‌ ನ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್‌ ದಾಸ್‌ ಹೇಳಿದ್ದಾರೆ.

'5 ಎಕರೆ ಭೂ ಭಿಕ್ಷೆ ಬೇಕಿಲ್ಲ'! ಸುಪ್ರೀಂ ಅಯೋಧ್ಯಾ ತೀರ್ಪು ಕೆಣಕಿದ ಓವೈಸಿ ವಿರುದ್ಧ ದೂರು

ಕೇಂದ್ರ ಸರಕಾರ ರಚಿಸಲಿರುವ ರಾಮ ಮಂದಿರ ಟ್ರಸ್ಟ್‌ನಲ್ಲಿ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಸ್ಥಾನ ನೀಡು­ವಂತೆ ವಿಶ್ವ ಹಿಂದೂ ಪರಿಷತ್‌ ಒತ್ತಾಯಿ­ಸಿದೆ. ಹಿಂದೆ ಕೇಂದ್ರ ಸಚಿವರಾಗಿದ್ದ ಕೆ.ಎಂ. ಮುನ್ಷಿ ಅವರು ಹೇಗೆ ಸೋಮ­ನಾಥ ಮಂದಿರ ಟ್ರಸ್ಟ್‌ನ ಭಾಗವಾಗಿ­ದ್ದರೋ ಅದೇ ರೀತಿ ಈಗ ಉದ್ದೇಶಿತ ರಾಮ ಮಂದಿರ ಟ್ರಸ್ಟ್‌ನಲ್ಲಿಅಮಿತ್‌ ಶಾ, ಯೋಗಿ ಆದಿತ್ಯನಾಥ್‌ ಅವರಿಗೆ ಸ್ಥಾನ ನೀಡಬೇಕು. ಇದಕ್ಕೆ ರಾಮಜನ್ಮಭೂಮಿ ನ್ಯಾಸ್‌ ಮುಖ್ಯಸ್ಥ ನೃತ್ಯ ಗೋಪಾಲ್‌ದಾಸ್‌ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ವಿಎಚ್‌ಪಿ ಆಗ್ರಹಿಸಿದೆ.

ತೀರ್ಪು ಬಂದ 48 ಗಂಟೆಗಳ ನಂತರ ಅಯೋಧ್ಯೆಯಲ್ಲಿ ಪರಿಸ್ಥಿತಿ ಹೀಗಿದೆ...

ನಾಮಜಪ ಸಂಪನ್ನ: ಅಯೋಧ್ಯೆಯ ಕರ­ಸೇವಕಪುರಂನಲ್ಲಿರುವ ರಾಮಜನ್ಮ­ಭೂಮಿ ನ್ಯಾಸ್‌ ಸ್ಥಾಪಿತ ನಿರ್ಮಣ ಕಾರ್ಯಶಾಲಾದಲ್ಲಿ 1990ರಿಂದಲೂ ರಾಮ ಮಂದಿರ ನಿರ್ಮಾಣ ಕೆತ್ತನೆ ಕಾರ್ಯಗಳು ನಡೆಯುತ್ತಿವೆ. ಕಳೆ­ದೊಂದು ವರ್ಷದಿಂದ ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಅಖಂಡ ಸೀತಾ ರಾಮ ನಾಮಜಪ ನಡೆಸಿಕೊಂಡು ಬರ­ಲಾಗುತ್ತಿತ್ತು. ಕಳೆದ ಶನಿವಾರ ಸುಪ್ರೀಂ ತೀರ್ಪು ಹೊರಬಿದ್ದ ಬಳಿಕ ಹಿಂದೂ ಭಕ್ತರು ಪುಳಕಿತಗೊಂಡು ಕೆತ್ತನೆ ಶಿಲ್ಪಗಳ ಮುಂದೆ ದೀಪ ಬೆಳಗಿ ನಾಮಜಪ ಮುಕ್ತಾಯಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ